ಹೊನ್ನಾವರ .ಸರ್ಕಾರಿ ಪದವಿ ಪೂರ್ವ ಕಾಲೇಜು, ಇಡಗುಂಜಿ, ಹೊನ್ನಾವರ, (ಉ.ಕ) ದಲ್ಲಿ 2018-19 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಳಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ ಎಸ್ ನಾಯ್ಕ “ಉತ್ತಮ ಸಾಧನೆಗೆ ಪ್ರಶಸ್ತಿ ಲಭ್ಯವಾಗುತ್ತದೆ, ವಿದ್ಯಾರ್ಥಿಯೆಂಬ ಗಾಳಿಪಟಕ್ಕೆ ಗುರುವೆಂಬ ಸೂತ್ರಧಾರನ ಅಗತ್ಯವಿದೆ. ಸೂತ್ರವನ್ನು ಕಳೆದುಕೊಂಡ ಗಾಳಿಪಟಕ್ಕೆ ಗುರಿಯಿಲ್ಲ. ಗುರುಗಳ ಸಾರಥ್ಯದಲ್ಲಿ ವಿದ್ಯೆಯೆಂಬ ರಥ ಸಾಗಿದರೆ ನಿಮ್ಮ ಬದುಕು ಬಂಗಾರವಾಗುತ್ತದೆ” ಎಂದು ವಿದ್ಯಾಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯೆ ಶಕುಂತಲಾ ನಾಯಕ ಮಾತನಾಡಿ “ಕಷ್ಟದ ಬದುಕು ವಿದ್ಯಾರ್ಥಿಗಳಿಗೆ ಸುಖದ ಸೋಪಾನವಾಗುತ್ತದೆ, ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿ ಜೀವನವನ್ನು ವ್ಯರ್ಥವಾಗಿ ಕಳೆಯದೆ ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು” ಎಂದರು.
ಇನ್ನೊಬ್ಬ ಅತಿಥಿ ಇಡಗುಂಜಿ ಗ್ರಾಮ ಪಂಚಾಯತಿ ಸದಸ್ಯ ರಾಮ ಗೌಡ ಮಾತನಾಡಿ “ಸಮರ್ಥರ ನಾಯಕತ್ವದಲ್ಲಿ ಸಂಸ್ಥೆ ಶ್ರೇಯೋಭಿವೃದ್ಧಿ ಹೊಂದಿ, ಉತ್ತಮ ಶೈಕ್ಷಣ ಕ ಫಲಿತಾಂಶ ಕಾಣಲಿ” ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಕಿಯ ಪ್ರಾಚಾರ್ಯ ಅರುಣ ನಾಯಕ ಮತ್ತು ಉಪನ್ಯಾಸಕ ಚಂದ್ರಶೇಖರ ಮಡಿವಾಳ ಉಪಸ್ಥಿತರಿದ್ದರು.
ಪ್ರಾಚಾರ್ಯ ಮೋಹನ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ನಾಗವೇಣ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಮಂಗಲಾ ನಾಯ್ಕ ಸ್ವಾಗತಿದರು, ಉಪನ್ಯಾಸಕ ಸುರೇಶ ಶೆಟ್ಟಿ ವಂದಿಸಿದರು, ಉಪನ್ಯಾಸಕ ಜಿ ಎಸ್ ಹೆಗಡೆ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment