ಹೊನ್ನಾವರ: ತಾಲೂಕಿನ ಶ್ರೀ ಕ್ಷೇತ್ರ ಜಿನ್ನೋಡÀ ಶ್ರೀ ಶಿವಮ್ಮಾ ದುರ್ಗಾದೇವಿ ಮಹಾರಥೋತ್ಸವ ಏ.16 ಮಂಗಳವಾರ ನೆರವೇರಲಿದೆ. ಅಂದು ಬೆಳಿಗ್ಗೆ ಶುದ್ಧಿ ಹವನ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ, ಸಂಜೆ 6 ರಿಂದ 9 ರ ತನಕ ಹರಕೆ ಭಜನೆ, ರಾತ್ರಿ 9-30 ರಿಂದ ಯಕ್ಷಗಾನ ಬಯಲಾಟ “ವೀರಾಭಿಮನ್ಯು ಕಾಳಗ” ನಡೆಯಲಿದೆ.
ಏ.17 ಬುಧವಾರ ಬೆ.10 ಗಂಟೆಗೆ ಸಂಪ್ರೋಕ್ಷಣೆ, 12 ಗಂಟೆಗೆ ಪ್ರಸನ್ನ ಚಂಡಿಕಾ ಹವನ, 1 ಗಂಟೆಗೆ ಪೂರ್ಣಾಹುತಿ, ಮಹಾಪೂಜೆ, ದರ್ಶನ ಮುಖೇನ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಮಹಾಪೂಜೆ ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು ರಾತ್ರಿ “ತಾಳಿ ಭಾಗ್ಯ” ಎಂಬ ಕಥಾ ನಾಟಕ ನಡೆಯಲಿದೆ. ಇದೇ ವೇಳೆ ಶ್ರೀ ದೇವಸ್ಥಾನದ ಅಧ್ಯಕ್ಷರಾದÀ ವಜ್ರನಾಭ ಜಿ. ಗೌಡ, ನುರಿತ ಯಕ್ಷಗಾನ ಕಲಾವಿದ ಚಂದ್ರಹಾಸ ಗೌಡ ಹೊಸಪಟ್ಟಣ, ಕೆ.ಇ.ಬಿ ಲೈನ್ಮನ್ ಗಂಗಾಧರ ನಾಯ್ಕ ಮಂಕಿ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಚಿತ್ತಾರ ಪ್ರೌÀಢಶಾಲೆಗೆ ಪ್ರಥಮ ಬಂದ ಕು. ಸಿಂಧೂ ದೇವೇಂದ್ರ ನಾಯ್ಕ ಇವರುಗಳಿಗೆ ಸನ್ಮಾನ ನೆರವೇರಲಿದೆ. ಜಾತ್ರಾ ತಯಾರಿಗಾಗಿ ಶೀ ದೇವಸ್ಥಾನದ ಅಧ್ಯಕ್ಷರಾದ ವಜ್ರನಾಭ ಜಿ. ಗೌಡ, ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Leave a Comment