ಹಳಿಯಾಳ:- ಎಟಿಎಮ್ ಕೇಂದ್ರಗಳಲ್ಲಿ ಹಣ ಠೇವಣ ಮಾಡುವ ಸಿಡಿಎಮ್ ಮಷಿನ್ಗಳು ಇದ್ದಲ್ಲಿ ಕೇರ್ ಟೇಕರ್ ಗಳನ್ನು ಕೂಡಲೇ ನೇಮಿಸುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಆಗ್ರಹಿಸಿದೆ.
ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಸಂಘಟನೆ ನಿಯೋಗ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಬಳಿಕ ಸ್ಟೇಟ್ ಬ್ಯಾಂಕ್ ಪ್ರಬಂಧಕರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಹಳಿಯಾಳದಲ್ಲಿ ಕೃಷಿಕರೇ ಹೆಚ್ಚಾಗಿದ್ದು ಸಾಕಷ್ಟು ಜನ ಅನಕ್ಷರಸ್ಥರು ಎಟಿಎಮ್ಗಳನ್ನು ಹೊಂದಿದ್ದು ಸ್ಟೇಟ್ ಬ್ಯಾಂಕ್ನವರು ಕಡ್ಡಾಯವಾಗಿ ಸಿಡಿಎಮ್ ಮಶಿಷನ್ಗಳಲ್ಲಿಯೇ ಹಣ ಠೇವಣ ಮಾಡುವಂತೆ ಸೂಚಿಸುತ್ತಾರೆ ಅಲ್ಲದೇ ಈಗ ಹೊಸ ಎಟಿಎಮ್ ಕಾರ್ಡಗಳು ಬರುತ್ತಿದ್ದು ಅದಕ್ಕೆ ಪಿನ್ ಜೋಡಣೆ ಮಾಡುವುದು ಹಲವರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು ಕೂಡಲೇ ಕೇರ್ ಟೆಕರ್ಗಳನ್ನು ನೇಮಿಸುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ಪ್ರಮುಖರಾದ ಗಣೇಶ ಗೋಸಪ್ಪನವರ, ಸಿರಾಜ್ ಮುನವಳ್ಳಿ, ಬಸವರಾಜ ತಳವಾರ, ಮಹೇಶ ಹುಲಕೊಪ್ಪ, ಮಹಾದೇವ ಚಲವಾದಿ, ಕಿರಣ ಕಮ್ಮಾರ, ವಿನೋದ ಗಿಂಡೆ, ಚೇತನ ಮನಗುಂಡಿ, ಈಶ್ವರ ಗಾಣಗೇರ, ಗೋಪಾಲ ಗರಗ, ಷಣ್ಮುಖ ಚಲವಾದಿ, ಎಂ.ಡಿ. ಕಮ್ಮಾರ, ಸಿಲ್ವೆನ್, ನವೀನ ಕಣಗಲಿ ಇದ್ದರು.
Leave a Comment