ಹೊನ್ನಾವರ; ತಾಲೂಕಿನ ಕೆಳಗಿನ ಇಡಗುಂಜಿ, ಮಾಳ್ಕೋಡ ಶ್ರೀ ಕುಮಾರರಾಮ, ಜೈನ ಜಟಗೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ ಏ.25 ರಂದುÉ ನಡೆಯಲಿದೆ. ಹಾಗೂ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಸದ್ಗುರು ಪರಮಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಪುರಾತನ ಕಾಲದಿಂದಲೂ ಪ್ರಸಿದ್ದವಾದ ದೇವಾಲಯವನ್ನು ವಾಸ್ತು ಪ್ರಕಾರ ಆಗಮೋಕ್ರರಿತ್ಯಾ ಅಷ್ಟ ಪಟ್ಟಾಕೃತಿಯಲ್ಲಿ ನಿರ್ಮಿಸಲಾಗಿದೆ. ಶಿಲಾಮಯ ವಾಸ್ತು ಇರುವ ನೂತನ ದೇವಾಲಯವನ್ನು ವೇ. ಜಯರಾಮ ಅಡಿಗಳ ಅಧ್ವೈರ್ಯದಲ್ಲಿ ಏ.À 25 ರ ವರೆಗೆ ನೆರೆವೇರಿಸಲಾಗುತ್ತಿದೆ. ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಮಹಾ ಸಂಕಲ್ಪ, ಪುಣ್ಯಾವಾಚನ, ದೇವಿ ನಾಂದಿ, ಋತ್ವಿಗ್ವರ್ಣನೆ, ಬ್ರಹ್ನಕೂರ್ಚ ಹವನ ಇತ್ಯಾದಿ ನಡೆಯಲಿದೆ. ಸಂಜೆ ಗಣಪತಿ ಪೂಜೆ, ಪುಣ್ಯಾಗವಾಚನ, ಸಪ್ತಶುದ್ಧಿ ದೇವಾಲಯ ಪರಿಗ್ರಹ, ಯಾಗಶಾಲಾ ಪ್ರವೇಶ, ಮಂಟಪ ಸಂಸ್ಕಾರ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ಸಪ್ತಾಧಿವಾಸ ವಾಸ್ತು ಬಲಿ, ದಿಕ್ಛಾಲ ಬಲಿ ಇತ್ಯಾದಿ ನಡೆಯಲಿದೆ.
ಬೆಳಿಗ್ಗೆ ಗಣಪತಿ ಪೂಜೆ,ಪುಣ್ಯಾಗವಾಚನ, ಸ್ಥಾನ ಶುದ್ಧಿ ಹೋಮ,ಬಿಂಬಶುದ್ಧಿ ಹೋಮ, ನವಗ್ರಹ ಹೋಮ, ರತ್ನನ್ಯಾಸಾದಿ ಹವನ ಶುಭಮೂರ್ಹತದಲ್ಲಿ ಶ್ರೀ ಕ್ಷೇತ್ರಪಾಲ, ಶ್ರೀ ಜಟಗೇಶ್ವರ, ಶ್ರೀ ಚೌಡೇಶ್ವರಿ,ಶ್ರೀ ಬೀರ ಶ್ರೀ ಬಾಲರಾಮ. ಶ್ರೀ ಕಾಳರಾಮ, ಶ್ರೀ ಯಕ್ಷಿ, ಶ್ರೀ ನಾಗ, ಶ್ರೀ ಕಾಳು ದೇವತೆಗಳ ಪುನರ್ ಪ್ರತಿಷ್ಠಾಪನಾ ಹಾಗೂ ಶಿಖರ ಪ್ರತಿಷ್ಠೆ, ತತ್ವನ್ಯಾಸ ಪ್ರತಿಷ್ಠಾಹವನ, ಶಕ್ತಿ-ತತ್ವ ಕಲಾ ಪ್ರಾಣ ಪ್ರತಿಷ್ಠಾ ನಿರೀಕ್ಷೆ ಇತ್ಯಾದಿ ನಡೆಯಲಿದೆ. ಸಂಜೆ 108 ಕಲಶ ಸ್ಥಾಪನೆ, ಶಾಂತಿ ಪಾಠ ಅಷ್ಠಾವಧಾನ ಸೇವೆ ಇತ್ಯಾದಿ ನಡೆಯಲಿದೆ.
ಏ.25 ರಂದು ಬೆಳಿಗ್ಗೆ ಕಲಾವೃದ್ಧಿ ಹೋಮ,ಶತರುದ್ರ, ರುದ್ರಹೋಮ, 108 ಕಲಶ ಅಭಿಷೇಕ,ಅವಷಷ್ಠಿ ಹೋಮ, ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವ್ವಾಮೀಜಿ ಪುರ ಪ್ರವೇಶ, ಪೂರ್ಣಾಹುತಿ,ಮಹಾಮಂಗಳಾರತಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಕಲಶ ಪೂಜೆ, ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವ್ವಾಮೀಜಿಗಳ ಪಾದಪೂಜೆಯೊಂದಿಗೆ ಗುರುವಂದನಾ ಕರ್ಯಕ್ರಮ. ಗುರುಗಳ ಆಶೀರ್ವಚನ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7-00 ಗಂಟೆಯಿಂದ ಮಕ್ಕಳ ಮನರಂಜನಾ ಕಾರ್ಯಕ್ರಮ, ರಾತ್ರಿ 9-00 ಗಂಟೆಯಿಂದ ಯಕ್ಷಗಾನ ನಡೆಯಲಿದೆ.ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಪ್ರತಿದಿನವೂ ಆಗಮಿಸಿ ತನು-ಮನ-ಧನಗಳಿಂದ ಸಹಾಯ ಸಹಕಾರ ನೀಡಿ ದೇವರ ಹಾಗೂ ಪರಮಪೂಜ್ಯ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿ ವಿನಂತಿಸಿಕೊಂಡಿದೆ.
Leave a Comment