ಹೊನ್ನಾವರ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಆಳ ಸಮುದ್ರ ಮೀನುಗಾರಿಕಾ ಬೊಟ್ ಹಾಗೂ ನಾಪತ್ತೆಯಾದ 7 ಮೀನುಗಾರರನ್ನು ಶೀಘ್ರವಾಗಿ ಹುಡುಕಿಕೊಡುವಂತೆ ಒತ್ತಾಯಿಸಿ ತಾಲೂಕಾ ಟ್ರೋಲ್ ಬೋಟ್ ಮಾಲಕರ ಸಂಘ ಕಾ¸ರಕೋಡ್ ವತಿಯಿಂದ ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಡಿಸೆಂಬರ್ 14 ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ 7 ಮೀನುಗಾರರನ್ನು ಸುರಕ್ಷಿತವಾಗಿ ಹುಡುಕಿ ಕೊಡುವಂತೆ ರಾಜ್ಯದ ಎಲ್ಲಾ ಮೀನುಗಾರರ ಸಂಘಟನೆಗಳ ಪರವಾಗಿ ಪೊಲೀಸ್ ದೂರು ದಾಖಲಿಸಿ ಮನವಿ ಮಾಡಿದರು ಸಹ ಇದುವರಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಮೀನುಗಾರರ ಕುಟುಂಬದವರು ತೀವೃ ಆತಂಕಿತರಾಗಿದ್ದಾರೆ. ಆದಕಾರಣ ಮೀನುಗಾರರ ಪತ್ತೆಗೆ ರಾಜ್ಯ ಸರ್ಕಾರ ತೀವೃ ಮುತುವರ್ಜಿ ವಹಿಸಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪಕ್ಷಾತೀತ ಹೋರಾಟದ ಅಗತ್ಯವಿದ್ದು ಎಲ್ಲಾ ಮೀನುಗಾರರು ಸಂಕಷ್ಠದಲ್ಲಿದ್ದು ಮೀನುಗಾರರ ನೆರವಿಗೆ ಸರ್ಕಾರ ಬರಬೇಕಾಗಿದೆ ಹಾಗೂ ಸಂಭಂದಪಟ್ಟ ಇಲಾಖೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ತನಿಖೆಯನ್ನು ಆರಂಭಿಸಿ ಶೀಘ್ರವಾಗಿ ಪತ್ತೆ ಹಚ್ಚುವ ಸೂಕ್ತ ವ್ಯವಸ್ಥೆ ಮಾಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ. ಇದು ದೇಶದ ಭದ್ರತೆಯ ಪ್ರಶ್ನೆಯಾಗಿದ್ದು ಸರ್ಕಾರ ಮೀನುಗಾರರನ್ನು ನಿರ್ಲಕ್ಷ್ಯ ಮಾಡದೇ ಅವರ ಬದುಕಿನಲ್ಲಿ ಬಂದೊದಗಿದ ಸಂಕಷ್ಠಕ್ಕೆ ನೆರವಾಗಬೇಕಿದ್ದು ತಕ್ಷಣ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನೇತ್ರತ್ವದ ಮೇರೆಗೆ ಪೊಲೀಸ್ ಇಲಾಖೆ,ಕರಾವಳಿ ಕಾವಲು ಪಡೆ ಸಹಾಯದಿಂದ ಮೀನುಗಾರರ ಪತ್ತೆಗೆ ಅತಿ ಶೀಘ್ರವಾಗಿ ಚಾಲನೆಕೊಟ್ಟು ನಾಪತ್ತೆಯಾದ ಬೊಟ್ ಹಾಗೂ 7 ಮೀನುಗಾರರನ್ನು ಪತ್ತೆ ಹಚ್ಚಿ ಮೀನುಗಾರ ಕುಟುಂಬಗಳಿಗೆ ನ್ಯಾಯ ಒದಗಿ¸ಸಿಕೊಡುವಂತೆ ಮನವಿಯಲ್ಲಿ ಕೋರಿದ್ದಾರೆ. ತಹಸಿಲ್ದಾರ್ ವಿ.ಆರ್ ಗೌಡ ಮನವಿ ಸ್ವಿಕರಿಸಿದರು.
ಈ ಸಂಧರ್ಬದಲ್ಲಿ ತಾಲೂಕಾ ಟ್ರೋಲ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ರಾಮಚಂದ್ರ ಹರಿಕಾಂತ್ರ, ಕಾರ್ಯದರ್ಶಿ ದೇವೇಂದ್ರ ಶೇರುಗಾರ್, ಪರ್ಶಿಯನ್ ಬೊಟ್ ಸಂಘದ ಅಧ್ಯಕ್ಷ ಹಮ್ಜಾ ಪಟೇಲ್, ಕಾರ್ಮೀಕ ಯುನಿಯನ್ ಅಧ್ಯಕ್ಷರು,ಪದಾದಿಕಾರಿಗಳು ಸೇರಿದಂತೆ ಇನ್ನಿತರ ಮೀನುಗಾರ ಮುಖಂಡರು ಹಾಜರಿದ್ದರು.
Leave a Comment