ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರವಾದಿಗಳು ನಡೆಸಿದ ಹೇಯ ಕೃತ್ಯವನ್ನು ಹಳಿಯಾಳ ತಾಲೂಕಿನಾದ್ಯಂತ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಮಾಜಿ ಸೈನಿಕರು ಖಂಡಿಸಿದ್ದು ಭಾರತ ಸರ್ಕಾರ ಕೂಡಲೇ ಕಠೋರ ಕ್ರಮ ಕೈಗೊಂಡು ಉಗ್ರವಾದಿಗಳ ನಿರ್ಮೂಲನೆ ಮಾಡುವಂತೆ ಆಗ್ರಹಿಸಿದ್ದಾರೆ.
ಗುರುವಾರ ತಡರಾತ್ರಿ ಪಟ್ಟಣದ ಸೋನಾರ ಗಲ್ಲಿಯ ಜನರು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕ್ಷೌರಿಕರ ಸಂಘದವರು, ವ್ಯಾಪಾರಸ್ಥರು ಸೇರಿದಂತೆ ಹಲವಾರು ಜನರು ಮೆಣದ ಬತ್ತಿಗಳನ್ನು ಹಿಡಿದು ಪಟ್ಟಣದ ಶೀವಾಜಿ ವೃತ್ತದಲ್ಲಿ ಸೇರಿ ಅಲ್ಲಿಂದ ಪೇಟೆ ಬಸವೇಶ್ವರ ದೇವಸ್ಥಾನದ ವರೆಗೆ ಮೇರವಣ ಗೆ ನಡೆಸುವ ಮೂಲಕ ಅಲ್ಲಿರುವ ಧ್ವಜ ಕಟ್ಟೆಯ ಎದುರು ಮೆಣದ ಬತ್ತಿಗಳನ್ನು ಬೆಳಗಿಸಿ ಹುತಾತ್ಮ ಸೈನಿಕರಿಗೆ ಗೌರವ ಪೂರ್ವಕ ಶೃದ್ದಾಂಜಲಿ ಸಲ್ಲಿಸಿದರು.
ಮರಾಠಾ ಸಮಾಜದಿಂದ ಖಂಡನೆ :- ಶುಕ್ರವಾರ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ಕೂಡ ಪತ್ರಿಕಾ ಹೇಳಿಕೆ ಹೊರಡಿಸುವ ಮೂಲಕ ಇದೊಂದು ರಣಹೇಡಿಗಳ ಕೃತ್ಯವಾಗಿದ್ದು ಕೇಂದ್ರ ಸರ್ಕಾರ ಕೂಡಲೇ ದಿಟ್ಟ ನಿರ್ಧಾರ ಕೈಗೊಂಡು ಹುತಾತ್ಮ ಸೈನಿಕರಿಗೆ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರದ ನಿರ್ಣಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.
ಮರಾಠಾ ಸಮಾಜದವರು ಸೈನಿಕ ವೃತ್ತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭರ್ತಿಯಾಗಿ ದೇಶ ಸೇವೆಯನ್ನು ಸಲ್ಲಿಸುತ್ತಿದ್ದು ಈ ಘಟನೆಯಿಂದ Àಸಮಾಜದ ಸೈನಿಕ ಬಾಂಧವರ ಕುಟುಂಬದವರು ಧೃತಿಗೆಡಬಾರದು ದೇಶವೆ ನಿಮ್ಮ ಬೆಂಬಲಕ್ಕಿದೆ ಎಂದು ಆತ್ಮವಿಶ್ವಾಸ ನೀಡಿದ್ದಾರೆ.
Leave a Comment