ಹಳಿಯಾಳ: ಭೂಮಿಯ ಮೇಲೆ ಮನುಷ್ಯ ಜನ್ಮ ತಾಳಿರುವುದು ಕೇವಲ ಎನಾದರೂ ಸಾಧಿಸಲು ಮಾತ್ರವಲ್ಲದೇ ಜೀವನವನ್ನು ಶಾಂತಿ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ ಶ್ರೀಮಂತ ಮಾಡಲು ಎಂದು ವಿಜಯಪುರದ ಜ್ಞಾನ ಮಂದಿರದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶಿವಾಜಿ ಮೈದಾನದಲ್ಲಿ ಫೆ.19ಕ್ಕೆ ಚಾಲನೆಗೊಂಡು 3 ದಿನಗಳನ್ನು ಕಳೆದಿರುವ ಹಾಗೂ ಒಂದು ತಿಂಗಳಗಳ ಕಾಲ ನಡೆಯಲಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸ್ವಾಮಿಜಿಗಳು ಆಶೀರ್ವನ ನೀಡಿದರು.
ದೇವರು ನಿರ್ಮೀಸಿರುವ ಈ ಸುಂದರವಾದ ಸಾಮಾಜ್ರದಲ್ಲಿ ನಾವು ಎನಾದರೂ ಸಾಧಿಸಬೇಕು. ಜಗತ್ತನ್ನು ಪ್ರೀತಿಸಬೇಕು. ಭೂಮಿ ಮೇಲಿರುವ ಗಾಳಿ, ಬೆಳಕು ನೀರು, ಇವುಗಳಲ್ಲಿ ಯಾವುದಾದರೂ ಒಂದು ಇಲ್ಲವೆಂದರೆ ಈ ಜಗತ್ತಿನಲ್ಲಿ ಯಾರು ಕೂಡಾ ಬದುಕಲು ಸಾಧ್ಯವಿಲ್ಲ ಆದ್ದರಿಂದ ಇಂಥಹ ಸುಂದರ ಜಗತ್ತಿಗೆ ನಾವೂ ಧನ್ಯವಾದ ಅರ್ಪಿಸಬೇಕು ಎಂದರು.
ಅಧ್ಭುತವಾಗಿರುವ ಈ ಭೂಮಂಡಲವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ನಮ್ಮ ಶಕ್ತಿ, ಬುದ್ಧಿ, ಸಂಪತ್ತು, ಎಷ್ಟು ಎಲ್ಲವೂ ಪರಿಮಿತವಾಗಿದೆ. ಅದರೆ ಈ ಜಗತ್ತು ನಿರ್ಮಿಸಿದವನು ಕರ್ತಾರನ ಕಮ್ಮಟವಾಗಿದೆ. ದೇವರು ತನ್ನ ಕೆಲಸವನ್ನು ಮಾಡುತ್ತಿದ್ದಾನೆ. ಅದರ ಪ್ರಕಾರ ಭೂಮಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಿ ಜಂತುಗಳು ತನ್ನ ಕೆಲಸವನ್ನು ಮಾಡುತ್ತಿವೆ ಇದಕ್ಕೆ ನಾವೂ ಕರ್ಮಶಾಲಾ ಕಮ್ಮಟ ಎನ್ನುತ್ತೆವೆ ಎಂದರು.
ಜಗತ್ತು ದೇವರ ವರ್ಕಶಾಪ್ ಇದ್ದಹಾಗೆ ಭೂಮಿಯ ಮೇಲೆ ಎಂಥಹ ಒಳ್ಳೆಯ ವಸ್ತುಗಳನ್ನು ನಿರ್ಮಾಣ ಮಾಡಲಾಗಿದೆ. ಜಗತ್ತಿನಲ್ಲಿ ಒಂದು ಬಾರಿ ನಾವೂ ಅವಲೋಕನ ಮಾಡಿ ಕಣ್ಣು ಹಾಯಿಸಿದಾಗ ಅದರಲ್ಲಿರುವ ಪ್ರತಿಯೊಂದು ವಸ್ತು ಮಹತ್ವದ್ದಾಗಿದೆ ಆದ್ದರಿಂದ ಈ ಜಗತ್ತನ್ನು ಪ್ರೀತಿಸಿ -ಒಳ್ಳೆಯದನ್ನು ಬಯಸಿ ಎಂದು ಕರೆ ನೀಡಿದರು.
ಪ್ರತಿದಿನ ಬೆಳಿಗ್ಗೆ ಶಿವಾಜಿ ಮೈದಾನದಲ್ಲಿ 6.30 ರಿಂದ 7.30 ರವರೆಗೆ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ದಾಂಡೇಲಿ, ಕಲಘಟಗಿ, ಅಳ್ನಾವರ, ಬೈಲಹೊಂಗಲ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಸಿದ್ದೇಶ್ವರ ಸ್ವಾಮಿಜಿಗಳ ಆಧ್ಯಾತ್ಮಿಕ ಪ್ರವಚನ ಕೇಳಲು ಆಗಮಿಸುತ್ತಿರುವುದು ವಿಶೇಷವಾಗಿದೆ.
Leave a Comment