ಹೊನ್ನಾವರ; ರಾಷ್ಟ್ರೀಯ ಹೆದ್ದಾರಿಯ 66ರ ಎಮ್ಮೆಪೈಲ್ ಸಮೀಪ ಗೋವಾ ಕಡೆಯಿಂದ ಮುರ್ಡೇಶ್ವರ ಕಡೆ ಸಾಗುತ್ತಿದ್ದ ಕಾರು ಮಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆ ಸಾಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಸೊಮವಾರ ನಡೆದಿದೆ.
ಗೋವಾದಿಂದ ಮುರ್ಡೆಶ್ವರ ಕಡೆಗೆ ಕೆ.ಎ.10 ಎಮ್. 5097 ಕಾರು ಅತಿಯಾದ ವೇಗದಿಂದ ಪರಿಣಾಮ ಮಂಗಳೂರಿನಿಂದ ಆಗಮಿಸಿದ ತಮಿಳುನಾಡು ಮೂಲದ 05 ಎ.ಕ್ಯು. 3725 ಲಾರಿಗೆ ಎದುರಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಕಂ ಆಗಿದೆ. ಸ್ಥಳದಲ್ಲಿಯೇ ಗುಂಡ್ಲಪೇಟೆ ಮೂಲದ ವಿಜಯಕುಮಾರ್ ಬಿ.ಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಚಾಮರಾಜನಗರ ಮೂಲದವರಾದ ರಾಘವೇಂದ್ರ ಆರ್, ಪ್ರದೀಪ ಆರ್, ಮೈಸುರು ಮೂಲದವರಾದ ಮಂಜುನಾಥ, ರಾಘವೇಂದ್ರ ಡಿ ಗಂಭೀರ ಗಾಯಗೊಂಡಿದ್ದಾರೆ. ಗಾಯಳುವನ್ನು ತಾಲೂಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಉಡುಪಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯನ್ನು ತಕ್ಷಣಕ್ಕೆ ಸ್ಪಂದಿಸಿದ ಅಬುಲೆನ್ಸ ಚಾಲಕರು ಹಾಗೂ ಪೋಲಿಸರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಫಘಾತ ವಿಷಯ ತಿಳಿಯುತ್ತಿದ್ದಂತೆ ತಕ್ಷಣಕ್ಕೆ 108 ಅಂಬುಲೆನ್ಸ ಹಾಗೂ ಹೊನ್ನಾವರದಲ್ಲಿರುವ ಖಾಸಗಿ ಅಂಬುಲೆನ್ಸ ನೆರವಿಗೆ ಬರುವ ಮೂಲಕ ಕ್ಷಣಾರ್ಧದಲ್ಲಿ ಆಸ್ಪತ್ರೆಗೆ ತಾಲೂಕ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಿದರು. ಕುಟುಂಬದವರಿಗೆ ದೂರವಾಣಿ ಮೂಲಕ ವಿಷಯ ತಿಳಿಸುತ್ತಾ ಖಾಸಗಿ ಅಂಬುಲೆನ್ಸ ಚಾಲಕರು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ರವಾನಿಸಿದರು. ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಸಿಪಿಐ ಚೆಲುವರಾಜು, ಪಿ.ಎಸ್.ಐ ತೇಜಸ್ವಿ ಇವರು ಗಾಯಳುವನ್ನು ಆಸ್ಪತ್ರೆಗೆ ಸೇರಿಸುವ ಜೊತೆ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉದ್ಬವವಾಗದಂತೆ ನೋಡಿಕೊಂಡರು. ಪೋಲಿಸ್ ಇಲಾಖೆ ಹಾಗೂ ಅಂಬುಲೆನ್ಸನವರ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
Leave a Comment