ಹೊನ್ನಾವರ ತಾಲೂಕಿನ ಅಪ್ಸರಕೊಂಡ ಸಮುದ್ರದ ತೀರದ ವಿಕ್ಷಣಕ್ಕೆ ಶಿವಮೊಗ್ಗ ಗ್ಯಾಲಗರ್ ಕಂಪನಿಯ ವತಿಯಿಂದ ಒಂದು ದಿನದ ಫಿಕ್ನಿಕಗೆ ಆಗಮಿಸಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಭದ್ರಾವತಿಯ ರಘುವೀರ ಕಡಿಯಪ್ಪ ಎನ್ನುವ 26 ವರ್ಷದ ಯುವಕ ಸ್ನೇಹಿತರೆಲ್ಲರೂ ಬಸ್ಸನ್ನು ಹತ್ತಲು ತೆರಳಿದಾಗ ಪುನಃ ನೀರಿಗೆ ಆಗಮಿಸಿದಾಗ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ್ದಾನೆ. ಜೊತೆಯಲ್ಲಿದ್ದವರು ದೊಡ್ಡದಾಗಿ ಕಿರುಚಿದಾಗ ಗ್ರಾಮಸ್ಥರಿಗೆ ವಿಷಯ ತಿಳಿದು ಗ್ರಾಮದವರಾದ ಮಂಜುನಾಥ, ರಾಮಚಂದ್ರ, ರಾಜೇಶ, ಯಶ್ವಂತ, ಮುಂತಾದವರು ಯುವಕನ್ನು ರಕ್ಷಿಸಲು ನೀರಿಗೆ ದುಮಿಕಿದರೂ ಯುವಕನ ಪ್ರಾಣಪಕ್ಷಿ ಹಾರಿಹೊಗಿದ್ದು ಯುವಕನನ ದೇಹವನ್ನು ದಡಕ್ಕೆ ತರುವಲ್ಲಿ ಶ್ರಮವಹಿಸಿದರು. ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಬಂದಾಗ ಗ್ರಾಮಸ್ಥರು ಸರಿಯಾಗಿ ಹೆಲ್ಪರುಗಳು ಇರುವುದಿಲ್ಲ ಆದರಿಂದಲೇ ಇಂತಹ ದುರಂತ ಸಂಭವಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಕಿ ಠಾಣಿಯ ಪಿ.ಎಸ್.ಐ ನೀತು ಗೋಡೆ ಸ್ಥಳಕ್ಕೆ ಆಗಮಿಸಿ ಮಂಕಿ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment