ಹಳಿಯಾಳ : ಕೆರಳದ ಶಬರಿ ಮಲೆ ದೇವಸ್ಥಾನದ ಧರ್ಮ ಪರಂಪರೆಯ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕೂಡಲೇ ಕಾನೂನು ನಿಯಮ ರೂಪಿಸಬೇಕು ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಅಲ್ಲಿ ಪ್ರತಿಭಟನೆ ಮಾಡುತ್ತಿರುವ ಭಕ್ತರ ಮೇಲೆ ಅನಾವಶ್ಯಕವಾಗಿ ಹೆರಿದ ಪ್ರಕರಣಗಳನ್ನು ತಕ್ಷಣ ರದ್ದು ಪಡಿಸಬೇಕೆಂದು ಹಿಂದೂ ಜನಜಾಗೃತಿ ಸಮೀತಿ ಆಗ್ರಹಿಸಿದೆ.
ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರು, ವಿವಿಧ ಹಿಂದೂ ಪರ ಸಂಘಟನೆಗಳೊಂದಿಗೆ ಆಗಮಿಸಿದ ಹಿಂದೂ ಜನಜಾಗೃತಿ ಸಮೀತಿಯವರು ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಶಬರಿ ಮಲೆಯ ರಕ್ಷಣೆ ಮಾಡುವ ಹಾಗೂ ಅಲ್ಲಿ ಭಕ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಕೂಲಡೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಹಿಂದೂಗಳ ಭಾವನೆಗಳು ಕೆರಳುವ ಮೊದಲು ಸರ್ಕಾರ ಸನ್ನಿಲಿಯೋನ ನಟಿಸುತ್ತಿರುವ ವೀರಮ್ಮ ದೇವಿ ಚಲನ ಚಿತ್ರದ ಚಿತ್ರಿಕರಣವನ್ನು ತಕ್ಷಣವೇ ಸ್ಥಗೀತಗೊಳಿಸಬೇಕು. ಕೆರಳದ ಚರ್ಚಿನಲ್ಲಿ ನನ್ ಮೇಲಾಗಿರುವ ಬಲತ್ಕಾರ ಪ್ರಕರಣದಲ್ಲಿನ ಮುಖ್ಯ ಸಾಕ್ಷಿದಾರರಾಗಿದ್ದ ಪಾದರ್ ಕುರೊಯಾಕೋಸ್ ಇವರ ಸಂಶಯಾಸ್ಪದ ಮರಣದ ತನಿಖೆ ಮಾಡಬೇಕು ಹಾಗೂ ಆರೋಪಿ ಬಿಶಪ್ ಫ್ರೈಂಕೋ ಮುಲಕ್ಕಲ್ ಇವರ ಜಾಮೀನನ್ನ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಸಹ ಮಾಡಲಾಗಿದೆ.
ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಂಜುನಾಥ, ನಿಥಿನ ಡಾಂಗೆ, ಅಭಿ ಮಸೂರಕರ, ಮೊಹಿನಿ ಹೊಂದುರಕರ, ರಾಮಸೇನೆ ಕಾರ್ಯಕರ್ತರು, ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಇತರರು ಇದ್ದರು.
Leave a Comment