ಹಳಿಯಾಳ :- ಕಾಶ್ಮೀರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯನ್ನು ಖಂಡಿಸಿ ಹಳಿಯಾಳದ ಎಲ್ಲ ಸಂಘ- ಸಂಸ್ಥೆಗಳು, ಸಂಘಟನೆಗಳು, ಸಮುದಾಯದವರು, ಸಾರ್ವಜನಿಕರು ಹಾಗೂ ವಿವಿಧ ಪಕ್ಷದವರು ಪಕ್ಷಾತೀತವಾಗಿ
ಸಮಸ್ತ ದೇಶಭಕ್ತರಿಂದ ಭಾನುವಾರು ದಿ.17 ರಂದು ಹಳಿಯಾಳ ಬಂದ್ ಕರೆ ನೀಡಲಾಗಿದೆ.
ಪಾಕಿಸ್ತಾನದ ಹೇಡಿ ಕೃತ್ಯವನ್ನು ಖಂಡಿಸಲು, ಕೇಂದ್ರ ಸರ್ಕಾರಕ್ಕೆ
ಪಾಕಿಸ್ತಾನದ ಮೇಲೆ ಕಠೋರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಹಾಗೂ
ಹುತಾತ್ಮರಾದ ವೀರ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಲು – ಪಂಜಿನ ಮೆರವಣಿಗೆ ಶೃದ್ದಾಂಜಲಿ ಯಾತ್ರೆಯನ್ನು ನಡೆಸಲು ತೀರ್ಮಾನಿಸಲಾಗಿದೆ..
ಪಟ್ಟಣದ. ಗ್ರಾಮದೇವಿ ಉಡಚಮ್ಮಾ ದೇವಸ್ಥಾನದಿಂದ ಸಾಯಂಕಾಲ 6 ಗಂಟೆಯಿಂದ ಶೃದ್ದಾಂಜಲಿ ಯಾತ್ರೆಯನ್ನು ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ.
ಹಳಿಯಾಳ ಸಂಪೂರ್ಣ ಬಂದ್ ಕರೆ ನೀಡಲಾಗಿದ್ದು ಭಾನುವಾರ ಸಂತೆಯನ್ನು ಮುಂದುಡಲಾಗಿದೆ ಎಂದು ವರದಿಯಾಗಿದೆ.
Leave a Comment