ಹಳಿಯಾಳ:- ಕುಮಟಾದಿಂದ ಬೆಳಗಾವಿಗೆ ತೆರಳುತ್ತಿದ್ದ ದಿ. ಕವಿ ಬಿಎ ಸನದಿ ಅವರ ಪಾರ್ಥೀವ ಶರೀರದ ಅಂತೀಮ ಯಾತ್ರೆಯ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹಳಿಯಾಳದ ರುಡಸೆಟ್ ಎದುರಿಗೆ ದಿವಂತಗರ ಪಾರ್ಥೀವ ಶರೀರಕ್ಕೆ ಹಳಿಯಾಳದ ಸಾಹಿತ್ಯ ಪ್ರೇಮಿಗಳು- ವಿವಿಧ ಸಂಘಟನೆಯವರು ಅಂತೀಮ ನಮನ ಸಲ್ಲಿಸಿದರು.
ಸಾಹಿತಿ ಮಾಸ್ಕೇರಿ ಎಂ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ದಾಂಡೇಲಿ ಹೋರಾಟ ಸಮೀತಿಯ ಅಕ್ರಂಖಾನ್, ಬಸವ ಕೇಂದ್ರ ಚಂದ್ರಕಾಂತ ಅಂಗಡಿ, ಸುಮಂಗಲಾ ಅಂಗಡಿ ಮೊದಲಾದವರು ಇದ್ದರು.
Leave a Comment