ಹಳಿಯಾಳ:- 3 ತಿಂಗಳ ಗರ್ಭಿಣಿ ಮಹಿಳೆಯೊರ್ವಳು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಿಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ದುರ್ಘಟನೆ ಹಳಿಯಾಳದಲ್ಲಿ ಶನಿವಾರ ಸಾಯಂಕಾಲ ನಡೆದಿದೆ.
ಶುಕ್ರವಾರ ಸಾಯಂಕಾಲ ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ಪವಿತ್ರಾ ಪಾಟೀಲ್ (15) ತಾಯಿ ಬೈದು ಬುದ್ದಿವಾದ ಹೇಳಿದ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಳು ಪ್ರಕರಣ ಇನ್ನೂ ಹಸಿಯಾಗಿರುವಾಗಲೇ
ಎರಡನೆ ದಿನ ಶನಿವಾರ ಸಾಯಂಕಾಲ
ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯ ಕ್ರಿಶ್ಚಿಯನ್ ಸಮುದಾಯದ ಸ್ಮಶಾನದ ಎದುರು ಆಶ್ರಯ ಮನೆಯಲ್ಲಿ ವಾಸವಿದ್ದ ಗೃಹಿಣಿ ಸಿಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಭಾಗ್ಯಾಶ್ರೀ ಈರಣ್ಣಾ ಹಟ್ಟಿಹೊಳಿ (19) ಮೃತ ದುರ್ದೈವಿ ಗರ್ಭಿಣಿಯಾಗಿದ್ದಾಳೆ. ಮೂಲತಃ ಗದಗ ನವಳಾದ ಭಾಗ್ಯಶ್ರೀ ಕಳೆದ ವರ್ಷವಷ್ಟೇ ಈರಣ್ಣ ಎನ್ನುವವನನ್ನು ವರಿಸಿದ್ದಳು.
ಗಂಡ ಮಹಾರಾಷ್ಟ್ರದಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದು. ಮನೆಯಲ್ಲಿ ಅತ್ತೆಯೊಂದಿಗೆ ವಾಸವಿದ್ದಳು ಎನ್ನಲಾಗಿದೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈ ಕೃತ್ಯ ನಡೆದಿದ್ದು. ಅತ್ತೆ ಮನೆಗೆ ಬಂದು ಬಾಗಿಲು ಬಡಿದಾಗ ಸೊಸೆ ಬಾಗಿಲು ತೆರೆಯದೆ ಇದ್ದಾಗ ಕಿಡಕಿಯ ಜಾಲರಿ ಹರಿದು ನೋಡಿ ಬಳಿಕ ಬಾಗಿಲು ಮುರಿದು ಒಳ ಹೊದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಹಳಿಯಾಳ ಸಿಪಿಐ ಲೋಕಾಪುರ ಬಿಎಸ್, ಪಿಎಸ್ ಐ ಆನಂದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದು. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಕಪಕ್ಕದ ಜನರ ಮಾಹಿತಿಯಂತೆ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಏಕಾ ಎಕಿ ಹುಡುಗಿ ಯಾಕೆ ಈ ರೀತಿಯ ಕೃತ್ಯ ಮಾಡಿಕೊಂಡಳು ಎಂದು ಹಲವಾರು ಸಂದೇಹಗಳು ಮೂಡಿದ್ದು ಪೋಲಿಸರ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಹೊರಬಿಳಬೇಕಿದೆ.
Leave a Comment