• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಬ್ಬು ಸಾಗಿಸುವ ವಾಹನಗಳಿಂದ‌ ಓವರ್ ಲೋಡ್ ಸಂಚಾರಕ್ಕೆ ತೊಂದರೇ ಕ್ರಮ ಕೈಗೊಳ್ಳುವಂತೆ ಹಳಿಯಾಳದ ವಿವಿಧ ಸಂಘಟನೆಗಳಿಂದ‌ ತಾಲೂಡಾಳಿತಕ್ಕೆ ಮನವಿ

December 12, 2018 by Yogaraj SK Leave a Comment

VIVIDHA sanghatanegalinda - pyari kabu sagisuva vahangala viruda -sarvajanika hitasakti arji

ಹಳಿಯಾಳ:- ಹಳಿಯಾಳದಲ್ಲಿ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದು 5 ತಿಂಗಳ ಕಾಲ ನಡೆಯುವ ಈ ಪ್ರಕ್ರಿಯೆ ಸಂದರ್ಭದಲ್ಲಿ ಕಬ್ಬು ಸಾಗಿಸುವ ವಾಹನಗಳಿಂದ ಕಾನೂನು ಉಲ್ಲಂಘನೆಯಾಗುತ್ತಿದ್ದು ತಾಲೂಕಾಡಳಿತ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಹಲವಾರು ಸಂಘಟನೆಯವರು ಜಂಟಿಯಾಗಿ ಸಾರ್ವಜನೀಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಅವರಿಗೆ ಸಲ್ಲಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ, ಜೀಜಾಮಾತಾ ಕ್ಷತ್ರೀಯ ಮರಾಠಾ ಮಹಿಳಾ ಮಂಡಳ, ಹಿರಿಯ ನಾಗರೀಕರ ವೇದಿಕೆ, ಜಯ ಕರ್ನಾಟಕ ಸಂಘಟನೆ, ಹಿರಿಯ ನಾಗರೀಕರ ವೇದಿಕೆ, ಸಿಂಹಕೂಟ ಹಳಿಯಾಳ, ಮಂಜು ಡ್ಯಾನ್ಸ್ ಮತ್ತು ಕರಾಟೆ ಸ್ಕೂಲ್ ರವರು ಜಂಟಿಯಾಗಿ ತಹಶೀಲ್ದಾರ್, ಹಳಿಯಾಳ ಪೋಲಿಸ್ ಇಲಾಖೆ, ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು ಪ್ರತಿನಿತ್ಯ ಕಬ್ಬು ಸಾಗಿಸುವ ನೂರಾರು ವಾಹನಗಳು ಪಟ್ಟಣದ ಮೂಲಕ ಸಾಗುತ್ತವೆ ಈ ಸಂದರ್ಭದಲ್ಲಿ ನಡೆಯುವ ಅಪಘಾತಗಳಿಂದ ಸಾರ್ವಜನೀಕರು, ಶಾಲಾ ಮಕ್ಕಳು, ರಸ್ತೆ ಪಕ್ಕದ ಮನೆಗಳ ಜನರು ತಮ್ಮ ಜೀವವನ್ನು ದೇವರ ಮೇಲೆ ಬಾರ ಹಾಕಿ ಇರುವ ಪರಿಸ್ಥಿತಿಯು ನಿರ್ಮಾಣವಾಗಿರುವುದು ಈವರೆಗೆ ನಡೆದಿರುವ ಹಲವು ದುರ್ಘಟನೆಗಳೇ ಇದಕ್ಕೆ ಸಾಕ್ಷಿಯಾಗಿದ್ದು ಇವುಗಳನ್ನು ತಡೆಯುವುದು ಅತ್ಯಾವಶ್ಯಕವಾಗಿದೆ ಎಂದಿದ್ದಾರೆ.
ಅದಕ್ಕಾಗಿ ಎಲ್ಲಾ ಸಂಘಟನೆಗಳು ಒಟ್ಟೂಗೂಡಿ ಈ ಸಮಸ್ಯೆಗಳನ್ನು ಬಗೆಹರಿಸಲು ನಾವುಗಳು ಕೆಲವು ಬೇಡಿಕೆಗಳನ್ನು ಇಡುತ್ತಿದ್ದು ಕೂಡಲೇ ಸಂಬಂಧಪಟ್ಟವರು ಈ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿದಿಗಿಳಿದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಬೇಡಿಕೆಗಳು:- ಟ್ರಾಕ್ಟರ್/ಟ್ರಕ್ಕ ಮೇಲೆ ಒವರ ಲೋಡ್ ಹಾಕದಂತೆ ನಿರ್ಭಂದ ವಿಧಿಸುವುದು, ಆರ್.ಟಿ.ಓ ಪರ್ಮಿಟ್ ಮತ್ತು ನಿಯಮಗಳಂತೆ ವಾಹನಗಳನ್ನು ವ್ಯವಸ್ಥಿತವಾಗಿ ಇಡುವುದು. ಊರ ಒಳಗಡೆ ಎಲ್ಲೆಂದರಲ್ಲಿ ಮುಖ್ಯವಾಗಿ ಪುಟ್‍ಪಾತಗಳಲ್ಲಿ ವಾಹನಗಳನ್ನು ನಿಲ್ಲಿಸಲು ನಿರ್ಭಂದಿಸುವುದು. ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮುಖ್ಯ ರಸ್ತೆಯಿಂದ ಅವರ ಕಾರ್ಖಾನೆಗಳಿಗೆ ಹೋಗುವ ದಾರಿಯನ್ನು ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುವುದು. ಟ್ರಾಕ್ಟರ ಹಾಗೂ ಟ್ರಕ್ಕಗಳನ್ನು ರಸ್ತೆಬದಿ ರಾತ್ರಿ ವೇಳೆಯಲ್ಲಿ ಅವಘಡವಾಗದಂತೆ ನಿಲ್ಲಿಸಲು ಸೂಚಿಸುವುದು. ಟ್ರಾಕ್ಟರ ಟೇಲರ ಹಾಗೂ ಟ್ರಕ್ಕಗಳಿಗೆ ಕಡ್ಡಾಯವಾಗಿ ರೆಡಿಯಮ್ ಪಟ್ಟಿ ಅಳವಡಿಸುವುದು.
ಟ್ರಾಕ್ಟರಗಳು ಹಳಿಯಾಳ ನಗರದಲ್ಲಿ ಸಂಚರಿಸುವಾಗ ಧ್ವನಿ ಮುದ್ರಕ (ಟೇಪ ರಿಕಾರ್ಡ) ಬಳಸದಂತೆ ನಿರ್ಭಂದಿಸುವುದು. ಕಾರ್ಖಾನೆಯಿಂದ ಹೊರಗೆ ಹಾಕುತ್ತಿರುವ ಹಾರುಬೂದಿ (ಡಸ್ಟ) ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರವಾಗಿದೆ ಈ ಸಮಸ್ಯೆಯನ್ನು ನಿವಾರಿಸಲು ಕಾರ್ಖಾನೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಗೆ ಸಾಗುವ ಹಾದಿಯಲ್ಲಿ ಶಾಲಾ-ಕಾಲೇಜುಗಳು ಇರುವುದರಿಂದ ಶಾಲಾ ಆರಂಭ ಹಾಗೂ ಬಿಡುವ ವೇಳೆಯಲ್ಲಿ ಕಬ್ಬು ಸಾಗಿಸುವ ವಾಹನಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಆಗ್ರಹಿಸಲಾಗಿದೆ.
ಕರವೇ ಅಧ್ಯಕ್ಷ ಬಸವರಾಜ ಬೇಂಡಿಗೇರಿಮಠ, ಜೀಜಾಮಾತಾ ಸಂಘ ಅಧ್ಯಕ್ಷೆ ಮಂಗಲಾ ಕಶೀಲಕರ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ಪ್ರಮುಖರಾದ ಚಂದ್ರಕಾಂತ ದುರ್ವೆ, ಜಿಎಸ್ ಗಂಗಾಧರ, ಭಾರತಿ ಬಿರ್ಜೆ, ಮಹೇಶ ಆನೆಗುಂದಿ, ವಿನೋದ ದೊಡ್ಮನಿ ಮೊದಲಾವರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಓವರ್ ಲೋಡ್ ಸಂಚಾರ, ಕಬ್ಬು ಸಾಗಿಸುವ ವಾಹನ‌, ಕರ್ನಾಟಕ ರಕ್ಷಣಾ ವೇದಿಕೆ, ಕೈಗೊಳ್ಳುವಂತೆ ಹಳಿಯಾಳದ, ಜೀಜಾಮಾತಾ ಕ್ಷತ್ರೀಯ ಮರಾಠಾ, ಟ್ರಕ್ಕಗಳನ್ನು ರಸ್ತೆಬದಿ ರಾತ್ರಿ ವೇಳೆಯಲ್ಲಿ ಅವಘಡವಾಗದಂತೆ, ಟ್ರಾಕ್ಟರ, ತಾಲೂಡಾಳಿತಕ್ಕೆ ಮನವಿ, ತೊಂದರೇ ಕ್ರಮ, ವಿವಿಧ ಸಂಘಟನೆಗಳಿಂದ‌, ಸಾಗಿಸುವ ವಾಹನ, ಸಾರ್ವಜನೀಕ ಹಿತಾಸಕ್ತಿ ಅರ್ಜಿ, ಹಳಿಯಾಳದ ಹುಲ್ಲಟ್ಟಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...