ಹೊನ್ನಾವರ : ಪಟ್ಟಣ ಪಂಚಾಯತ್ ತನ್ನ ನಿರ್ಲಜ್ಜ ನಿರ್ಲಕ್ಷತೆಯಿಂದ ಹೊನ್ನಾವರವನ್ನೇ ರೋಗಗ್ರಸ್ತ ಮಾಡಲು ಹೊರಟಿದೆ. ಬಸ್ ನಿಲ್ದಾಣದ ಎದುರು ಗಟಾರ ರಿಪೇರಿ ಎಂದು ಗಟಾರಗಳ ಮೇಲು ಹೊದಿಕೆ ತೆಗೆದು ಹಾಕಿದ್ದರು. ತಿಂಗಳಾದರೂ ಸರಿಯಾಗಿ ಮುಚ್ಚಿಲ್ಲ.
ಪಟ್ಟಣ ಪಂಚಾಯತ್ ಸರಿಯಾಗಿ ಮುಚ್ಚಿಗೆ ಹಾಕದೇ ಬಿಟ್ಟು ಹೋಗಿರುವುದರಿಂದ ದಿನ ಮುಂಜಾನೆ ಹಾಗೂ ಸಂಜೆ 4.00 ಗಂಟೆಯಿಂದ ಅಲ್ಲಿಂದ ಸೊಳ್ಳೆಗಳು ಒಂದೇ ಸಮನೆ ಹೊರಬರುತ್ತವೆ. ಗ್ರಾಹಕರಿಗೆ ಅಂಗಡಿಕಾರರಿಗೆ ಕಚ್ಚಿ-ಕಚ್ಚಿ ರೋಗ ಹರಡುತ್ತಿವೆ. ಆ ಮೂಲಕ ಗ್ರಾಮೀಣ ಪ್ರದೇಶದಿಂದ ಬರುವವರಿಗೂ ಈ ರೋಗ ಹರಡುತ್ತದೆ. ಎಸ್.ಎಸ್.ಎಲ್.ಸಿ ಇತ್ಯಾದಿ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳು ಬೇರೆ ಬೇರೆ ಊರುಗಳಿಂದ ಬರುತ್ತಿದ್ದಾರೆ. ಅವರ ಆರೋಗ್ಯ ಕೆಡುವ ಸಾಧ್ಯತೆ ಇದೆ. ರಾತ್ರೆ ಸುಮಾರು ದನಕರುಗಳು, ಪಾದಚಾರಿಗಳು ಬಿದ್ದು ಸಮಸ್ಯೆ ಪಡುವಸ್ಥಿತಿ ಬಂದಿದೆ.
ಅದೇ ರೀತಿ ಕೋರ್ಟ್ ರಸ್ತೆಯಲ್ಲಿರುವ ಮೂತ್ರಗಳು ಕಟ್ಟು ದುರ್ವಾಸನೆ ಹೊರಡಿಸುತ್ತಿವೆ. ಇದೇ ಕೋರ್ಟಿನಲ್ಲಿ ವಕೀಲರಾಗಿದ್ದ ಎಷ್ಟೇ ಜನ ನಗರಸಭೆಯ ಅಧ್ಯಕ್ಷ ಪಟ್ಟದ ಸುಖ ಅನುಭವಿಸಿದ್ದವರು ಅವರ್ಯಾರೂ ಈಗ ಜನಸಾಮಾನ್ಯರಿಗಾಗಿ ಟೆಂಪೋ ಚಾಲಕ ಕ್ಲಿನರಿಗಾಗಿ ವಿಚಾರ ಮಾಡುತ್ತಿಲ್ಲ. ಇಲ್ಲಿಯೇ ಸರಾಯಿ ಮತ್ತು ಬೆಲೆ ಬಾಳುವ ಮಧ್ಯದ ಬಾಟಲಿಗಳು ರಾಶಿ ರಾಶಿ ಬಿದ್ದರುತ್ತವೆ. ಚುನಾವಣಾ ಸಂದರ್ಭ ವಾದ್ದರಿಂದ ಬಾರಿನಲ್ಲಿ ಕುಳಿತು ಕುಡಿದರೆ ಸಮಸ್ಯೆ ಬರುತ್ತದೆಂದು ರಾತ್ರಿ ಇದೇ ಕೆಟ್ಟ ವಾಸನೆಯಲ್ಲಿ ಕುಳಿತು ಕುಡಿದು ಅಲ್ಲೇ ಎಸೆದು ಹೋಗುತ್ತಾರೆ. ರಾತ್ರಿ ಬೀಟ್ ಪೋಲೀಸರಾಗಲಿ ಅದೇ ದಾರಿಯಲ್ಲಿ ಹಗಲಿಗೆ ತಿರುಗಾಡುವ ವಕೀಲರಾಗಲೀ ಅತ್ತಕಡೆ ಗಮನ ಹರಿಸದೇ ನಿರ್ಲಕ್ಷ ಮಾಡಿದ್ದರಿಂದ ಜನರು ರೋಗಕ್ಕೆ ಒಳಗಾಗುವ ಪರಿಸ್ಥಿತಿ ಬಂದಿದೆ.
Leave a Comment