ಹಳಿಯಾಳ:- ಗಣೇಶಗುಡಿಯ ಕೆ.ಪಿ.ಸಿ.ಎಲ್. ಸೂಪಾ ಪವರ ಹೌಸನಲ್ಲಿ ತಾಂತ್ರಿಕ ದೋಷದಿಂದ 11 ಕೆ.ವಿ.ಎ. ಅಲ್ಯುಮಿನಿಯಂ ಬಸ್ ಬಾರ್ ಸುಟ್ಟಿದ್ದು, ಸ್ಥಳೀಯವಾಗಿ ಹಾಗೂ ಸುತ್ತಮುತ್ತಲಿನ ಪಟ್ಟಣದಲ್ಲಿ ನುರಿತ ಅಲ್ಯುಮಿನಿಯಂ ವೆಲ್ಡಿಂಗ್ ಮಾಡುವವರು ಇಲ್ಲದ ಕಾರಣ ಕಾರ್ಯನಿರ್ವಾಹಕರ ತುರ್ತು ಕರೆಯ ಮೇರೆಗೆ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವೆಲ್ಡಿಂಗ್ ವಿಭಾಗದ ತರಬೇತಿದಾರರು ಹಾಗೂ ನುರಿತ ವಿದ್ಯಾರ್ಥಿಗಳು ತತಕ್ಷಣ ಧಾವಿಸಿ, ಅಲ್ಯುಮಿನಿಯಂ ಬಸ್ ಬಾರನ್ನು ಟಿಗ್ ವೆಲ್ಡಿಂಗ್ ಮಾಡುವುದರ ಮೂಲಕ ಪುನಃ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಬೇಡಿಕೆ ಅತಿಯಾಗಿರುವ ಈ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಸಕಾಲಕ್ಕೆ ಸಿಕ್ಕ ಸಹಾಯಕ್ಕಾಗಿ ಮತ್ತು ಸಿಬ್ಬಂದಿಯ ಕಾರ್ಯತತ್ಪರತೆ ಹಾಗೂ ಕೌಶಲ್ಯವನ್ನು ಕೆ.ಪಿ.ಸಿ. ಅಧಿಕಾರಿಗಳು ಶ್ಲ್ಯಾಘಿಸಿದ್ದಾರೆಂದು ಅವರು ಹೇಳಿದ್ದಾರೆ.
Leave a Comment