ದಿನಾಂಕ 5/5/2019 ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ.ಕೃಷ್ಣೇಗೌಡರು ಉತ್ತರ ಕನ್ನಡ ಜಿಲ್ಲಾ ಸಮಿತಿ ಮತ್ತು ಹೊನ್ನಾವರ ತಾಲೂಕಾ ಘಟಕ ಏರ್ಪಡಿಸಿದ ಸನ್ಮಾನ ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಹೊನ್ನಾವರದ ಸಾಗರ ರೆಸಿಡೆನ್ಸಿ ಸಭಾ¨ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕನ್ನಡ ರಾಜ್ಯದಲ್ಲಿ ದೊಡ್ಡ ಜಿಲ್ಲೆಯಲ್ಲಿ ಒಂದು ಭೌಗೋಳಿಕವಾಗಿ ಧಾರ್ಮಿಕವಾಗಿ ಪ್ರವಾಸೋದ್ಯಮ ದ್ರಷ್ಟಿಯಿಂದ ತನ್ನದೆ ಆದ ವೈವಿಧ್ಯತೆ ಹೊಂದಿದೆ ಇಲ್ಲಿನ ರಾಜಕಾರಣಿಗಳು ತಮ್ಮ ಜೇಬು ತುಂಬಿಸವ ಕೆಲಸ ಮಾಡುತ್ತಾರೆ ಹೊರತು ಜಿಲ್ಲೆಯ ಸಮಸ್ಯೆ ಬಗ್ಗೆ ಧ್ವನಿ ಎತ್ತುತಿಲ್ಲ.ಮುಂದಿನ ದಿನದಲ್ಲಿ ಜಿಲ್ಲೆಯ ಮತ್ತು ಜನರ ಸಮಸ್ಯೆ ನಮ್ಮ ಸಂಘಟನೆ ಸದಾ ಸಿದ್ಧ ಎಂದು ಹೇಳಿದರು.
ಡಾ||ಶ್ರೀಪಾದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮೊದಲಿನಿಂದಲೂ ಕನ್ನಡ ಪರ ಕೆಲಸ ಮಾಡುತ್ತಾ ಬಂದಿರುತ್ತೇನೆ ಮುಂದೆಯು ಸಹ ನಮ್ಮ ಜಿಲ್ಲೆಯ ಯುವಕರು ಕೆಲಸ ಮತ್ತು ಹೋರಾಟ ಮಾಡುವದಾದಲ್ಲಿ ಯುವಕರಿಗೆ ಮಾರ್ಗ ದರ್ಶನ ಮಾಡಲು ನಾನು ಅವರ ಜೊತೆ ಇರುತ್ತೇನೆಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ನಮ್ಮರಾಜ್ಯಕ್ಕೆ s s l c ಯಲ್ಲಿ ಪ್ರಥಮ ನಾಗಾಂಜಲಿ ಪಿ ನಾಯ್ಕ ಇವಳನ್ನು ರೂ 5001 ಮತ್ತು ಚಿನ್ನ ಲೇಪಿತ ವೆಂಕಟೇಶ್ವರನ ಮೂರ್ತಿ ಯನ್ನು ನೀಡಿ ಸನ್ಮಾನಿಸಲಾಯಿತು.ನಾಗಾಂಜಲಿ ಪಿ ನಾಯ್ಕ ಇವಳು ಮಾತನಾಡಿ ಸಂಘಟನೆ ಮತ್ತು ಪದಾಧಿಕಾರಿಗಳು ಇದೆ ರೀತಿ ಸಹಕಾರ ಕೊಟ್ಟರೆ ಮುಂದೆ IಂS ಮಾಡುವ ಕನಸು ಹೊಂದಿದ್ದೆನೆಂದು ಅಭಿಪ್ರಾಯ ಪಟ್ಟರು.
ಯುವ ಬರಹಗಾರ ಸಂದೀಪ ಭಟ್ರ ಮಾತು ಎಲ್ಲರ ಶ್ಲಾಘನೆಗೆ ಕಾರಣವಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್ ಆರ್ ಗಣೇಶ್ ಮಾತನಾಡಿ ಜಿಲ್ಲಾ ಅಧ್ಯಕ್ಷ ಮತ್ತು ತಾಲೂಕಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಸಹಕಾರದಿಂದ ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಬಲಿಷ್ಠ ಸಂಘಟನೆ ಕಟ್ಟುತ್ತೇವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ನರಸಿಂಹ ಮೂರ್ತಿ ನಾಯ್ಕ ,ರಾಜ್ಯ ಗೌರವ ಅಧ್ಯಕ್ಷ ಡಾ|| ಉಮರ,ರಾಮನಗರ ಜಲ್ಲಾಧ್ಯಕ್ಷ ಶಿವು ಗೌಡ ,ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಯಶೋದಾ ಬಿರಡೆ ಬೆಳಗಾವಿ ,ರಾಜ್ಯ ಮಹಿಳಾ ಸಂಚಾಲಕಿ ಸುನಂದಮ್ಮ ದಾವಣಗೆರೆ,ಹೊನ್ನಾವರದ ಲತಾ ಗೌಡ ವೇದಿಕೆ ಮೇಲೆ ಉಪಸ್ಥಿತ ರಿದ್ದರು.
ಭಟ್ಕಳ, ಕುಮಟಾ, ಅಂಕೋಲಾ, ಸಿದ್ದಾಪುರ, ಶಿರಸಿ ತಾಲ್ಲೂಕಿನ ಪದಾಧಿಕಾರಿಗಳಿಗೆ ಸಂಘದ ಶಾಲು ಮತ್ತು ನೇಮಕಾತಿ ಪತ್ರ ನೀಡಲಾಯಿತು.
ನಮ್ಮ ಜಿಲ್ಲೆಗೆ ಬಂದ ರಾಜ್ಯ ಅಧ್ಯಕ್ಷ ರನ್ನು ಜಿಲ್ಲಾ ಸಮಿತಿ ಪರವಾಗಿ ಡಾ|| ಶ್ರೀಪಾದ ಶೆಟ್ಟಿ ಅವರು ಸನ್ಮಾನಿಸಿದರು.ನಮ್ಮ ಜಿಲ್ಲೆಯ ಗೌರವಾಧಯಕ್ಷರಾಗಿ ಡಾ|| ಶ್ರೀಪಾದ ಶೆಟ್ಟಿ ಅವರನ್ನು ಎಚ್ ಆರ್ ಗಣೇಶ್ ಮತ್ತು ರಾಜ್ಯ ಅಧ್ಯಕ್ಷ ರು ಘೋಷಿಸಿದರು.
ಕುಮಾರಿ ಯಶಸ್ವಿನಿ ಭಟ್ ಇವಳ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ,ಬಾಲಚಂದ್ರ ನಾಯ್ಕ (ಹೊನ್ನಾವರ ತಾಲ್ಲೂಕಾಧ್ಯಕ್ಷರು) ಸ್ವಾಗತಿಸದರು,ವಂದನಾರ್ಪಣೆಯನ್ನು
ಜಿಲ್ಲಾ ಕಾರ್ಯಾಧ್ಯಕ್ಷರ ದೀಪಕ ನಾಯ್ಕ ನೆರವೇರಿಸಿದರು.ಕಾರ್ಯಕ್ರಮದ ನಿರೂಪಣೆ ಯನ್ನು ಬಿ.ಎಂ.ಭಟ್ ಶಿಕ್ಷಕರು ನೆರವೇರಿಸಿದರು.
Leave a Comment