ಹೊನ್ನಾವರ ಪಟ್ಟಣದ ರಸ್ತೆ ದುರವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕರವೇಯಿಂದ ಮನವಿ
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಒಂದಾದ ಕಿಂತಾಲ್ಕೇರಿಯಲ್ಲಿ ಪೈಪಲೈನ್ ದುರಸ್ತಿ ಮಾಡುವ ಉದ್ದೇಶದಿಂದ ರಸ್ತೆಯನ್ನು ಅಗೆದು ಸರಿಪಡಿಸಲಾಗಿತ್ತು. ಆದರೆ ಪೈಪಲೈನ್ ಮಾಡಿದ ಬಳಿಕ ರಸ್ತೆ ಹಾಗೇಯೇ ಬಿಟ್ಟು ಹೊಗಿರುದರಿಂದ ಸಾರ್ವಜನಿಕರಿಗೆ ಇದರಿಂದ ಸಮಸ್ಯೆ ಆಗುತ್ತಿದೆ. ಇದಲ್ಲದೇ ಒಳಚರಂಡಿ ಉದ್ದೇಶದಿಂದ ಹಲವು ಕಡೆಯಲ್ಲಿನ ರಸ್ತೆಗಳು ಹೊಂಡಮಯವಾಗಿದ್ದು ಸುತ್ತಮುತ್ತಲಿನ ಮನೆಗಳಿಗೆ ಧೂಳಿನಿಂದ ಕೂಡಿದ್ದು ಈ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು, ಈ ಬಗ್ಗೆ ಸಾರ್ವಜನಿಕರ ಮನವಿಗೆ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ. ಇದೇ ರೀತಿ ಮುಂದೆ ಆದಲ್ಲಿ ಅಲ್ಲಿರುವ ರಸ್ತೆಯಲ್ಲಿನ ಧೂಳಿನಿಂದ ಆರೋಗ್ಯ ಹದಗೆಡುವ ಸಂಭವವಿರುವುದರಿಂದ ಪೈಪ್ ಲೈನ್ ಕಾಂಟ್ರೆಕ್ಟ ವಹಿಸಿ ಕೊಂಡವರಿಗೆ ಹಾಗೂ ಒಳಚರಂಡಿ ಗುತ್ತಿಗೆ ಪಡೆದ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ಸೂಚಿಸಬೇಕು. ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಕರವೇ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಿದರು. 15 ದಿನಗಳ ಒಳಗೆ ಈ ರಸ್ತೆಯನ್ನು ಸಂಪೂರ್ಣ ಸರಿಪಡಿಸದೆ ಇದ್ದಲ್ಲಿ ನಾವು ತೀವ್ರವಾಗಿ ಖಂಡಿಸಿ ರಸ್ತೆಯನ್ನು ಬಂದ್ ಮಾಡಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಾಲೂಕ ಘಟಕದ ಅಧ್ಯಕ್ಷ ಮಂಜುನಾಥ ಗೌಡ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜೇಶ ನಾಯ್ಕ, ಯೋಗಿಶ ನಾಯ್ಕ, ವಿಕ್ರಂ ಯಾಜಿ, ಯೋಗಿಸ ಕಾಸರಕೊಡ ಪ್ರಮುಖರು ಉಪಸ್ಥಿತರಿದ್ದರು.
Leave a Comment