ಉತ್ತರಕನ್ನಡ ಜಿಲ್ಲಾ ಅರಣ್ಯ ಅತಿಕ್ರಮಣದಾರರಿಂದ ಮತ್ತೊಂದು ಹಂತಹ ಹೋರಾಟಕ್ಕೆ ಅಣಿಯಾಗುತ್ತಿದ್ದು ಹೊನ್ನಾವರದಲ್ಲಿ ಮುಂದಿನ ಜೈಲ್ ಬರೋ ಕುರಿತಾಗಿ ಪೂರ್ವಭಾವಿ ಸಭೆ ನಡೆಯಿತು.
ಹೊನ್ನಾವರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆದ ಅತಿಕ್ರಮಣದಾರರ ಜೈಲ್ ಬರೋ ಪೂರ್ವಭಾವಿಯ ಸಭೆಯಲ್ಲಿ ಭೂಮಿಯ ಒಡೆತನ ನಮ್ಮ ಹಕ್ಕು ಅದು ಬೇರೆಯವರಿಂದ ದಾನ ಅಥವಾ ಭಿಕ್ಷೆಯಾಗಿ ಪಡೆಯುದಲ್ಲ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಸರ್ಕಾರ ಅತಿಕ್ರಮಣದಾರರ ಸಮಸ್ಯೆಯನ್ನು ಬಗೆಹರಿಸಲು ಮನಸ್ಸು ಮಾಡದೆ ನಿರ್ಲಕ್ಷ್ಯ ಮಾಡಿದೆ ಅದರ ಪರಿಣಾಮವೇ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಎಡವಿದ್ದರಿಂದ ಇಂದು ರಾಜ್ಯದ ಲಕ್ಷಾಂತರ ಅತಿಕ್ರಮಣದಾರ ಕುಟುಂಬsÀಗಳು ಬೀದಿಗೆ ಬರುವ ಆತಂಕವನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳ ಜನಪ್ರತಿನಿಧಿಗಳ ನಡೆಗೆ ಕಿಡಿಕಾರಿದರು.
ನಂತರ ಮಾಧ್ಯಮದವರೊಂದಿಗೆ ರವೀಂದ್ರ ನಯ್ಕ ಮಾತನಾಡಿ ಜುಲೈ 12 ರೊಳಗೆ ಅರ್ಜಿ ತಿರಸ್ಕøತ ಅತಿಕ್ರಮಣದಾರರನ್ನು ಖುಲ್ಲಾಪಡಿಸುವಂತೆ ಸರ್ವೋಚ್ಛ ನ್ಯಾಯಾಲಯ ಮಾಡಿರುವ ಆದೇಶದಿಂದ ಕಂಗಾಲಾಗಿರುವ ಅರಣ್ಯಭೂಮಿ ಅತಿಕ್ರಮಣದಾರರು ನ್ಯಾಯಾಲಯದ ಆದೇಶ ಮರು ಪರಿಶೀಲನೆಗೆ ಸರ್ಕಾರದಮೇಲೆ ಒತ್ತಡ ಹೇರುವ ಭಾಗವಾಗಿ ಮಾರ್ಚ.02 ರಂದು ಕುಮಟಾದಲ್ಲಿ ಜೈಲ್ ಬರೋಗೆ ಮುಂದಾಗಿದ್ದೇವೆ.
ಕರ್ನಾಟಕ ರಾಜ್ಯದ ಅಫಿಡವಿಟ್ನಲ್ಲಿ ಅತಿಕ್ರಮಣದಾರರನ್ನು ತೆರವುಗೊಳಿಸುತ್ತೇವೆ ಎಂದು ದೋಷಪೂರ್ಣ ಹೇಳಿಕೆಯನ್ನು ನಮೂದಿಸಿದ್ದರು ಇದರಿಂದ ಇಂದು ಖುಲ್ಲಾಪಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಿಳಿಸಿ ಅತಿಕ್ರಮಣದಾರರ ನೆರವಿಗೆ ದಾವಿಸುವವರು ಯಾರೂ ಇಲ್ಲ ಇಲ್ಲಿ ನಮಗೆ ನಾವೇ ಎಲ್ಲಾ ಹಾಗಾಗಿ ಭೂಮಿಯ ಹಕ್ಕನ್ನು ಪಡೆಯುವ ಸಲುವಾಗಿ ನಾವು ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗಿz. ಅತಿಕ್ರಮಣದಾರರಿಗೆ ಮಾನಸಿಕ ಧೈರ್ಯ ತುಂಬಲು ನಾವು ಒಗ್ಗೂಡಿ ಈ ಹೋರಾಟಕ್ಕೆ ಇಳಿದಿದ್ದೇವೆ. ಕೂಡಲೇ ಸರ್ಕಾರ ಬದಲಿ ಕಾನೂನು ಮಾರ್ಗ ಅನುಸರಿಸಿ ನೆರೆವಿಗೆ ಬರಬೇಕೆಂದು ಆಗ್ರಹಿಸಲು ಈ ಜೈಲ್ ಬರೊ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ವ್ಯಕ್ತಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ರಾಮಾ ಮೋಗೇರ, ಚಂದ್ರಶೇಖರ ಕೋಚಡೆಕರ್, ಶಿವರಾಜ ಮೇಸ್ತ, ಸುರೇಶ ಮೇಸ್ತ, ಅನಂತ ನಾಯ್ಕ ಹೆಗ್ಗಾರ, ಜಿ.ಎಸ್.ಹೆಗಡೆ. ವಿನಾಯಕ ನಾಯ್ಕ, ಆರ್.ಪಿ.ನಾಯ್ಕ ಸೇರಿದಂತೆ ತಾಲೂಕಿನ ನೂರಾರು ರೈತರು ಆಗಮಿಸಿದ್ದರು.
Leave a Comment