ಹೊನ್ನಾವರ: ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ವಿದ್ಯುತ್ ತಂತಿ ಎಳೆದ ಕಂಬವೊಂದು ಮುರಿದು ಆಗೋ ಈಗೋ ಬೀಳುವ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕಂಡಿರುವ ಕಾಮತ್ ಹೊಟೇಲ್ ಪಕ್ಕದಿಂದ ಮಾರುಕಟ್ಟೆಗೆ ಹೋಗುವ ರಸ್ತೆಯಲ್ಲಿರುವ ಕಂಬ ಕಳೆದ ಕೆಲದಿನಗಳ ಹಿಂದೆ ಯಾವುದೋ ವಾಹನ ಗುದ್ದಿದ ಪರಿಣಾಮ ಮುದಿದೆ ಮಾತ್ರವಲ್ಲ ಮೇಲೆ ಬಿಗಿದ ತಂತಿಯ ಬಲದಿಂದ ವಾಲಿಕೊಂಡು ನಿಂತಿದೆ ಹಗಲಿರುಳೆನ್ನದೆ ವಾಹನಗಳು ಪಾದಾಚಾರಿಗಳು ಹಾಗೂ ಶಾಲಾ ಮಕ್ಕಳು ಸಂಚರಿಸುತ್ತಿರುವ ಪ್ರದೇಶವಾಗಿದ್ದು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಿದ್ದರೂ ಹೆಸ್ಕಾಂನವರು ದುರಸ್ಥಿಗೆ ಮುಂದಾಗಿರುವುದು ಯಾಕೆನ್ನುವುದು ಅರ್ಥವಾಗತತ್ತಿಲ್ಲ ಎನ್ನುತ್ತಿದ್ದಾರೆ ಸಾರ್ವಜನಿಕರು.
ಕಂಬಕ್ಕೆ ಗುದ್ದಿದ ವಾಹನ ಮಾಲಿಕರಿಂದ ಹೆಸ್ಕಾಂನವರು ದಂಡ ಕಟ್ಟಿಸಿಕೊಂಡಿರುವುದಾಗಿ ಸುತ್ತಲಿನವರು ಹೇಳುತ್ತಿದ್ದಾರೆ. ದಂಡ ಕಟ್ಟಿಸಿಕೊಳ್ಳುವಲ್ಲಿ ತೋರಿದ ಕಾಳಜಿಯನ್ನು ಕಂಬ ಬದಲಾಯಿಸುವಲ್ಲಿ ತೋರಿದ ಕಾಳಜಿಯನ್ನು ಕಂಬ ಬದಲಾಯಿಸುವಲ್ಲಿ ತೋರುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.
Leave a Comment