ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ವೈದ್ಯರಿಗಾಗಿ ಪ್ರಸಿದ್ಧ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಕುಮಟಾದ ಜಿಲ್ಲಾ ರಕ್ತನಿಧಿಯ ಐಎಂಎ ಹಾಲ್, ಬಗ್ಗೋಣನಲ್ಲಿ ದಿ. 17ರಂದು ರವಿವಾರ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ನಡೆಯಲಿದೆ.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯರುಗಳಾದ ಎಂಡೋಕ್ರೀನೋಲಜಿ ವಿಭಾಗದ ಮುಖ್ಯಸ್ಥರು ಆಗಿರುವ ಪ್ರೋ ಡಾ. ಸಹನಾ ಶೆಟ್ಟಿ, ನ್ಯೂರೋ ಸರ್ಜರಿ ವಿಭಾಗದ ಪ್ರೋ. ಡಾ. ರಾಘವೇಂದ್ರ ನಾಯಕ, ಎಲುಬು, ಕೀಲು ವಿಭಾಗದ ಡಾ. ಕೃಷ್ಣಪ್ರಸಾದ, ಡಾ. ರಾಜು, ಡಾ. ಎನ್.ವಿ. ನಾಯಕ, ಸ್ತ್ರೀ ರೋಗ ವಿಭಾಗದ ಡಾ. ಪ್ರೋ. ಡಾ. ಅಖಿಲಾ ವಾಸುದೇವ, ಮಕ್ಕಳ ವಿಭಾಗ ಪ್ರೋ. ಡಾ. ಲೆಸ್ಲಿ ಎಡ್ವರ್ಡ್ ಸೈಮನ್ ಲೂಯಿಸ್, ಮಕ್ಕಳ ವಿಭಾಗದ ಪ್ರೋ. ಡಾ. ದಿನೇಶ ನಾಯಕ ತಮ್ಮ ಅನುಭವ, ಅಧ್ಯಯನಗಳನ್ನೊಳಗೊಂಡ ವಿಷಯದ ಮೇಲೆ ಉಪನ್ಯಾಸ ನೀಡುವರು. ಅಂದು ಬೆಳಿಗ್ಗೆ 8ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮ ಸಂಜೆ 5-30ರ ತನಕ ನಡೆಯಲಿದೆ.
ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ, ಕಸ್ತೂರ್ಬಾ ಆಸ್ಪತ್ರೆ, ಉತ್ತರ ಕನ್ನಡದ ಮಕ್ಕಳ ವೈದ್ಯರ ಸಂಘ, ವೈದ್ಯಕೀಯ ತ್ಯಾಜ ನಿರ್ವಹಣೆ ಉ.ಕ. ವಿಭಾಗ, ಭಾರತೀಯ ವೈದ್ಯಕೀಯ ಸಂಘದ ಕುಮಟಾ, ಹೊನ್ನಾವರ ಶಾಖೆಗಳು ಮತ್ತು ಕುಮಟಾದ ಮಕ್ಕಳವೈದ್ಯ ಡಾ. ಎಂ.ವಿ. ಮೂಡ್ಲಗಿರಿ ಮತ್ತು ಡಾ. ಸತೀಶ ವಿ. ಪ್ರಭು ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ. ಜಿಲ್ಲೆಯ ವೈದ್ಯರು ಭಾಗವಹಿಸ ಬಯಸಿದರೆ ಇಂದು ಸಂಜೆಯೊಳಗಾಗಿ ಹೆಸರನ್ನು ನೋಂದಾಯಿಸಬೇಕು ಎಂದು ಕಸ್ತೂರ್ಬಾ ಆಸ್ಪತ್ರೆಯ ರವಿಕಿರಣ ಪೈ 9686192486 ಅಥವಾ ಮೋಹನ ಶೆಟ್ಟಿ 9663424981 ಇವರನ್ನು ಸಂಪರ್ಕಿಸಬೇಕು ಎಂದು ಕೋರಲಾಗಿದೆ.
Leave a Comment