ಹಳಿಯಾಳ :- ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಿದಿ ಬದಿ ತರಕಾರಿ, ಹೂ, ಹಣ್ಣು ಇನ್ನಿತರೇ ವ್ಯಾಪಾರಸ್ಥರನ್ನು ತೆರವುಗೊಳಿಸಲು ಮುಂದಾದ ಹಳಿಯಾಳ ಪುರಸಭೆಯ ವಿರುದ್ದ ಬಿದಿ ಬದಿಯ ಎಲ್ಲ ಸ್ಥರದ ವ್ಯಾಪಾರಸ್ಥರು ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೆ ಕಾರಣ :-
ಇತ್ತೀಚಿಗೆ ಪಟ್ಟಣದಲ್ಲಿ ಸಂಚಾರ(ಟ್ರಾಫಿಕ್) ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೀತಿ ಮಿರಿರುವ ವಾಹನಗಳ ಸಂಖ್ಯೆ ಹಾಗೂ ಹಳಿಯಾಳ ಕಬ್ಬು ಸಾಗಿಸುವ ಟ್ರಾಕ್ಟರ್, ಟ್ರಕ್ಗಳ ಅನಿಯಮಿತ ಸಂಚಾರದಿಂದ ಟ್ರಾಫಿಕ್ ಸ್ಥಿತಿ ಅಲ್ಲೋಲ ಕಲ್ಲೊಲವಾಗಿದೆ. ಈ ಕಾರಣ ಪಟ್ಟಣದ ಎಲ್ಲ ಸಂಘಟನೆಗಳವರು ತಹಶೀಲ್ದಾರ್ ಅವರೊಂದಿಗೆ ನಾಲ್ಕಾರು ಬಾರಿ ಚರ್ಚೆ ನಡೆಸಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದರು. ಕಾರಣ ಪಟ್ಟಣದಲ್ಲಿ ಬಿದಿ ಬದಿ, ಫುಟ್ ಪಾತ್, ರಸ್ತೆ ಅತಿಕ್ರಮಿಸಿ ವ್ಯಾಪಾರ ನಡೆಸುವವರನ್ನು ತೆರವುಗೊಳಿಸಲು ಸೂಚಿಸಲಾಗಿತ್ತು. ಇದರಿಂದ ಪುರಸಭೆಯವರು ತೆರವು ಕಾರ್ಯಾಚರಣೆಗೂ ಇಳಿದಿದ್ದರು. ಇದೆ ಶನಿವಾರ ವ್ಯಾಪಾರಸ್ಥರು ಪ್ರತಿಭಟನೆ ನಡೆಸಲು ಕಾರಣವಾಗಿದೆ.
ಮಾರುಕಟ್ಟೆ ಬಂದ್ ಎಚ್ಚರಿಕೆ :-
ಪುರಸಭೆಯವರು ತಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಬಂದು ದೌರ್ಜನ್ಯ ನಡೆಸುವ ಮೂಲಕ ತಮ್ಮ ವ್ಯಾಪಾರವನ್ನು ಮೊಟಕುಗೊಳಿಸುತ್ತಿದ್ದಾರೆಂದು ಪುರಸಭೆಯ ವಿರುದ್ದ ಆಕ್ರೋಶಗೊಂಡ ವ್ಯಾಫಾರಸ್ಥರು ಶನಿವಾರ ಪ್ರತಿಭಟನಾ ಮೇರವಣ ಗೆ ಮೂಲಕ ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಅಲ್ಲದೇ ನ್ಯಾಯ ಸಿಗುವವರೆಗೆ ಅನಿರ್ಧಿಷ್ಟಾವಧಿಯವರೆಗೆ ತರಕಾರಿ ಮಾರುಕಟ್ಟೆ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದರು.
ಅನಿವಾರ್ಯ :-
ಮನವಿಯಲ್ಲಿ ಹಳಿಯಾಳದ ಬಿದಿ ಬದಿ ವ್ಯಾಪಾರಸ್ಥರಿಗೆ ಸರಿಯಾದ ಮಾರುಕಟ್ಟೆ ಇಲ್ಲ ಹಾಗೂ ಇರುವ ಮಾರುಕಟ್ಟೆಯನ್ನು ತಮ್ಮ ಲಾಭಕ್ಕಾಗಿ ಯಾರ್ಯಾರಿಗೂ ನೀಡಲಾಗಿರುವುದೇ ಬಡವರು ಇಂದು ಬಿದಿಬದಿ ವ್ಯಾಪಾರ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಪುರಸಭೆಯಿಂದಲೇ ಕಾನೂನು ಉಲ್ಲಂಘಟನೆ- ಊಗ್ರ ಹೋರಾಟ ಎಚ್ಚರಿಕೆ :-
ಇನ್ನೂ ಸಂಚಾರ ಸಮಸ್ಯೆಗೆ ಬಿದಿ ಬದಿ ವ್ಯಾಪಾರಸ್ಥರು ಕಾರಣವೆಂದು ಹೇಳುವ ಪುರಸಭೆಯವರೇ ಪಟ್ಟಣದಲ್ಲಿ ಅನೇಕ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿ ಕಟ್ಟಡಗಳನ್ನು ನಿರ್ಮಿಸಿದ್ದು ಅವುಗಳಿಗೆ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಇವುಗಳಲ್ಲಿ ಪ್ರಮುಖವಾಗಿ ಕಾರ್ಪೊರೆಷನ್ ಬ್ಯಾಂಕ್ ಹಾಗೂ ಬಸ್ ನಿಲ್ದಾಣ ಮುಂದೆ ಚರಂಡಿಯ ಮೇಲೆ ಇಕ್ಕಟ್ಟಾದ ಜಾಗೆಯಲ್ಲಿ ವಾಣ ಜ್ಯ ಮಳಿಗೆ ನಿರ್ಮಿಸಲಾಗಿರುವುದು. ಅವೈಜ್ಞಾನಿಕ ಗಾಂಧಿ ಮಾರುಕಟ್ಟೆ ಇದಷ್ಟೇ ಅಲ್ಲದೇ ಬಲಾಢ್ಯರು, ಸ್ಥಿತಿವಂತರು ಕಾನೂನು ಬಾಹಿರವಾಗಿ ಏನು ಮಾಡಿದರು ಕ್ರಮ ಕೈಗೊಳ್ಳದ ಪುರಸಭೆ ಹಾಗೂ ಇತರ ಇಲಾಖೆಯವರು ಬಡವರು, ದಿನ ದಲಿತ ವ್ಯಾಪಾರಸ್ಥರ ಮೇಲೆ ಏಕಾಏಕಿ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ. ಇದು ಹೀಗೆ ಮುಂದುವರೆದರೇ ಊಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸಮಸ್ಯೆ ಪರಿಹರಿಸಲಾಗುವುದು- ಎಲ್ಲರ ಸಹಕಾರ ಬೇಕು- ತಹಶೀಲ್ದಾರ್ :-
ಮನವಿ ಸ್ವೀಕರಿಸಿದ ತಹಶೀಲ್ದಾರ್ ವಿದ್ಯಾಧರ ಗುಳಗಳಿಯವರು ಈ ಬಗ್ಗೆ ಇನ್ನೇರಡು ದಿನಗಳಲ್ಲಿ ಸಭೆ ಕರೆದು ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಬಿದಿ ಬದಿ ಬಡ ವ್ಯಾಪಾರಸ್ಥರಿಗೂ ನ್ಯಾಯ ಒದಗಿಸಿಕೊಡುವ ಕಾರ್ಯವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿಭಟನಾಕಾರರೊಂದಿಗೆ ತಹಶೀಲ್ದಾರ್ ಅವರು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.
Leave a Comment