• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಾಂತಿ‌ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ ಜೀವನ ಶ್ರೀಮಂತ ಮಾಡಬೇಕಿದೆ – ಸಿದ್ದೇಶ್ವರ ಸ್ವಾಮಿಜಿ

February 22, 2019 by Yogaraj SK Leave a Comment

Siddeswara swamiji pravachana

ಹಳಿಯಾಳ: ಭೂಮಿಯ ಮೇಲೆ ಮನುಷ್ಯ ಜನ್ಮ ತಾಳಿರುವುದು ಕೇವಲ ಎನಾದರೂ ಸಾಧಿಸಲು ಮಾತ್ರವಲ್ಲದೇ ಜೀವನವನ್ನು ಶಾಂತಿ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ ಶ್ರೀಮಂತ ಮಾಡಲು ಎಂದು ವಿಜಯಪುರದ ಜ್ಞಾನ ಮಂದಿರದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶಿವಾಜಿ ಮೈದಾನದಲ್ಲಿ ಫೆ.19ಕ್ಕೆ ಚಾಲನೆಗೊಂಡು 3 ದಿನಗಳನ್ನು ಕಳೆದಿರುವ ಹಾಗೂ ಒಂದು ತಿಂಗಳಗಳ ಕಾಲ ನಡೆಯಲಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸ್ವಾಮಿಜಿಗಳು ಆಶೀರ್ವನ ನೀಡಿದರು.
ದೇವರು ನಿರ್ಮೀಸಿರುವ ಈ ಸುಂದರವಾದ ಸಾಮಾಜ್ರದಲ್ಲಿ ನಾವು ಎನಾದರೂ ಸಾಧಿಸಬೇಕು. ಜಗತ್ತನ್ನು ಪ್ರೀತಿಸಬೇಕು. ಭೂಮಿ ಮೇಲಿರುವ ಗಾಳಿ, ಬೆಳಕು ನೀರು, ಇವುಗಳಲ್ಲಿ ಯಾವುದಾದರೂ ಒಂದು ಇಲ್ಲವೆಂದರೆ ಈ ಜಗತ್ತಿನಲ್ಲಿ ಯಾರು ಕೂಡಾ ಬದುಕಲು ಸಾಧ್ಯವಿಲ್ಲ ಆದ್ದರಿಂದ ಇಂಥಹ ಸುಂದರ ಜಗತ್ತಿಗೆ ನಾವೂ ಧನ್ಯವಾದ ಅರ್ಪಿಸಬೇಕು ಎಂದರು.
ಅಧ್ಭುತವಾಗಿರುವ ಈ ಭೂಮಂಡಲವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ನಮ್ಮ ಶಕ್ತಿ, ಬುದ್ಧಿ, ಸಂಪತ್ತು, ಎಷ್ಟು ಎಲ್ಲವೂ ಪರಿಮಿತವಾಗಿದೆ. ಅದರೆ ಈ ಜಗತ್ತು ನಿರ್ಮಿಸಿದವನು ಕರ್ತಾರನ ಕಮ್ಮಟವಾಗಿದೆ. ದೇವರು ತನ್ನ ಕೆಲಸವನ್ನು ಮಾಡುತ್ತಿದ್ದಾನೆ. ಅದರ ಪ್ರಕಾರ ಭೂಮಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಿ ಜಂತುಗಳು ತನ್ನ ಕೆಲಸವನ್ನು ಮಾಡುತ್ತಿವೆ ಇದಕ್ಕೆ ನಾವೂ ಕರ್ಮಶಾಲಾ ಕಮ್ಮಟ ಎನ್ನುತ್ತೆವೆ ಎಂದರು.
ಜಗತ್ತು ದೇವರ ವರ್ಕಶಾಪ್ ಇದ್ದಹಾಗೆ ಭೂಮಿಯ ಮೇಲೆ ಎಂಥಹ ಒಳ್ಳೆಯ ವಸ್ತುಗಳನ್ನು ನಿರ್ಮಾಣ ಮಾಡಲಾಗಿದೆ. ಜಗತ್ತಿನಲ್ಲಿ ಒಂದು ಬಾರಿ ನಾವೂ ಅವಲೋಕನ ಮಾಡಿ ಕಣ್ಣು ಹಾಯಿಸಿದಾಗ ಅದರಲ್ಲಿರುವ ಪ್ರತಿಯೊಂದು ವಸ್ತು ಮಹತ್ವದ್ದಾಗಿದೆ ಆದ್ದರಿಂದ ಈ ಜಗತ್ತನ್ನು ಪ್ರೀತಿಸಿ -ಒಳ್ಳೆಯದನ್ನು ಬಯಸಿ ಎಂದು ಕರೆ ನೀಡಿದರು.
ಪ್ರತಿದಿನ ಬೆಳಿಗ್ಗೆ ಶಿವಾಜಿ ಮೈದಾನದಲ್ಲಿ 6.30 ರಿಂದ 7.30 ರವರೆಗೆ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ದಾಂಡೇಲಿ, ಕಲಘಟಗಿ, ಅಳ್ನಾವರ, ಬೈಲಹೊಂಗಲ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಸಿದ್ದೇಶ್ವರ ಸ್ವಾಮಿಜಿಗಳ ಆಧ್ಯಾತ್ಮಿಕ ಪ್ರವಚನ ಕೇಳಲು ಆಗಮಿಸುತ್ತಿರುವುದು ವಿಶೇಷವಾಗಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News, Honavar News Tagged With: life-rich, on the earth, Siddeswara swamiji pravachana, Siddheshwara Swamiji, the birth of a man, the experience of peace and charity, the light water, The wind, the wisdom of the Vijayanagara temple, the wise siddhaswara Mahaswamis, ಗಾಳಿ, ಜೀವನ ಶ್ರೀಮಂತ ಮಾಡಬೇಕಿದೆ, ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು, ಬೆಳಕು ನೀರು, ಭೂಮಿಯ ಮೇಲೆ, ಮನುಷ್ಯ ಜನ್ಮ ತಾಳಿರುವುದು ಕೇವಲ, ವಿಜಯಪುರದ ಜ್ಞಾನ ಮಂದಿರದ, ಶಾಂತಿ‌ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ, ಸಿದ್ದೇಶ್ವರ ಸ್ವಾಮಿಜಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...