ಹಳಿಯಾಳ:- ದಿ.26 ರಿಂದ 28 ವರೆಗೆ 3 ದಿನಗಳ ಕಾಲ ಹಳಿಯಾಳ ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶದರಾದ ಸೈನಿಕ ವೃತ್ತಿಯಲ್ಲಿರುವ ರಾಜನ್ ಥೋಮರ್ “ಮಹಾನ್ ಭಾರತ ಕೇಸರಿಯಾಗಿ” ಹಾಗೂ ಮಹಿಳೆಯರ ವಿಭಾಗದಲ್ಲಿ ಹರಿಯಾಣಾದ “ಸುಧೇಶ” ವೀರರಾಣ ಕಿತ್ತೂರು ಚೆನ್ನಮ್ಮಾ ಭಾರತ ಕೇಸರಿ ಆಗಿ ಹೊರಹೊಮ್ಮಿದ್ದಾರೆ.
ದಿ.ವಿಶ್ವನಾಥರಾವ್ ರಘುನಾಥರಾವ್ ದೇಶಪಾಂಡೆ ಸ್ಮರಣಾರ್ಥ ರಾಜ್ಯ ಕುಸ್ತಿ ಅಸೋಸಿಯೇಶನ್ನ ಜಂಟಿ ಆಶ್ರಯದಲ್ಲಿ ಪ್ರತಿವರ್ಷ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನವರು ಪ್ರತಿ ಬಾರಿ ಬಹುಮಾನದ ಮೊತ್ತವನ್ನು ಹೆಚ್ಚಿಸಿ ಕುಸ್ತಿಪಟುಗಳಿಗೆ ಉತ್ತೇಜನ ನೀಡುತ್ತಾರೆ. ಈ ಬಾರಿ 27 ಟೈಟಲ್ಗಾಗಿ 18 ಲಕ್ಷಕ್ಕೂ ಅಧಿಕ ಬಹುಮಾನವನ್ನು ಘೋಷಿಸಲಾಗಿತ್ತು ಅಲ್ಲದೇ 550ಕ್ಕೂ ಅಧಿಕ ಕುಸ್ತಿ ಪಟುಗಳು ಅಖಾಡದಲ್ಲಿ ಪ್ರಶಸ್ತಿಗಾಗಿ ಸೆಣೆಸಾಡಿದ್ದು ಶಾಂತಿಯುತವಾಗಿ ಪಂದ್ಯಾವಳಿ ಸಂಪನ್ನಗೊಂಡಿದೆ.
75 ಕೆಜಿ ಮೆಲ್ಪಟ್ಟ ಮಹಾನ್ ಭಾರತ ಕೇಸರಿ:- ಈ ಬಿರುದಿಗಾಗಿ ಯುಪಿಯ ರಾಜನ್ ಥೋಮರ್ ಮತ್ತು ಹರಿಯಾನಾದ ಎದುವೀರ ನಡುವೆ ಹಣಾಹಣ ನಡೆದು ಕೊನೆಗೆ ಸೈನಿಕನಾಗಿರುವ ರಾಜನ್ ಮಹಾನ್ ಭಾರತ ಕೇಸರಿಯಾಗಿ ಹೊರಹೊಮ್ಮಿ 2.25ಲಕ್ಷ ರೂ. ನಗದು, ಚಿನ್ನ ಹಾಗೂ ಬೆಳ್ಳಿ ಗದೆಯನ್ನು ಪಡೆದರು. ದ್ವೀತಿಯ ಸ್ಥಾನ ಪಡೆದ ಯದುವಿರ 1.10ಲಕ್ಷ.ರೂ ನಗದು, ಬೆಳ್ಳಿ ಪದಕ ಪಡೆದರೇ ಕರ್ನಾಟಕದ ಪ್ರಕಾಶ ಯರಗಟ್ಟಿ ಹಾಗೂ ಹರಿಯಾನಾದ ಪರವಿಂದರ್ 55ಸಾವಿರ ರೂ. ಮತ್ತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.
ಕರ್ನಾಟಕ ಚಾಂಪಿಯನ್(57 ಕೆಜಿ) :– ಗದನ ಪ್ರಶಾಂತ ಗೌಡಾ ಚಿನ್ನದ ಪದಕದೊಂದಿಗೆ ಕರ್ನಾಟಕ ಚಾಂಪಿಯನ್ ಬಿರುದು, ಧಾರವಾಡದ ಪ್ರವೀಣ ಕೆ-ಬೆಳ್ಳಿ ಪದಕ, ಹಳಿಯಾಳದ ಶ್ರವಣ ಸಾವಂತ ಹಾಗೂ ದಾವಣಗೆರೆಯ ಪ್ರತೀಕ ಕಂಚು.
ಕರ್ನಾಟಕ ಚಾಂಪಿಯನ್(61 ಕೆಜಿ):- ಬೆಂಗಳೂರಿನ ಶಂಕರ ಮಗದುಮ-ಚಿನ್ನ, ಲಕ್ಷ್ಮಣ ಎಮ್-ಬೆಳ್ಳಿ, ಅಲಗೂರಿನ ಶಿವಾನಂದ ಟಿ ಮತ್ತು ದಾವಣಗೆರೆಯ ಕೆಂಚಪ್ಪಾ ಎಸ್-ಕಂಚು.
ಕರ್ನಾಟಕ ಕಿಶೋರ (65 ಕೆಜಿ):– ಬೆಳಗಾವಿಯ ಮಂಜುನಾಥ ಎನ್.ಜಿ-ಚಿನ್ನ, ಧಾರವಾಡದ ಮಹೇಶ ಗೌಡಾ-ಬೆಳ್ಳಿ, ಬೆಳಗಾವಿಯ ಅಜಿತ ತೊನಶ್ಯಾನ ಮತ್ತು ಧಾರವಾಡದ ಈಶ್ವರ ಡಾಂಗೆ- ಕಂಚು.
ಕರ್ನಾಟಕ ಕುಮಾರ (70 ಕೆಜಿ):- ಹಳಿಯಾಳದ ಬಿಕೆ ಹಳ್ಳಿಯ ವೆಂಕಟೇಶ ಪಾಟೀಲ್-ಬಂಗಾರ ಪದಕ, ಬಾಗಲಕೊಟದ ರವಿ ಕೆಂಪನ್ನವರ-ಬೆಳ್ಳಿ, ಹಳಿಯಾಳದ ಸಂದೀಪ ಎಚ್ ಮತ್ತು ಬೆಳಗಾವಿಯ ಆಕಾಶ ಎಮ್.ಜಿ-ಕಂಚು.
ಕರ್ನಾಟಕ ಕೇಸರಿ (74 ಕೆಜಿ):- ಮುಧೋಳದ ರಿಯಾಜ ಮುಲ್ಲಾ-ಚಿನ್ನ, ಬೆಂಗಳೂರಿನ-ರಮೇಶ ಹೊಸಕೊಟಿ-ಬೆಳ್ಳಿ, ಬೆಳಗಾವಿಯ ಕಿರಣ ಅಸ್ಟಗಿ ಮತ್ತು ಪರಮಾನಂದ ಬುಜಮ್ಮಗೊಳ-ಕಂಚು.
ಕರ್ನಾಟಕ ಕಂಠೀರವ (74 ಕೆಜಿ ಮೆಲ್ಪಟ್ಟು ):- ಬೆಳಗಾವಿಯ ಸಂಗಮೇಶ ಬಿ-ಚಿನ್ನ, ಮುಧೋಳದ ಸತೀಶ ಪಡತಾರೆ-ಬೆಳ್ಳಿ, ದಾವಣಗೆರೆಯ ಮಲ್ಲಪ್ಪಾಗೌಡಾ ಪಾಟಿಲ ಮತ್ತು ಬಾಗಲಕೊಟೆಯ ರಮೇಶ ಶೀಂದೆ-ಕಂಚು.
ವೀರ ರಾಣ ಕಿತ್ತೂರ ಚೆನ್ನಮ್ಮಾ ಭಾರತ ಕೇಸರಿ:– ಈ ಪ್ರಶಸ್ತಿಗಾಗಿ 55 ಕೆ.ಜಿಗಿಂತ ಮೆಲ್ಪಟ್ಟ ಮಹಿಳಾ ವಿಭಾಗದಲ್ಲಿ ಹರಿಯಾಣಾದ ಸುದೇಶ ಪ್ರಥಮ 50 ಸಾವಿರ ರೂ.ನಗದು ಚಿನ್ನದ ಪದಕ ಹಾಗೂ ಬೆಳ್ಳಿ ಗದೆಯನ್ನು ಪಡೆದರು. ದ್ವೀತಿಯ ಹರಿಯಾಣಾದ ನಿಕ್ಕಿ 25 ಸಾವಿರ ರೂ, ಬೆಳ್ಳಿ ಪದಕ ಮತ್ತು ಹಳಿಯಾಳದ ಲೀನಾ ಸಿದ್ದಿ ಹಾಗೂ ಮಹಾರಾಷ್ಟ್ರದ ರೇಷ್ಮಾ ಮಾನೆ ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.
ಓನಕೆ ಓಬವ್ವಾ ಕರ್ನಾಟಕ ಕೇಸರಿ ಪ್ರಶಸ್ತಿ:- ಹಳಿಯಾಳದ ಲೀನಾ ಸಿದ್ದಿ –ಚಿನ್ನ, ಗದಗನ ಶ್ವೇತಾ ಎಸ್.ಬಿ- ಬೆಳ್ಳಿ, ಆಳ್ವಾಸನ ತುಷಾರಾ ಮತ್ತು ಸಹನಾ-ಕಂಚು.
Leave a Comment