ಹೊನ್ನಾವರ: ಜನರಿಗೆ ಪ್ರೀತಿ ವಿಶ್ವಾಸದ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಛಾಯಾಚಿತ್ರಗ್ರಾಹಕರು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಹೊನ್ನಾವರ ತಾಲೂಕು ಸ್ಟುಡಿಯೋ ಪೊಟೋಗ್ರಾಪರ್ಸ್ ಮತ್ತು ವಿಡಿಯೋ ಗ್ರಾಪರ್ಸ್ ಸಂಘದ 11 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಫೋಟೋಗ್ರಾಫರ್ ಆಗಲು ಸಾಧ್ಯವಿಲ್ಲ. ಗುಣಮಟ್ಟದ ಫೋಟೋ ಸಿಗಬೇಕಾದರೆ ಛಾಯಾಗ್ರಾಹಕರು ಬೇಕು. ಎಲ್ಲ ಸಮಯದಲ್ಲಿ ನಗುಮುಖದ ಸೇವೆ ನೀಡುವುದರ ಮೂಲಕ ಅವರ ಸಂತೋಷದ ಸಮಯವನ್ನು ಸದಾ ಕಾಲ ನೆನಪಿಡುವ ಫೋಟೊ ಕ್ಲಿಕಿಸುವ ಪೋಟೋಗ್ರಾಫರ್ ಜೀವನ ತೀರಾ ಕಷ್ಟದಲ್ಲಿದೆ. ವೃತ್ತಿರಂಗದಲ್ಲಿನ ಪೈಪೋಟಿಯಿದೆ. ಸಂಘಟಕರಾಗಿ ನಿಮ್ಮಲ್ಲಿರುವ ಕಲೆ ಹಾಗೂ ಗುಣಮಟ್ಟವನ್ನು ಬಳಸಿಕೊಂಡು ನಷ್ಟವಾಗದ ರೀತಿಯಲ್ಲಿ ನಿಮ್ಮ ವೃತ್ತಿಯನ್ನು ನಿರ್ವಹಿಸಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸೇಪ್ ಸ್ಟಾರ್ ಗ್ರೂಪ್ ಚೇರ್ಮನ್ ಜಿ.ಜಿ.ಶಂಕರ ಮಾತನಾಡಿ ಛಾಯಾಗ್ರಾಹಕರು ಹಗಲಿರುಳೆನ್ನದೆ ತಮ್ಮನ್ನು ಸವಾಲುಗಳಿಗೆ ಒಡ್ಡಿಕೊಳ್ಳುತ್ತಾರೆ ಅನಿರೀಕ್ಷಿತ ಅಪಾಯಗಳನ್ನು ಎದುರಿಸುತ್ತಾರೆ. ಇಷ್ಟಾಗಿಯೂ ಅವರ ಜೀವಕ್ಕೆ, ಜೀವನಕ್ಕೆ ಸರ್ಕಾರದಿಂದ ಯಾವ ಭದ್ರತೆಯೂ ಇಲ್ಲವಾಗಿದೆ. ಪಿಂಚಣ , ಜೀವವಿಮೆ, ಭವಿಷ್ಯನಿಧಿಯನ್ನು ಸರ್ಕಾರದಿಂದ ಕೊಡಿಸುವಂತ ಕೆಲಸವಾಗಬೇಕು ಎಂದರು.
ಹಿರಿಯ ಛಾಯಾಗ್ರಾಹಕ ಎನ್. ಗಣಪತಿ ಪ್ರಾಸ್ಥಾವಿಕ ಮಾತನಾಡಿ, ಹೊನ್ನಾವರ ಫೋಟೋಗ್ರಾಫರ್ ಸಂಘವು ಹಲವಾರು ಅಡೆತಡೆಗಳ ನಡುವ ಸ್ಥಾಪನೆಗೊಂಡು, ಇಂದು ಹಿರಿಯ ಮತ್ತು ಕಿರಿಯ ಛಾಯಾಗ್ರಾಕರನ್ನೊಳಗೊಂಡು ಉತ್ತಮ ಸಂಘಟನೆಯಾಗಿ ಬೆಳೆದಿದೆ. ರಾಜ್ಯ ಸಂಘಟನೆಯಿಂದ ಹಲವಾರು ಯೋಜನಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದೇವೆ ಎಂದರು.
ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಂ.ಎನ್.ನಾಯ್ಕ ಬಳಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಛಾಯಾಗ್ರಾಹಕರಾದ ಪಿ.ಕೆ.ಹೆಗಡೆ, ಕೇಶವ ಮೇಸ್ತ, ಈಶ್ವರ ಹರಿಕಂತ್ರ ಹಾಗೂ ಸಾಧನೆ ಮಾಡಿದ ಸದಸ್ಯರ ಮಕ್ಕಳ ಪ್ರತಿಭೆ ಪೋತ್ಸಾಹಿಸಲು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೆಪಿಎ ಜಂಟಿ ಕಾರ್ಯದರ್ಶಿ ಸುರೇಶ ಹೊನ್ನಾವರ, ಹಿರಿಯ ಛಾಯಾಗ್ರಾಹಕ ಮಂಜು ಆಚಾರ್ಯ ಉಪಸ್ಥಿತರಿದ್ದರು. ಮೋಹನ ನಾಯ್ಕ ಸ್ವಾಗತಿಸಿದರು. ರಾಜೇಶ ಶೆಟ್ಟಿ ವಂದಿಸಿದರು. ಕುಮಾರ ಮಯೂರ .ಪಿ.ಹೆಗಡೆ ಪ್ರಾರ್ಥನಾಗೀತೆ ಹಾಡಿದರು. ಕುಮಾರಿ ಸಿಂಚನಾ ರಮೇಶ ನಾಯ್ಕ ಭರತನಾಟ್ಯ ಪ್ರದರ್ಶನ ನೀಡಿದರು.
Leave a Comment