ಹಳಿಯಾಳ:- “ಶ್ರದ್ಧೆ, ಭಕ್ತಿ, ನಂಬಿಕೆಗಳಿರುವಲ್ಲಿ ಭಗವಂತ ನೆಲೆಸಿರುತ್ತಾನೆ, ಸರ್ವವ್ಯಾಪಿ ಭಗವಂತ ಪ್ರಕೃತಿಯ ಸಂಚಾಲಕ.ಭಗವಂತನ ಪ್ರಾರ್ಥನೆ, ನಾಮಸ್ಮರಣೆಗಳಿಂದ ಉತ್ತಮ ಸಕಾರಾತ್ಮಕ ಚಿಂತನೆಗಳು ನಮ್ಮಲ್ಲಿಮೂಡುತ್ತವೆ”.ಎಂದು ಹಳಿಯಾಳದ ಪವಾಡ ಮಾತೆ ಚರ್ಚ ಫಾದರ ಸಂತೋಷ ನೋರೊನ್ಹಾ ಹೇಳಿದರು.
ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ವಿ.ವ್ಹಿ.ದೇಶಪಾಂಡೆ ಸ್ಕೂಲ್ಆಫ್ಎಕ್ಸಲೆನ್ಸನ್ ಶಾಲೆಯಲ್ಲಿ ಆಯೋಜಿಸಿದ ಕ್ರಿಸ್ಮಸ್ ಹಬ್ಬ ಆಚರಣೆಯ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ಸಿ.ಬಿ. ಪಾಟೀಲ ಮಾತನಾಡಿ ಈ ವರ್ಷದ ಕ್ರಿಸ್ಮಸ್ ಹಬ್ಬವೂ ಎಲ್ಲರಿಗೂ ಆನಂದ ಹಾಗೂ ಯಶಸ್ಸನ್ನು ತರಲಿ” ಎಂದು ಶುಭ ಹಾರೈಸಿದರು.
ಶಾಲೆಯ ವಿದ್ಯಾರ್ಥಿಗಳು ಕ್ರಿಸ್ಮಸ್ ಹಬ್ಬದ ಆಚರಣೆಯ ಉದ್ದೇಶ, ಮಹತ್ವ ಹಾಗೂ ವಿಶೇಷತೆಯ ಕುರಿತು ಕಿರು ನಾಟಕವನ್ನು ಪ್ರಸ್ತುತ ಪಡಿಸಿದರು. ಸಾಂಥಾಕ್ಲಾಸ್ ವೇಷಧಾರಿಗಳಾದ ವಿದ್ಯಾರ್ಥಿಗಳು ಸಿಹಿಯನ್ನು ಹಂಚಿ, ಉಡುಗೊರೆಯನ್ನು ನೀಡಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿಗಳಾದ ಶ್ರೇಯಾ ಯಬ್ರೇರ, ಮೋನಾಲಿಸಾ ಮೇನೆಂಜಿಸ್ ಹಾಗೂ ವರ್ಜಿನಿಯಾ ಗೋನ್ಸಾಲ್ವಿಸ್ ಕಾರ್ಯಕ್ರಮ ನಿರ್ವಹಿಸಿದರು.
Leave a Comment