ಹಳಿಯಾಳ:- ಚಿಗರೆಯನ್ನು ಬೇಟೆಯಾಡಿ ತಿನ್ನುವುದಕ್ಕೊಸ್ಕರ ಬೇಯಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಚಿಗರೆ ಮಾಂಸ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂಬ್ರಾಣಿ ವಲಯದ ಬಾಳಶೆಟ್ಟಿಕೊಪ್ಪ ಗೌಳಿವಾಡಾ ಗ್ರಾಮದ ಮನೆಯಲ್ಲಿ, ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಚಿಗರೆಯನ್ನು ಕೊಂದು ಮಾಂಸವನ್ನು ಬೆರ್ಪಡಿಸಿ ಖೇಮು ಜನ್ನು ಎಡಗೆರವರ ಮನೆಯಲ್ಲಿ ತಿನ್ನುವದಕ್ಕೋಸ್ಕರ ಬೇಯಿಸುತ್ತಿರುವಾಗ ಆರೋಪಿಗಳನ್ನು ದಸ್ತಗೀರಿ ಮಾಡಿ, ಚಿಗರೆಯ ಬೇಯಿಸಿದ ಮಾಂಸ 2.6 ಕೆ.ಜಿ. ಹಾಗೂ ಸದರಿ ಕೃತ್ಯಕ್ಕೆ ಬಳಸಿದ ಸಲಕರಣೆಗಳನ್ನು ಜಪ್ತಪಡಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಕರ್ನಾಟಕ ಅರಣ್ಯ ಕಾಯ್ದೆ ಪ್ರಕಾರ ಉಪ ವಲಯ ಅರಣ್ಯಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.
ಕೃತ್ಯದಲ್ಲಿ ಖೇಮು ಜನ್ನು ಎಡÀಗೆ ಮತ್ತು ನವಲು ಜನ್ನು ಎಡಗೆ ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಆರೋಪಿಗಳಿಗೆ 15 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ಎಸ್.ಎಫ್.ಕುರಿ, ಡಿ.ಎಸ್.ಹುಲ್ಯಾಳ, ದೀಪಕ ಜಂಬುರೆ ಮತ್ತು ಅರಣ್ಯ ರಕ್ಷಕರುಗಳಾದ ಜೆ.ಎಚ್.ಮುಲ್ಲಾ, ಶಿವಲಿಂಗ ಕರಗಣ್ಣಿ, ಉಮೇಶ ಹೊಸಮನಿ, ಉತ್ತಮ ಮಡಿವಾಳ, ಬೇಜಮಿ ಫರ್ನಾಂಡಿಸ್, ದೊಂಡಿಬಾ ಭಾಗವಹಿಸಿದ್ದರು.
Leave a Comment