ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇಶಭಕ್ತ ಮೋದಿ ನೇತೃತ್ವದಲ್ಲಿ ಎಲ್ಲ ದೇಶಭಕ್ತರು ಒಂದಾಗಿ ದೇಶದ್ರೋಹಿಗಳ ಮತ್ತು ಬ್ರಷ್ಟಾಚಾರಿಗಳ ಮಹಾಮಿಲಾವಟನ್ನು ಸೋಲಿಸಬೇಕಾಗಿದೆ. ಆದ್ದರಿಂದ ಇದು ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಯಾವ ದೇವರಿಗೆ ಯಾವ ಪೂಜೆ ಮಾಡಬೇಕು ಎಂದು ನಿಮಗೆ ಗೊತ್ತಿದೆ. ದೇಶವನ್ನು ಕಾಡುತ್ತಿರುವ, ಮಾತ್ರವಲ್ಲ ಜಗತ್ತನ್ನು ಕಾಡುತ್ತಿರುವ ಭಯೋತ್ಪಾದನೆಯನ್ನು ಮೆಟ್ಟಿ ಹಾಕಿ ಮುಂದಿನ ತಲೆಮಾರಿಗೆ ಒಳ್ಳೆಯ ದಿನವನ್ನು ಕೊಡಬೇಕಾಗಿದೆ. ಎಲ್ಲ ಜಾಗತಿಕ ವೇದಿಕೆಯಲ್ಲಿ ಇದರ ಮಹತ್ವವನ್ನು ಹೇಳಿದ ಮೋದಿಯವರಿಗೆ ಜಗತ್ತು ತಲೆಬಾಗುತ್ತಿದೆ. ದೇಶ ಬ್ರಷ್ಟಾಚಾರದಿಂದ ಕುಸಿದು ಹೋಗಿದೆ. ಜೈಲಿಗೆ ಹೋಗಬೇಕಾದವರನ್ನು ಅಲ್ಲಿಗೆ ಕಳುಹಿಸಿ, ಇಲ್ಲಿ ದೇಶಕಟ್ಟಬೇಕಾದ ಮುಂದಿನ ದಿನಗಳಿಗಾಗಿ ಕಮಲಕ್ಕೆ ಮತಕೊಡಿ ಎಂದು ಕೇಳಿಕೊಂಡರು. ಬಹಿರಂಗ ಪ್ರಚಾರದ ಎರಡು ಗಂಟೆಯ ಮೊದಲು ಸಚಿವ ಅನಂತಕುಮಾರ ಹೆಗಡೆ, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿಯವರೊಂದಿಗೆ ರೋಡ್ ಶೋ ನಡೆಯಿತು. ಕೋಟಾ ಶ್ರೀನಿವಾಸ್ ಪೂಜಾರಿ ಚುನಾವಣಾ ಫಲಿತಾಂಶದ ಬಳಿಕ ಎಲ್ಲಿದ್ದೀರಿ ಎನ್ನುವ ಪ್ರಶ್ನೆ ನಿಮಗೆ ಕೇಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಚುನಾವಣಾ ಸೋಲು ಗೆಲುವು ದೇಶಪಾಂಡೆಗೆ ಬಿಟ್ಟ ವಿಚಾರ ಎನ್ನುತ್ತಾರೆ, ದೇಶಪಾಂಡೆ ಚುನಾವಣೆಯ ಸೋಲು ಗೆಲುವು ನಿಮಗೆ ಬಿಟ್ಟಿದ್ದು ಹೇಳುತ್ತಾರೆ ಒಟ್ಟಾರೆ ಚುನಾವಣಾ ಮೊದಲೇ ಅನಂತಕುಮಾರ್ ಗೆಲುವು ಖಚಿತ ಎನ್ನುವಂತಿದೆ. ದೇಶದಲ್ಲಿ ಮೋದಿ ಬಳಿಕ ಅತಿ ಹೆಚ್ಚು ಮತದ ಅಂತರದಿಂದ ಅನಂತ ವಿಜಯಿ ಆಗುತ್ತಾರೆ ಭವಿಷ್ಯ ನುಡಿದರು. ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ ಮಹಾಘಟಬಂಧನ ರಚಿಸಿಕೊಂಡು ಅಧಿಕಾರದ ಚುಕ್ಕಾಣಿ ಕನಸು ಕಾಣುತ್ತಿರುವವರಿಗೆ ಪ್ರಧಾನಿ ಅಭ್ಯರ್ಥಿಯೇ ಸ್ಪಷ್ಟವಿಲ್ಲ. 90 ವರ್ಷದ ಮುದುಕ ದೇವೆಗೌಡ ಕೂಡಾ ಪ್ರಧಾನಿ ಕನಸು ಕಾಣುತ್ತಿದ್ದು, ಅವರ ಕನಸು ನನಸಾಗದು. ಆದರೆ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಮತದ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಭಟ್ಕಳ ಶಾಸಕ ಸುನೀಲ ನಾಯ್ಕ ಮಾತನಾಡಿ ಭಟ್ಕಳ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತದ ಅಂತರದಿಂದ ಗೆಲ್ಲಿಸುವ ಜವಬ್ದಾರಿ ನಮ್ಮ ಮೇಲಿದ್ದು ಅದನ್ನು ನಿಭಾಯಿಸೋಣ ಎಂದು ಕರೆ ನೀಡಿದರು.
ಪಟ್ಟಣದ ದಂಡಿನದುರ್ಗಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಬಜಾರ್ ರಸ್ತೆ ಮರ್ಗವಾಗಿ ಗೇರುಸೊಪ್ಪಾ ವೃತ್ತದವರೆಗೆ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಯುದ್ದಕ್ಕೂ ಮೋದಿ ಪರ ಘೋಷಣೆ ಮೊಳಗಿದವು.
ರ್ಯಾಲಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಮುಖಂಡರಾದ ಸುಬ್ರಾಯ ವಾಳ್ಕೆ, ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ರ್ತಿ, ಪಟ್ಟಣ ಪಂಚಾಯತ ಸದಸ್ಯ ನಾಗೇಶ ಮೇಸ್ತ, ಸುರೇಶ ಶೆಟ್, ಗ್ರಾಮ ಪಂಚಾಯತ ಅಧ್ಯಕ್ಷರಾದ ಸುರೇಶ ಶೆಟ್ಟಿ, ಟಿ.ಎಸ್.ಹೆಗಡೆ, ಶ್ರೀಕಾಂತ ಮೋಗೇರ, ಮಾಜಿ ಜಿಲ್ಲಾಪಂಚಾಯತ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
Leave a Comment