ಹೊನ್ನಾವರ: ಡಿ.ಎಸ್.ಇ.ಆರ್.ಟಿ ಪ್ರತಿ ವರ್ಷ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ನ್ಯಾಷನಲ್ ಮೀನ್ಸ್ ಮೇರಿಟ್ ಸ್ಕಾಲರ್ ಸೀಪ್ (ಎನ್.ಎಮ್.ಎಂ.ಎಸ್) ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ 2018 ರ ಪರೀಕ್ಷೆಯಲ್ಲಿ ಶ್ರೇಯಾಂಕಿತÀರಾಗಿ ವಿದ್ಯಾರ್ಥಿವೇತನಕ್ಕೆ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಕುಮಾರ ಚರಣ ಗೋವಿಂದ ನಾಯ್ಕ, ದಿನೇಶ ಮಂಜು ಮುಕ್ರಿ ಹಾಗೂ ಕುಮಾರಿ ಸ್ನೇಹಾ ತಿಮ್ಮಣ್ಣ ನಾಯ್ಕ ಆಯ್ಕೆಯಾಗಿದ್ದಾರೆ.
ಇವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನವದೆಹಲಿ ವತಿಯಿಂದ ವರ್ಷಕ್ಕೆ ರೂ 12000/- ರಂತೆ 4 ವರ್ಷಗಳ ವರೆಗೆ ವಿದ್ಯಾರ್ಥಿವೇತನ ಲಭಿಸಲಿದೆ ಅಕ್ಟೋಬರ್ ರಜಾಅವಧಿಯಲ್ಲಿ ಸಮರ್ಪಣಾ ತರಬೇತಿ ಕೇಂದ್ರದ ಸಂಚಾಲಕರಾದ ಶ್ರೀಕಾಂತ ಹಿಟ್ಟಳ್ಳಿ ಇವರು ಸೇತುಬಂಧ ಟ್ರಸ್ಟ್ ಪ್ರಾಯೋಜಕತ್ವದಲ್ಲಿ 12 ದಿನಗಳ ಉಚಿತ ತರಬೇತಿ ನೀಡಿರುವುದನ್ನ ಸ್ಮರಿಸಬಹುದು ತರಬೇತಿಯಲ್ಲಿ ಪಾಲ್ಗೋಂಡವರಲ್ಲಿ ತಾಲೂಕಿನ ವಿವಧ ಪ್ರೌಢಶಾಲೆಗಳ 16 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ವಿನಾಯಕ ಅವಧಾನಿ , ಆನಂದ ನಾಯ್ಕ, ಡಿ.ಡಿ.ಭಟ್ಟ, ಎನ್.ಎಸ್.ಹೆಗಡೆ, ಎಲ್.ಎಮ್ ಹೆಗಡೆ ಮುಂತಾದವರು ಮಾರ್ಗದರ್ಶನ ನೀಡಿದ್ದರು. ಸಾಧನೆಗೆ ಕೃಷ್ಣಮೂರ್ತಿ ಹೆಬ್ಬಾರ್ ಮುಖ್ಯಾಧ್ಯಾಪಕ ಎಲ್.ಎಮ್ ಹೆಗಡೆ ಅಭಿನಂದಿಸಿದ್ದಾರೆ.
Leave a Comment