ಹೊನ್ನಾವರ; ಪಟ್ಟಣದ ವಿವಿಧಡೆ ಈ ಹಿಂದೆ ಎಲ್ಲಂದರಲ್ಲಿ ಕಸ ಬಿದ್ದಿರುತ್ತಿತ್ತು. ಪಟ್ಟಣ ಪಂಚಾಯತ ಪೌರ ಕಾರ್ಮಿಕರ ಜೊತೆ ತಾಲೂಕಿನ ವಿವಿಧ ಸಂಘಟನೆಗಳು ಕೈ ಜೋಡಿಸಿ ಮನವರಿಕೆ ಮಾಡುವ ಜೊತೆ ಪ್ರತಿ ವಾರ ಸ್ವಚ್ಚ ಮಾಡುತ್ತಿದೆ. ದುರದೃಷ್ಟವೆಂದರೆ ಸ್ವಚ್ಚ ಮಾಡಿದ ಪ್ರದೇಶದಲ್ಲಿಯೇ ಮತ್ತೆ ಮತ್ತೆ ಕಸವನ್ನು ಬೇಕಾಬಿಟ್ಟಿ ಹಾಕುತ್ತಿದ್ದಾರೆ. ಇದರ ಜೊತೆ ಇದೀಗ ಇನ್ನೊಂದು ಸಮಸ್ಯೆ ಉದ್ಬವವಾಗಿದ್ದು ಮಧ್ಯದ ಬಾಟಲಿಗಳು. ಪ್ರಭಾತನಗರ, ಬಂದರು ಪ್ರದೇಶ, ರಾಮತೀರ್ಥ ಸಮೀಪದ ಬಯಲುಗಳಲ್ಲಿ ರಾತ್ರಿ 7 ಗಂಟೆಯ ನಂತರ ಮಧ್ಯರಾತ್ರಿವರೆಗೂ ಸಾರ್ವಜನಿಕ ಪ್ರದೇಶದಲ್ಲಿ ಕುಳಿತು ಮದ್ಯಪನ ಮಡಿ ಬಾಟಲಿಯನ್ನು ಬಿಸಾಡಿ ಹೋಗುವವರು ಒಂದಡೆಯಾದರೆ ಇನ್ನೂ ಕೆಲವರು ಅದೇ ಬಾಟಲಿಯನ್ನು ಅಲ್ಲಿಯೇ ಓಡೆದು ವಿಕೃತ್ಯ ಮೆರೆಯುತ್ತಿದ್ದಾರೆ. ಇದನ್ನು ಗಮನಿಸಿದ ತಾಲೂಕಿನ ಯುವ ಬ್ರಿಗೇಡ್ ಸಂಘಟನೆಯವರು ಈ ಪ್ರದೇಶದಲ್ಲಿ ಬಿದ್ದಿರುವ ಮಧ್ಯದ ಬಾಟಲಿಯನ್ನು ಸ್ವಚ್ಚ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೇ ಈ ಪ್ರದೇಶ ಪ್ರಶಾಂತವಾದ ಸ್ಥಳವಾಗಿರುದರಿಂದ ನಿತ್ಯ ಸಾರ್ವಜನಿಕರು ವಾಯುವಿಹಾರ, ಸಂಚರಿಸುದರಿಂದ ಅವರಿಗೆ ಭಯದ ವಾತವಾರಣ ನಿರ್ಮಾಣವಾದಂತೆ ಆಗಿದೆ. ಇನ್ನೋಂದಡೆ ಪ್ರತಿಷ್ಟಿತ ವಿದ್ಯಾಸಂಸ್ಥೆ, ಖಾಸಗಿ ಶಾಲೆಗಳು ಇದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಮಾರ್ಗದ ಸಂಚರಿಸುದರಿಂದ ಇವರಿನ ಮನಸ್ಸಿನ ಮೇಲೆ ದುಷ್ಚಟದ ಪರಿಣಾಮ ಮೂಡುವ ಸಾಧ್ಯತೆ ಇರುದರಿಂದ ಈ ಭಾಗದ ಸ್ವಚ್ಚತೆಗೆ ಮುಂದಾದರು. ಸ್ವಚ್ಚ ಮಾಡುವ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಭಟ್ಕಳ ಉಪವಿಭಾಗದ ಡಿವೈಎಸ್ಪಿ ವೈಲಂಟಿನ್ ಡಿಸೋಜಾ ಯುವಕರ ಸಮಸ್ಯೆಯನ್ನು ಆಲಿಸಿ ಕೂಡಲೇ ತಮ್ಮ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ 3 ಪ್ರದೇಶದಲ್ಲಿ ಪೋಲಿಸರನ್ನು ನಿಯೋಜನೆ ಮಾಡುವ ಜೊತೆ ಅಂತಹ ತಪ್ಪು ಮಾಡುವವರನ್ನು ಪತ್ತೆ ಹಚ್ಚುವಂತೆ ಆದೇಶ ಮಾಡಿದ್ದಾರೆ. ಮುಂದಿನ ದಿನದಲ್ಲಿ ಪೋಲಿಸ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳುತ್ತದೆ ಎನ್ನುವ ಭರವಸೆ ನೀಡಿದೆ.
ಈ ಕುರಿತು ಯುವ ಬ್ರೀಗೆಡ್ ಸದಸ್ಯರಲ್ಲಿ ಒರ್ವರಾದ ಅಣ್ಣಪ್ಪ ನಾಯ್ಕ ಮಾತನಾಡಿ ನಾವು ಇಂದು ಸ್ವಚ್ಚ ಮಾಡಿದ್ದೇವೆ ಈ ಮಧ್ಯದ ಬಾಟಲಿಯನ್ನು ವಿಲೇವಾರಿ ಮಾಡುವ ಕೆಲಸ ಪಟ್ಟಣ ಪಂಚಾಯತಿಯವರು ಮಾಡಬೇಕಿದೆ. ಅಲ್ಲದೇ ಪೋಲಿಸ್ ಇಲಾಖೆ ಇಂತಹ ಪ್ರದೇಶದಲ್ಲಿ ಮಧ್ಯವ್ಯಸನ ಮಾಡುವವರ ಮೇಲೆ ನಿಗಾ ಇಡುವ ಭರವಸೆ ನೀಡಿದೆ. ಸಾರ್ವಜನಿಕರಲ್ಲಿ ವಿನಂತಿಸುದೆನೆಂದರೆ ಪರಿಸರ ಸಂರಕ್ಷಣೆ ಕೈಜೋಡಿಸಿ ಎಲ್ಲಡೆ ಕಸವನ್ನು ಎಸೆಯಬೇಡಿ ಎಂದು ಮನವಿ ಮಾಡಿದರು.
ಈ ವ್ಯವಸ್ಥೆ ಸರಿ ಪಡಿಸಲು ಪೋಲಿಸ್ ಹಾಗೂ ಪಟ್ಟಣ ಪಂಚಾಯತಿಯವರು ಒಗ್ಗೂಡಿ ಕೈ ಜೋಡಿಸಬೇಕು. ಮೊದಲು ಪಟ್ಟಣದ ವಿವಿದಢೆ ಸಾರ್ವಜನಿಕ ಸ್ಥಳದಲ್ಲಿ ಕಸದ ತೊಟ್ಟಿ ಇಡಬೇಕು. ಸೂಕ್ಷ್ಮ ಪ್ರದೇಶದ ವಿದ್ಯುತ್ ಕಂಬಗಳಿಗೆ ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೇ ಕೆಟ್ಟು ಹೋದ ಬೀದಿ ದೀಪಗಳನ್ನು ಸರಿಪಡಿಸಬೇಕು. ಪೋಲಿಸ್ ಇಲಾಖೆ ಸಾರ್ವಜನಿಕ ಪ್ರದೇಶದಲ್ಲಿ ಮಧ್ಯಪಾನ ಮಾಡುವವರನ್ನು ಪತ್ತೆ ಹಚ್ಚಿ ಕಾನೂನುಕ್ರಮಕ್ಕೆ ಮುಂದಾದರೆ ಮಾತ್ರ ಈ ಸಮಸ್ಯೆ ಬಗೆಹರಿಸಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಬೇಗ ತನ್ನ ಜವಾಬ್ದಾರಿಯನ್ನು ಇಲಾಖೆ ನಿಭಾಯಿಸಬೇಕಿದೆ,
Leave a Comment