ಹೊನ್ನಾವರ : ತಾಲೂಕಿನ ಕಾಸರಕೋಡ, ಟೊಂಕದ ಶ್ರೀ ಜೈನ ಜಟಗೇಶ್ವರ ಯುವಕ ಸಮಿತಿ ವತಿಯಿಂದ ಜ.14 ಮತ್ತು 15 ರಂದು 2 ದಿನಗಳ ಕಾಲ ಟೊಂಕ ಉತ್ಸವವನ್ನು ಶ್ರೀ ಜೈನ ಜಟಗೇಶ್ವರ
ಮೈದಾನದಲ್ಲಿ ಆಯೋಜಿಸಲಾಗಿದೆ.
ಮೊದಲ ದಿನದ ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೊಂಕಣ ಖಾರ್ವಿ ಮಹಾಜನ ಸಭಾ ಭಟ್ಕಳ ಘಟಕದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಬಿಜೆಪಿ ಹೊನ್ನಾವರ ಘಟಕದ ಅಧ್ಯಕ್ಷ ಸುಬ್ರಾಯ ನಾಯ್ಕ, ಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಕೇಶ ಫಾಯ್ದೆ ಆಗಮಿಸಲಿದ್ದು ಶ್ರೀ ಕುಮಾರ ಟ್ರಾನ್ಸ್ ಪೋರ್ಟ ಮಾಲೀಕರಾದ ವೆಂಕಟ್ರಮಣ ಹೆಗಡೆ ಅಧ್ಯಕ್ಷತೆ ವಹಿಸುವರು. ಇದೇ ವೇದಿಕೆಯಲ್ಲಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕøತೆ ತಾರಾ ಎಸ್.ಹೆಗಡೆ, ಸಮಾಜ ಸೇವಕಿ ಸರೋಜಾ ಕೆ.ಪವಾರ, ಅವರನ್ನು ಸನ್ಮಾನಿಸಲಾಗುವುದು. ನಂತರ ಮಕ್ಕಳ ಮನರಂಜನಾ ಕಾರ್ಯಕ್ರಮ ಹಾಗೂ ಶಿರಸಿಯ ಹೆಸರಾಂತ ಕದಂಬ ಕಲಾವೇದಿಕೆ ವತಿಯಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು.
ಸಮಾರೋಪ ಸಮಾರಂಭವನ್ನು ಶ್ರೀ ಕ್ಷೇತ್ರ ನೀಲಗೋಡು ಪ್ರಧಾನ ಅರ್ಚಕ ಮಾದೇವ ಸ್ವಾಮಿ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಪಾಂಡುರಂಗ ರಾಮಚಂದ್ರ ಗಾಂವಕರ, ಉಮೇಶ.ಬಿ.ಶೆಟ್ಟಿ, ವಿನಾಯಕ.ಬಿ.ನಾಯ್ಕ, ಆಗಮಿಸಲಿದ್ದು ಜಿ.ಜಿ.ಶಂಕರ ಅಧ್ಯಕ್ಷತೆ ವಹಿಸುವರು. ಸಮಾಜ ಸೇವಕ ತುಕಾರಾಮ ದುರ್ಗಯ್ಯ ತಾಂಡೇಲ, ಹಾಗೂ ಸಾಹಸಿ ಮೀನುಗಾರ ಕೇಶವ ಗೋವಿಂದ ತಾಂಡೇಲ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ರಾಜ್ಯ ಮಟ್ಟದ ಗುಂಪು ನೃತ್ಯ ಸ್ಪರ್ಧೆ ನಡೆಯುವುದು ಎಂದು ಅಧ್ಯಕ್ಷ ಭಾಸ್ಕರ ತಾಂಡೇಲ ತಿಳಿಸಿದ್ದಾರೆ.
Leave a Comment