ಹಳಿಯಾಳ:- ರಾಸಾಯನಿಕ ಔಷಧಿ ಹಾಗೂ ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಬೆಳೆಗಳ ಮೇಲೆ ದುಷ್ಪ್ಪರಿಣಾಮ ಬಿದ್ದು ಬೆಳೆಗಳು ಕುಂಠಿತವಾಗುತ್ತವೆ ಅದಕ್ಕೆ ಸಾವಯವ ರಸಗೊಬ್ಬರ ಬಳಸುವಂತೆ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಂಕರ ಕಾಜಗಾರ ರೈತರಿಗೆ ಕರೆ ನೀಡಿದರು.
ಕೃಷಿ ಇಲಾಖೆಯ ಸಭಾಭವನದಲ್ಲಿ ನಡೆದ ವಿಶ್ವ ಮಣ್ಣು ದಿನಾಚಾರಣೆಯ ಅಂಗವಾಗಿ ರೈತರಿಗೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಳಿಯಾಳ ತಾಲೂಕ ಪಂಚಾಯತ ಉಪಾಧ್ಯಕ್ಷೆ ನೀಲವ್ವಾ ಮೋಹನ ಮಡಿವಾಳ ಕಾರ್ಯಕ್ರಮದ ಉದ್ಘಾಟಿಸಿದರು.
ತಾಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಎಮ್.ವಿ.ಘಾಡಿ ಮಾತನಾಡಿ ಹೆಚ್ಚು-ಹೆಚ್ಚು ಜಾನವಾರುಗಳನ್ನು ಸಾಕಿ, ಸಗಣೆ ಗೊಬ್ಬರವನ್ನು ಬಳಸಲು ತಿಳಿಸಿದರು ಅಲ್ಲದೇ ಕೃತಕ/ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ರೈತರು ದೂರವಿರಬೇಕೆಂದು ಕರೆ ನೀಡಿದರು.
ಆತ್ಮಾ ಯೋಜನೆಯ ತಾಲೂಕಾ ಸದಸ್ಯೆ ಶೋಭಾ ರಾವಳ ಮಾತನಾಡಿ ಆದಿಕಾಲದಿಂದ ಬಳುವಳಿಯಾಗಿ ಬಂದಿರುವ ನೈಸರ್ಗಿಕ ಸಂಪನ್ಮೂಲವಾದ “ಮಣ್ಣು” ನಮ್ಮೆಲ್ಲರ ಹೊನ್ನು ಅದನ್ನು ಉತ್ತಮ ರೀತಿಯಲ್ಲಿ ಜೋಪಾನವಾಗಿ ಇಟ್ಟುಕೊಳ್ಳಬೇಕೆಂದರು.
ಕೃಷಿ ವಿಶ್ವ ವಿದ್ಯಾಲಯದ ಕೃಷಿ ವಿಜ್ಞಾನಿಗಳಾದ ಡಾ|| ಎಚ್.ವೈ.ಪಾಟೀಲ್ ಹಾಗೂ ಡಾ|| ಸತೀಶಗುನಗಾರವರು ಮಣ್ಣುಆರೈಕೆ, ಲಘು ಪೋಷಕಾಂಶಗಳ ಬಳಕೆ,ಮಣ್ಣುಆರೋಗ್ಯಚೀಟಿಯ ಪಲಿತಾಂಶವನ್ನು ಬಳಸುವ ರೀತಿ, ಹಾಗೂ ಉತ್ತಮ ಇಳುವರಿಯನ್ನು ಪಡೆಯುª Àಕುರಿತು ರೈತರಿಗೆ ಸವಿಸ್ಥಾರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ, ವನಿತಾ ಕಡೇಮನಿ, ಸುಧಾಕರ ಎಮ್.ಸಿ., ರಾಮಕೃಷ್ಣಾ ಸುಬ್ಬಣ್ಣವರ ಇದ್ದರು.
Leave a Comment