ಹಳಿಯಾಳ:- ಮನುಷ್ಯನ ಜೀವಿತದ ಅವಧಿಯಲ್ಲಿ ಕೊನೆಗೆ ಗಣನೆಗೆ ಬರುವುದು ಆತ ಏನು ಮಾಡಿದ್ದಾನೆಂಬುದು ಅನ್ನುವುದನ್ನು ಅರಿತು ಜನರು ಜೀವನ ಸಾಗಿಸಬೇಕಾಗಿದೆ. ಸಮಾಜಕ್ಕಾಗಿ ಏನಾದರು ಮಾಡಬೇಕೆಂಬುವ ಛಲದೊಂದಿಗೆ ಗುರಿ ಇಟ್ಟುಕೊಂಡು ಮುನ್ನುಗ್ಗಿದರೇ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಬೆಳಗಾವಿಯ ಆಶ್ರಯ ಫೌಂಡೇಶನ್ನ ಸಂಸ್ಥಾಪಕಿ ನಾಗರತ್ನ ರಾಮಗೌಡಾ ಹೇಳಿದರು.
ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಹಮ್ಮಿಕೊಂಡ ಹಳಿಯಾಳ ಹಬ್ಬ ಕಾರ್ಯಕ್ರಮದ ಅಂಗವಾಗಿ ಛತ್ರಪತಿ ಶೀವಾಜಿ ಮಹಾರಾಜರ ಮೈದಾನದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ಸಾಂಕೃತೀಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ ಸಮಾಜ ಸೇವೆ ಮಾಡುವಲ್ಲಿಯ ಖುಷಿ ಮತ್ತೇಲ್ಲೂ ಸಿಗಲ್ಲ ಎಂದ ನಾಗರತ್ನ ತಾವು ಎಚ್ಐವಿ ಸೊಂಕಿತರಾಗಿದ್ದರು ಎಂದಿಗೂ ಎದೆ ಗುಂದದೆ ಸಮಾಜಕ್ಕಾಗಿ ಏನಾದರು ಮಾಡಬೇಕೆಂಬ ಛಲದಿಂದ ರಾಜ್ಯ ಸರ್ಕಾರದ ಸಹಾಯವಿಲ್ಲದೇ ಎಚ್ಐವಿ ಪಿಡಿತರಿಗಾಗಿ ಬೆಳಗಾವಿಯಲ್ಲಿ ಆಶ್ರಯ ಫೌಂಡೇಶನ್ ಸ್ಥಾಪಿಸಿದ್ದು ಎಚ್ಐವಿ ಪಿಡಿತರಿಗೆ ಸಹಾಯದ ಹಸ್ತ ಚಾಚಲಾಗಿದೆ ಎಂದರು. ಹಳಿಯಾಳ ಹಬ್ಬದಂತ ಬೃಹತ್ ವೇದಿಕೆ ಕಾರ್ಯಕ್ರಮವನ್ನು ನನ್ನಿಂದ ಉಧ್ಘಾಟಿಸಿರುವುದು ಸಮಾಜಕ್ಕೆ ಮಾದರಿ ಕಾರ್ಯವನ್ನು ವಿ.ಆರ್.ಡಿಎಮ್ ಟ್ರಸ್ಟ್ ಮಾಡಿದೆ ಎಂದು ಶ್ಲಾಘಿಸಿದರು.
ಟ್ರಸ್ಟ್ನ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಮಾತನಾಡಿ ನಾಗರತ್ನ ಅವರು ಮಹಿಳೆಯರಿಗೆ ಸ್ಪೂರ್ತಿದಾಯಕರಿದ್ದಾರೆ. ಕಳೆದ 6 ವರ್ಷಗಳಿಂದ ಸತತವಾಗಿ ಹಳಿಯಾಳ ಹಬ್ಬ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಸ್ಥಳೀಯ ಕಲಾವಿದರಿಗೆ ಹಾಗೂ ಉದಯೋನ್ಮುಖ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುವ ಮಹದಾಸೆ ಟ್ರಸ್ಟ್ನದ್ದಾಗಿದೆ. ಮುಂದಿನ ವರ್ಷ ಇನ್ನೂ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಘೊಷಿಸಿದರು.
ಟ್ರಸ್ಟ್ನ ಧರ್ಮದರ್ಶಿ ರಾಧಾಬಾಯಿ ದೇಶಪಾಂಡೆ, ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ವೇದಿಕೆಯ ಮೇಲಿದ್ದರು.
ಮೊದಲ ದಿನದ ಹಳಿಯಾಳ ಹಬ್ಬದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕøತೀಕ ಕಾರ್ಯಕ್ರಮಗಳು, ಬೆಂಗಳೂರಿನ ಪ್ರಹ್ಲಾದ ಆಚಾರ್ಯ ಅವರಿಂದ ಶ್ಯಾಡೋ ಪ್ಲೇ, ಮುಂಬಯಿಯ ಡಾನ್ಸ್ ಪ್ಲಸ್-3 ಖ್ಯಾತಿಯ ಟ್ಯೂಟಿಕ್ಸ್ ಕ್ರ್ಯೂ ನೃತ್ಯ ಸಂಜೆ, ಸದಾಶಿವಗಡದ ರಿಧಂ ಹಾರ್ಟ ಬೀಟ್ಸ್ ನವರಿಂದ ಅಲ್ರ್ಟಾ ವೈಲೆಟ್ ನೃತ್ಯಗಳು, ಝೀ ಸರಿಗಮಪ 2017ರ ವಿಜೇತ ವಿಶ್ವಪ್ರಸಾದ ಅವರಿಂದ ಗೀತ ಗಾಯನ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರು ಕಲಾವಿದರುಗಳಿಗೆ ಸನ್ಮಾನಿಸಿ ಗೌರವಿಸಿದರು.
Leave a Comment