ಹೊನ್ನಾವರ . ತಾಲೂಕಾ ಪಂಚಾಯತ ಸಭಾಭವನದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ ಜಿ ನಾಯ್ಕ ರ ಅಧ್ಯಕ್ಷತೆಯಲ್ಲಿ “ವಿಶ್ವ ಜಲ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಲಾಯಿತು. ಜೀವಜಲ ಬರಿದಾಗುತ್ತಿದ್ದು ಅದರ ಸದ್ಭಳಕೆಯಿಂದ ಮಾತ್ರ ಸಂರಕ್ಷಿಸಬಹುದಾಗಿದೆ. ಸಮಾಜದ ಪ್ರತಿಯೊಬ್ಬರಲ್ಲಿಯೂ ನೀರಿನ ಹಿತಮಿತವಾದ ಬಳಕೆಯ ಕುರಿತು ಅರಿವು ಮೂಡಿಸಲು ಕಾರ್ಯನಿರ್ವಾಹಕ ಅಧಿಕಾರಿಗಳು ಕರೆ ನೀಡಿದರು.
ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರು (ಗ್ರಾ.ಅ) ಕೃಷ್ಣಾನಂದ ಕೆ. ರವರು ನೀರಿನ ಮೂಲಗಳು ಅರಣ್ಯೀಕರಣದ ಮಹತ್ವ ತಿಳಿಸಿದರು. ತಾಲೂಕ ಪಂಚಾಯತ ಸಾಕ್ಷರತಾ ಸಂಯೋಜಕರಾದ ಸಾಧನಾ ಬರ್ಗಿ ಸ್ವಾಗತಿಸಿದರು. ಎನ್.ಆರ್.ಎಲ್.ಎಂ ಮೇಲ್ವಿಚಾರಕರಾದ ಬಾಲಚಂದ್ರ ನಾಯ್ಕ ಪ್ರತಿಜ್ಞಾವಿಧಿ ಬೋಧಿಸಿದರು. ಅಕ್ಷರ ದಾಸೋಹ ಸಿಬ್ಬಂದಿ ಉದಯ ಸಂಗನಾಳ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತದ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.
Leave a Comment