ಹೊನ್ನಾವರ; ತಾಲೂಕಿನ ಕರ್ಕಿ ಸಮೀಪ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಪಾಲ್ಗೊಂಡಿದ್ದ ಆನಂದ ಅಸ್ನೋಟಿಕರ್ ಈ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಆಯ್ಕೆ ಮಾಡಿದರೆ ಸಂಸತ್ತಿನಲ್ಲಿ ಒಮ್ಮೆಯು ಧ್ವನಿ ಎತ್ತಲಿಲ್ಲ. ಇಡೀ ರಾಷ್ಟ್ರದ ಗಮನ ಸೆಳೆದಿದಿದ್ದು ಮಾತ್ರ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ವಿವಾದಾತ್ಮಕ ಹೇಳಿಕೆ ಮೂಲಕ. ಸಂಸತ್ತಿನ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಜಿಲ್ಲೆಯ ಮರ್ಯಾದೆ ತೆಗೆದ ಮಹಾನುಭಾವ ಎಂದು ಟೀಕಿಸಿದರು. ಕಳೆದ 5 ಅವಧಿಯಲ್ಲಿ ನಿಮ್ಮ ಕೊಡುಗೆ ಏನು ಅಂದರೆ ಮೋದಿಯತ್ತ ಕೈ ತೋರಿಸುವ ಈತನ ಸಾಧನೆಯೇ ಇಲ್ಲ. ನನಗೆ ಮೋದಿ ಪೋಟೋ ಒಂದು ಸಾಕು. ಕಾರ್ಯಕರ್ತರು ಬೇಡ. ಜಿಲ್ಲೆಯ ಸಮಸ್ಯೆಯು ಬೇಡ ಎನ್ನುತ್ತಾರೆ. ಇನ್ನೊಂದಡೆ ನಾನು ಆಯ್ಕೆ ಆಗಿರುವುದು ಸಮಾಜಸೇವೆ ಮಾಡಲು ಅಲ್ಲ ರಾಜಕಾರಣ ಮಾಡಲು ಎನ್ನುತ್ತಾರೆ. ಚುನಾವಣೆ ಸಮಯದಲ್ಲಿ ನಾನು ಧರ್ಮರಕ್ಷಣೆ ಮಾಡಲು ಎನ್ನುತ್ತಾನೆ. ಧರ್ಮ ರಕ್ಷಣೆ ಮಾಡುವುದಾದರೆ ಮಠ ಸೇರಿ ಮಾಡಲು ಸಂಸದನಾಗಲು ಮಾಡಲು ಸಾಧ್ಯವಿಲ್ಲ. ಅಲ್ಲಲ್ಲಿ ನಾಲಿಗೆ ಹರಿಬಿಟ್ಟು ಇನ್ನೊಂದು ಜನಾಂಗವನ್ನು ಟೀಕಿಸುವುದೆ ಇವನ ಸಾಧನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಜಿಲ್ಲೆಯ ಜನತೆ ಸಮಸ್ಯೆ ಇದ್ದಾಗ ಬರದೇ ಇದ್ದವನು ಹೆಣದ ಮೇಲೆ ರಾಜಕೀಯ ಮಾಡಿ ಲಾಭ ಗಳಿಸುದಕ್ಕೆ ಮಾತ್ರ ಸೀಮೀತನಾದ ಸಂಸದ. ರಾಷ್ಟ್ರದಲ್ಲಿ ಅಭಿವೃದ್ದಿ ಮಾಡದೇ ಇರುವ ಸಂಸದರಲ್ಲಿ ಇವರ ಹೆಸರು ಮೊದಲು ಇಂತಹ ಸಂಸದರನ್ನು ಈ ಬಾರಿ ಮನೆಗೆ ಕಳುಹಿಸಲು ಜನರು ತಿರ್ಮಾನಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ ಇಷ್ಟು ಅವಧಿಯಲ್ಲಿ ಆಯ್ಕೆಯಾದರೂ ಒಂದು ಕೆಲಸ ಮಾಡದ ಸಂಸದರು ಜಾತಿ ಮತ್ತು ಧರ್ಮದ ನಡುವೆ ವಿಷ ಬೀಜ ಬಿತ್ತುವುದಕ್ಕೆ ಮಾತ್ರ ಸೀಮೀತರಾಗಿದ್ದಾರೆ. ಕ್ಷೇತ್ರದ ಸಮಸ್ಯೆ ಬಗೆಹರಿಸಲು ಮೈತ್ರಿ ಅಭ್ಯರ್ಥಿ ಬೆಂಬಲಿಸುವಂತೆ ಕರೆ ನೀಡಿದರು.
ತಾ.ಪಂ. ಸದಸ್ಯ ತುಕಾರಂ ನಾಯ್ಕ ಮಾತನಾಡಿ ಹಿಂದು ಹಡುಗಿಯರ ಅನ್ಯ ಧರ್ಮದವರು ಮುಟ್ಟಿದರೆ ಕೈ ಕಡಿಯಿರಿ ಎಂದು ಹೇಳಿಕೆ ನೀಡುವ ಇವರು ಇವರ ಸ್ನೇಹಿತ ಫಯಾಜ್ ಎರಡು ಹಿಂದುಗಳನ್ನು ಮದುವೆ ಆಗಿದ್ದಾನೆ ಆಕೆಲಸ ಮಾಡಲು ಇವನೇ ಮುಂದಾಗುತ್ತಾರಾ? ಎಂದು ಪ್ರಶ್ನಿಸಿ ಕೇವಲ ಕೋಮು ಪ್ರಚೋದನೆಗೆ ಹಿಂದುಳಿದವರಿಗೆ ಪ್ರೇರೆಪಿಸಿ ರಾಜಕೀಯ ಲಾಭ ಗಳಿಸುವುದಷ್ಟೆ ಇವರ ಕೆಲಸ. ಈ ಬಾರಿ ಯಾವ ಅಲೆಯು ಇಲ್ಲ ಜನರ ಇವರ ಅಹಂಕಾರವನ್ನು ಸಂಹಾರ ಮಾಡುತ್ತಾರೆ ಎಂದು ಕಾರ್ಯ ವೈಖರಿಯನ್ನು ಟಿಕೀಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ, ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ, ಜೆಡಿಎಸ್ ತಾಲೂಕ ಅಧ್ಯಕ್ಷ ಸುಬ್ರಾಯ ಗೌಡ, ಜೆಡಿಎಸ್ ಮುಖಂಡ ಗಣಪಯ್ಯ ಗೌಡ ಸೇರಿದಂತೆ ಎರಡು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Leave a Comment