ಹೊನ್ನಾವರ: ಈಜಲು ತೆರಳಿದ್ದ ವೇಳೆ ಯುವಕನೊರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಖರ್ವಾ ಗ್ರಾಮದ ವಲ್ಕಿಯಲ್ಲಿ ಶುಕ್ರವಾರ ನಡೆದಿದೆ.
ಮೃತಪಟ್ಟ ಯುವಕ ತಾಲೂಕಿನ ವಲ್ಕಿ ನಿವಾಸಿ ರಯಾನ್ ಜಾಫರ್ ಖಾಜಿ(18) ಎಂದು ತಿಳಿದು ಬಂದಿದೆ. ಮೃತ ಯುವಕ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವಲ್ಕಿ ಮಸೀದಿ ಹತ್ತಿರದ ಶರಾವತಿ ನದಿಯ ನೀರಿನಲ್ಲಿ ಶುಕ್ರವಾರ ಸಾಯಂಕಾಲ 4 ಘಂಟೆ ಸುಮಾರಿಗೆ ಈಜಲು ತೆರಳಿದ್ದ ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ನದಿಯ ನೀರಿನಲ್ಲಿ ಮುಳುಗಿ,ಕೊಚ್ಚಿ ಹೋಗುತ್ತಿದ್ದವನಿಗೆ ಅಲ್ಲಿ ಸೇರಿದ ಜನರು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ. ಸ್ವಲ್ಪ ಉಸಿರಾಡುತ್ತಿದ್ದವನಿಗೆ ಕೂಡಲೇ ಹೊನ್ನಾವರ ಆಸ್ಪತ್ರೆಗೆ ಕರೆತಂದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆ ವೈದ್ಯರು ರಯಾನ್ ಈತನು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment