ಹೊನ್ನಾವರ: “ಪತ್ರಕರ್ತನಾದವನು ಮೊದಲು ಒದುಗನಾಗಿರಬೇಕು. ಪತ್ರಕರ್ತರಾದ ತಕ್ಷಣ ನಾವು ಒಬ್ಬ ಒದುಗ ಎನ್ನುವುದನ್ನು ಮರೆಯಬಾರದು ಅದು ಪತ್ರಕರ್ತನಿಗು ಸಮಾಜಕ್ಕು ಒಳ್ಳೆಯದಲ್ಲ. ಯಾವುದೆ ಸುದ್ದಿಯನ್ನು ಒದುಗರ ದೃಷ್ಟಿಯಲ್ಲಿ ನೋಡಬೇಕು ಎಂದು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಅಭಿಪ್ರಾಯಪಟ್ಟರು.
ಕಾಮಕೋಡ ಶ್ರೀ ದೇವಿ ದುರ್ಗಮ್ಮ ದೇವಸ್ಥಾನ ಹಾಚಲಮಕ್ಕಿ ಹೆರಾವಲಿ, ಅರಣ್ಯ ಇಲಾಖೆ ಹೊನ್ನಾವರ ಉಪ ವಿಭಾಗ, ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹೊನ್ನಾವರ ಮತ್ತು ಕಾಮಕೋಡ ಪರಿಸರ ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಚಿಕ್ಕನಕೋಡ ಗ್ರಾಮದ ಕಾಮಕೋಡ ಶ್ರೀ ದೇವಿ ದುರ್ಗಮ್ಮ ದೇವರಕಾಡಿನ ಆವಾರದಲ್ಲಿ ನಡೆದ ಹೊನ್ನಾವರ ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ ಮಾಧ್ಯಮ ಕಾರ್ಯಗಾರ ಉಪನ್ಯಾಸ ಹಾಗೂ ಭಾವ ಲಹರಿ ಪರಿಸರ ಸ್ನೇಹಿ ಕಾರ್ಯಕ್ರಮದ ಮುಖ್ಯ ಅತಿತಿಯಾಗಿ ಅವರು ಮಾತನಾಡಿದರು. ಕಾಡು ಕಲಿಸುವ ಗುಣ ನಮ್ಮ ಇಂದಿನ ಆರೋಗ್ಯಪುರ್ಣ ಸಮಾಜಕ್ಕೆ ಅಗತ್ಯ ಇಂತಹ ಕಾಡಿನಲ್ಲಿ ಸಂಘವನ್ನು ಉದ್ಘಾಟನೆಮಾಡಿದ್ದು ತುಂಭಾ ಸಂತೋಷದ ವಿಷಯ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಮಾತನಾಡಿ ಪರಿಸರದ ಮೇಲೆ ಕಾಳಜಿ ಬಂದಾಗ ಮಾತ್ರ ಮುಂದಿನ ದಿನಗಳಲ್ಲಿ ಅಳಿದು ಉಳಿದ ಪ್ರಕೃತಿ ಪರಿಸರವನ್ನು ಉಳಿಸಿ ಬೇಳಸಲೂ ಸಾದ್ಯ. ಪಕೃತಿ ಬಹಳಷ್ಟು ಇದ್ದಂತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಲವು ಪ್ರದೇಶಕ್ಕೆ ಹೋದರೆ ನೀರಿನ ಅಭಾವ ಎದುರಾಗಿದೆ. ನಾಲ್ಕೂ ಸಾವಿರ ಮಿಲಿಮೀಟರಕ್ಕಿಂತ ಹೆಚ್ಚು ಮಳೆ ಬೀಳುವ ಈ ಪ್ರದೇಶನೆ ಈ ರೀತಿಯಾದರೆ ಕೇಲವೆ ಕೆಲವು ಮಳೆಬೀಳುವ ಪ್ರದೇಶದ ಸ್ಥಿತಿ ಯಾವರೀತಿ ಪರಿಸ್ಥಿತಿ ಇರಬಹುದೆಂದು ಅವಲೋಕಿಸಬಹುದು. ಪ್ರತಿಯೊಂದು ಮನೆಗೆ ರಸ್ತೆ ತಲುಪಿ ಪರಿಸರ ನಾಶವಾಗುತ್ತಿದೆ.ಕೃಷಿಕರೆ ಹೆಚ್ಚಾಗಿರುವ ಜಿಲ್ಲೆಯಾಗಿರುವುದರಿಂದ ಹಿಂದಿನಿಂದಲೂ ಕೃಷಿ ಪ್ರದೇಶ ಒತ್ತುವರಿ ಸಮಸ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆವಹಿಸಿದ್ದ ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಜಿಲ್ಲಾದ್ಯಕ್ಷರಾದ ರಾಧಾಕೃಷ್ಣ ಭಟ್ಟ ಮಾತನಾಡಿ ಪತ್ರಕರ್ತರಲ್ಲಿ ಸಾಮಾಜಿಕ ಕಾಳಜಿ ಬಹಳ ಮುಖ್ಯ.ತಪ್ಪು ಹುಡುಕುವುದಕ್ಕೆ ಮಾತ್ರ ಪತ್ರಕರ್ತರಿರುವುದಲ್ಲ. ಪತ್ರಕರ್ತರಾದವರು ಅಭಿವ್ರದ್ದಿಪರವಾಗಿ, ಜನಪರವಾಗಿ,ಸಮಾಜದ ಪರವಾಗಿ ಕೆಲಸ ಮಾಡಿದಾಗ ಮಾತ್ರ ಉತ್ತಮ ಪತ್ರಿಕೋದ್ಯಮವಾಗುತ್ತೆ ಎಂದರು.
ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ವಿಲಿನವಾಯಿತು. ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಜಿಲ್ಲಾದ್ಯಕ್ಷರಾದ ರಾಧಾಕೃಷ್ಣ ಭಟ್ಟ ಹೊನ್ನಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್ ಜಿ ಹೆಗಡೆ ಅವರಿಗೆ ಅಧಿಕೃತ ಮಾನ್ಯತಾ ಪತ್ರವನ್ನು ಹಸ್ತಾಂತರಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್ ಜಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.
ವೇÉದಿಕೆಯಲ್ಲಿ ಉತ್ತರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯ ಸುಬ್ರಾಯ ಭಟ್ಟ ಬಕ್ಕಳ, ಹಿರಿಯ ಪತ್ರಕರ್ತ ಜಿ ಯು ಭಟ್ಟ, ವಲಯ ಸಂರಕ್ಷಣಾದಿಕಾರಿ ಶರತ ಶೇಟ್ಟಿ, ಹೊನ್ನಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್ ಜಿ ಹೆಗಡೆ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪರಿಸರ ಬರಹಗಾರ ಶಿವಾನಂದ ಕಳವೆ, ಹಿರಿಯ ಪತ್ರಕರ್ತರಾದ ಕೃಷ್ಣಮೂರ್ತಿ ಹೆಬ್ಬಾರ, ಎಮ್ ಜಿ ನಾಯ್ಕ, ಉಪಸ್ಥಿತರಿದ್ದರು,ತಾಲೂಕಿನ ಹಿರಿಯ,ಕಿರಿಯ ಪತ್ರಕರ್ತರು,ಅರಣ್ಯ ಇಲಾಖಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಹಿರಿಯ ಪತ್ರಕರ್ತ ಎಚ್.ಎಮ್ ಮಾರುತಿ ಸ್ವಾಗತಿಸಿ,ನಿರುಪಿಸಿದರು. ಪತ್ರಕರ್ತ ನಾಗರಾಜ ನಾಯ್ಕ ಖರ್ವಾ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶಿವಾನಂದ ಕಳವೆ ಪರಿಸರದ ಕುರಿತು, ಕೃಷ್ಣಮೂರ್ತಿ ಹೆಬ್ಬಾರ ಕಲೆ-ಸಂಸ್ಕ್ರತಿಯ ಕುರಿತು, ಎಮ್ ಜಿ ನಾಯ್ಕ ಸಾಮಾಜಿಕ ವಿಷಯದ ಕುರಿತು, ನಂದೀಶ ಎಲ್, ಅರಣ್ಯ ಮಹತ್ವದ ಕುರಿತು ಉಪನ್ಯಾಸ ನೀಡಿದರು. ನಂತರ ಭಾವಲಹರಿ ಸಂಗೀತ ಕಾರ್ಯಕ್ರಮ ನಡೆಯಿತು.
Leave a Comment