ಹೊನ್ನಾವರ : ಅರಣ್ಯದಲ್ಲಿ ಅಕ್ರಮವಾಗಿ ಬೆಲ್ಲದ ಕೊಡವನ್ನು ಸಂಗ್ರಹಿಸಿಟ್ಟಿರುವುದ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ ಘಟನೆ ತಾಲೂಕಿನ ಜಲವಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಯರಗೋಡು ಸರ್ಕಾರಿ ಅರಣ್ಯ ಪ್ರದೇಶದಲ್ಲಿ 100 ಲೀ. ಸಾಮಥ್ರ್ಯದ ಒಂದು ಪ್ಲಾಸ್ಟಿಕ್ ಬ್ಯಾರೇಲ್ ನಲ್ಲಿ 100 ಲೀ. ಬೆಲ್ಲದ ಕೊಳೆ, 20 ಲೀ. ಸಾಮಥ್ರ್ಯದ 32 ಪ್ಲಾಸ್ಟೀಕ್ ಕೊಡಗಳಲ್ಲಿ 640 ಲೀ. ಬೆಲ್ಲದ ಕೊಳೆ, ಒಟ್ಟೂ 740 ಲೀ. ಬೆಲ್ಲದ ಕೊಳೆಯನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದ್ದು ಪ್ರಕರಣ ದಾಖಲಿಸಿದ್ದಾರೆ. ವಶಪಡಿಸಿಕೊಂಡ ಬೆಲ್ಲದ ಕೊಳೆಯ ಅಂದಾಜು ಒಟ್ಟೂ ಮೌಲ್ಯ ರೂ.37,000 ಆಗಿದೆ. ಆರೋಪಿತರು ಇದುವರೆಗು ಪತ್ತೆಯಾಗಿಲ್ಲ.
ಜಿಲ್ಲಾ ಅಬಕಾರಿ ಉಪ ಆಯುಕ್ತ ಎಲ್ ಎ ಮಂಜುನಾಥರವರ ನಿರ್ದೇಶನದಂತೆ, ಸೀಮಾ ಮರಿಯಾ ಸುವಾರೀಸ್, ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಹೊನ್ನಾವರ ರವರ ಮಾರ್ಗದರ್ಶನದ ಮೇರೆಗೆ, ಸುನೀತಾ, ಅಬಕಾರಿ ನಿರೀಕ್ಷಕರು ಹೊನ್ನಾವರ ವಲಯ ರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಬಕಾರಿ ಉಪ ನಿರೀಕ್ಷಕರಾದ ಬಸವರಾಜ್ ಮುಡಶಿ, ಗೃಹ ರಕ್ಷಕರಾದ ಮಂಜುನಾಥ್ ದೇಶಭಂಡಾರಿ, ಹಾಗೂ ದಾಳಿ ನೌಕರರಾದ ಕೇಶವ ತಿಮ್ಮಪ್ಪ ನಾಯ್ಕ ಮತ್ತು ಮನೋಜ್ ನಾಯ್ಕ ದಾಳಿಯಲ್ಲಿ ಪಾಲ್ಗೊಂಡಿದ್ದರು
Leave a Comment