ಅಂಕೋಲಾ :- ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆಯವರು ಪ್ರತಿಯೊಬ್ಬರ ರಕ್ತದ ಬಗ್ಗೆ ಮಾತನಾಡುತ್ತಾರೆ. ಅವರ ಎದುರು ಸ್ಪರ್ಧಿಸಿರುವ ನಾನು ನನ್ನ ರಕ್ತದ ಪರಿಚಯ ಮಾಡಿ ಕೊಡುವುದು ಅನಿವಾರ್ಯವಾಗಿದೆ. ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ಸಂವಿಧಾನವನ್ನ ಪ್ರೀತಿಸುವ ರಕ್ತ,
ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ ಎಂದು ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿರುವ ನಾಗರಾಜ ನಾಯ್ಕ ಹೇಳಿದರು.
ಅವರು ಗುರುವಾರ ಅಂಕೋಲಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ ಐದು ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿಯು ಕೆಲಸ ಮಾಡಿದ ಅನಂತ ಕುಮಾರ್ ಹೆಗಡೆ ಹಿಂದುಳಿದ ಮತ್ತು ಕೆಳ ವರ್ಗದ ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತಿದ್ದಾರೆ.
ಅನಗತ್ಯವಾಗಿ ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿ ಅವರನ್ನು ನಿರುದ್ಯೋಗಿಯನ್ನಾಗಿಸಿ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತಿದ್ದಾರೆ ಎಂದರು.
ರೈತರ, ಅತಿಕ್ರಮಣದಾರರ ಬಗ್ಗೆ ಒಮ್ಮೆಯೂ ಸಂಸತ್ ನಲ್ಲಿ ಮಾತನಾಡದ ಅನಂತ ಕುಮಾರ ಕೋಮು ಗಲಭೆ ಘರ್ಷಣೆಯಲ್ಲೆ ದಿನ ಕಳೆದಿದ್ದಾರೆ.
ಇನ್ನೂ ಕಾಂಗ್ರೇಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕೂಡ ಈ ಹಿಂದೆ ಆಪರೇಷನ್ ಕಮಲಕ್ಕೆ ಒಳಗಾದವರು. ಇಗಲೂ ಗೆದ್ದರೆ ಅದೆ ದಾರಿ ಹಿಡಿಯಲಿದ್ದಾರೆ.
ಮೈತ್ರಿ ಬಗ್ಗೆಯೆ ಗೊಂದಲವಿದ್ದು, ಇನ್ನು ಅನಂತ ಕುಮಾರ ಹೆಗಡೆಯವರನ್ನು ಜನರು ಒಪ್ಪುತ್ತಿಲ್ಲ.
ಇಬ್ಬರ ಪರ್ಯಾಯವಾಗಿ ನಾನು ಸ್ಪರ್ಧಿಸುತಿದ್ದು, ಮತದಾರರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
Leave a Comment