• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪತ್ರಕರ್ತನಾದವನು ಮೊದಲು ಒದುಗನಾಗಿರಬೇಕು;ರವೀಂದ್ರ ಭಟ್ಟ ಐನಕೈ

April 30, 2019 by Gaju Gokarna Leave a Comment

watermarked hnr 30 pr 2019.

ಹೊನ್ನಾವರ: “ಪತ್ರಕರ್ತನಾದವನು ಮೊದಲು ಒದುಗನಾಗಿರಬೇಕು. ಪತ್ರಕರ್ತರಾದ ತಕ್ಷಣ ನಾವು ಒಬ್ಬ ಒದುಗ ಎನ್ನುವುದನ್ನು ಮರೆಯಬಾರದು ಅದು ಪತ್ರಕರ್ತನಿಗು ಸಮಾಜಕ್ಕು ಒಳ್ಳೆಯದಲ್ಲ. ಯಾವುದೆ ಸುದ್ದಿಯನ್ನು ಒದುಗರ ದೃಷ್ಟಿಯಲ್ಲಿ ನೋಡಬೇಕು ಎಂದು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಅಭಿಪ್ರಾಯಪಟ್ಟರು.

ಕಾಮಕೋಡ ಶ್ರೀ ದೇವಿ ದುರ್ಗಮ್ಮ ದೇವಸ್ಥಾನ ಹಾಚಲಮಕ್ಕಿ ಹೆರಾವಲಿ, ಅರಣ್ಯ ಇಲಾಖೆ ಹೊನ್ನಾವರ ಉಪ ವಿಭಾಗ, ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹೊನ್ನಾವರ ಮತ್ತು ಕಾಮಕೋಡ ಪರಿಸರ ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಚಿಕ್ಕನಕೋಡ ಗ್ರಾಮದ ಕಾಮಕೋಡ ಶ್ರೀ ದೇವಿ ದುರ್ಗಮ್ಮ ದೇವರಕಾಡಿನ ಆವಾರದಲ್ಲಿ ನಡೆದ ಹೊನ್ನಾವರ ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ ಮಾಧ್ಯಮ ಕಾರ್ಯಗಾರ ಉಪನ್ಯಾಸ ಹಾಗೂ ಭಾವ ಲಹರಿ ಪರಿಸರ ಸ್ನೇಹಿ ಕಾರ್ಯಕ್ರಮದ ಮುಖ್ಯ ಅತಿತಿಯಾಗಿ ಅವರು ಮಾತನಾಡಿದರು. ಕಾಡು ಕಲಿಸುವ ಗುಣ ನಮ್ಮ ಇಂದಿನ ಆರೋಗ್ಯಪುರ್ಣ ಸಮಾಜಕ್ಕೆ ಅಗತ್ಯ ಇಂತಹ ಕಾಡಿನಲ್ಲಿ ಸಂಘವನ್ನು ಉದ್ಘಾಟನೆಮಾಡಿದ್ದು ತುಂಭಾ ಸಂತೋಷದ ವಿಷಯ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಮಾತನಾಡಿ ಪರಿಸರದ ಮೇಲೆ ಕಾಳಜಿ ಬಂದಾಗ ಮಾತ್ರ ಮುಂದಿನ ದಿನಗಳಲ್ಲಿ ಅಳಿದು ಉಳಿದ ಪ್ರಕೃತಿ ಪರಿಸರವನ್ನು ಉಳಿಸಿ ಬೇಳಸಲೂ ಸಾದ್ಯ. ಪಕೃತಿ ಬಹಳಷ್ಟು ಇದ್ದಂತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಲವು ಪ್ರದೇಶಕ್ಕೆ ಹೋದರೆ ನೀರಿನ ಅಭಾವ ಎದುರಾಗಿದೆ. ನಾಲ್ಕೂ ಸಾವಿರ ಮಿಲಿಮೀಟರಕ್ಕಿಂತ ಹೆಚ್ಚು ಮಳೆ ಬೀಳುವ ಈ ಪ್ರದೇಶನೆ ಈ ರೀತಿಯಾದರೆ ಕೇಲವೆ ಕೆಲವು ಮಳೆಬೀಳುವ ಪ್ರದೇಶದ ಸ್ಥಿತಿ ಯಾವರೀತಿ ಪರಿಸ್ಥಿತಿ ಇರಬಹುದೆಂದು ಅವಲೋಕಿಸಬಹುದು. ಪ್ರತಿಯೊಂದು ಮನೆಗೆ ರಸ್ತೆ ತಲುಪಿ ಪರಿಸರ ನಾಶವಾಗುತ್ತಿದೆ.ಕೃಷಿಕರೆ ಹೆಚ್ಚಾಗಿರುವ ಜಿಲ್ಲೆಯಾಗಿರುವುದರಿಂದ ಹಿಂದಿನಿಂದಲೂ ಕೃಷಿ ಪ್ರದೇಶ ಒತ್ತುವರಿ ಸಮಸ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆವಹಿಸಿದ್ದ ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಜಿಲ್ಲಾದ್ಯಕ್ಷರಾದ ರಾಧಾಕೃಷ್ಣ ಭಟ್ಟ ಮಾತನಾಡಿ ಪತ್ರಕರ್ತರಲ್ಲಿ ಸಾಮಾಜಿಕ ಕಾಳಜಿ ಬಹಳ ಮುಖ್ಯ.ತಪ್ಪು ಹುಡುಕುವುದಕ್ಕೆ ಮಾತ್ರ ಪತ್ರಕರ್ತರಿರುವುದಲ್ಲ. ಪತ್ರಕರ್ತರಾದವರು ಅಭಿವ್ರದ್ದಿಪರವಾಗಿ, ಜನಪರವಾಗಿ,ಸಮಾಜದ ಪರವಾಗಿ ಕೆಲಸ ಮಾಡಿದಾಗ ಮಾತ್ರ ಉತ್ತಮ ಪತ್ರಿಕೋದ್ಯಮವಾಗುತ್ತೆ ಎಂದರು.
ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ವಿಲಿನವಾಯಿತು. ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಜಿಲ್ಲಾದ್ಯಕ್ಷರಾದ ರಾಧಾಕೃಷ್ಣ ಭಟ್ಟ ಹೊನ್ನಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್ ಜಿ ಹೆಗಡೆ ಅವರಿಗೆ ಅಧಿಕೃತ ಮಾನ್ಯತಾ ಪತ್ರವನ್ನು ಹಸ್ತಾಂತರಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್ ಜಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.
ವೇÉದಿಕೆಯಲ್ಲಿ ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯ ಸುಬ್ರಾಯ ಭಟ್ಟ ಬಕ್ಕಳ, ಹಿರಿಯ ಪತ್ರಕರ್ತ ಜಿ ಯು ಭಟ್ಟ, ವಲಯ ಸಂರಕ್ಷಣಾದಿಕಾರಿ ಶರತ ಶೇಟ್ಟಿ, ಹೊನ್ನಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್ ಜಿ ಹೆಗಡೆ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪರಿಸರ ಬರಹಗಾರ ಶಿವಾನಂದ ಕಳವೆ, ಹಿರಿಯ ಪತ್ರಕರ್ತರಾದ ಕೃಷ್ಣಮೂರ್ತಿ ಹೆಬ್ಬಾರ, ಎಮ್ ಜಿ ನಾಯ್ಕ, ಉಪಸ್ಥಿತರಿದ್ದರು,ತಾಲೂಕಿನ ಹಿರಿಯ,ಕಿರಿಯ ಪತ್ರಕರ್ತರು,ಅರಣ್ಯ ಇಲಾಖಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಹಿರಿಯ ಪತ್ರಕರ್ತ ಎಚ್.ಎಮ್ ಮಾರುತಿ ಸ್ವಾಗತಿಸಿ,ನಿರುಪಿಸಿದರು. ಪತ್ರಕರ್ತ ನಾಗರಾಜ ನಾಯ್ಕ ಖರ್ವಾ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶಿವಾನಂದ ಕಳವೆ ಪರಿಸರದ ಕುರಿತು, ಕೃಷ್ಣಮೂರ್ತಿ ಹೆಬ್ಬಾರ ಕಲೆ-ಸಂಸ್ಕ್ರತಿಯ ಕುರಿತು, ಎಮ್ ಜಿ ನಾಯ್ಕ ಸಾಮಾಜಿಕ ವಿಷಯದ ಕುರಿತು, ನಂದೀಶ ಎಲ್, ಅರಣ್ಯ ಮಹತ್ವದ ಕುರಿತು ಉಪನ್ಯಾಸ ನೀಡಿದರು. ನಂತರ ಭಾವಲಹರಿ ಸಂಗೀತ ಕಾರ್ಯಕ್ರಮ ನಡೆಯಿತು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Devi Durgamma Temple Hachalamakki Heravali, Editor, Forest Department Honnavar Deputy Division, Journalist, Journalist Must Be First, Needed View, Prajavani Executive, Ravindra Bhatta Ainakai, uttara Kannada, View In View, ಅರಣ್ಯ ಇಲಾಖೆ ಹೊನ್ನಾವರ ಉಪ ವಿಭಾಗ, ಉತ್ತರ ಕನ್ನಡ, ದೃಷ್ಟಿಯಲ್ಲಿ ನೋಡಬೇಕು, ದೇವಿ ದುರ್ಗಮ್ಮ ದೇವಸ್ಥಾನ ಹಾಚಲಮಕ್ಕಿ ಹೆರಾವಲಿ, ಪತ್ರಕರ್ತನಾದವನು ಮೊದಲು ಒದುಗನಾಗಿರಬೇಕು, ಪತ್ರಕರ್ತನಿಗು, ಪ್ರಜಾವಾಣಿಯ ಕಾರ್ಯನಿರ್ವಾಹಕ, ರವೀಂದ್ರ ಭಟ್ಟ ಐನಕೈ, ಸಂಪಾದಕ, ಸಮಾಜಕ್ಕು ಒಳ್ಳೆಯದಲ್ಲ, ಸುದ್ದಿಯನ್ನು ಒದುಗರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...