ಹಳಿಯಾಳ: ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಹಳಿಯಾಳ ತಾಲೂಕಿನಾದ್ಯಂತ ಶೃದ್ದಾಭಕ್ತಿ, ವಿಜೃಂಭನೆಯಿಂದ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಮರಾಠಾ ಜನಾಂಗದವರೇ ಸಿಂಹಪಾಲಿರುವ ಹಳಿಯಾಳ ತಾಲೂಕಿನಾದ್ಯಂತ ಶಿವಾಜಿ ಜಯಂತಿ ಎಂದರೇ ಹಬ್ಬದ ವಾತಾವರಣದೊಂದಿಗೆ ಎಲ್ಲೆಡೆ ಕೆಸರಿಮಯ ವಾತಾವರಣ ಮನೆ ಮಾಡಿರುತ್ತದೆ.
ಈ ಬಾರಿ ಹಳಿಯಾಳ ಪಟ್ಟಣದಲ್ಲಿ ಶಿವಾಜಿ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಜಯಂತ್ಯೋತ್ಸವ ಅಂಗವಾಗಿ ಪಟ್ಟಣದ ಗುತ್ತಿಗೇರಿಗಲ್ಲಿಯ ಶ್ರೀ ಶಿವಾಜಿ ಯುವಕ ಮಂಡಳದವರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಹುಬ್ಬಳ್ಳಿಯ ಪದ್ಮಶ್ರೀ ಆರ್ಬಿ ಪಾಟೀಲ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಈ ಭಾಗದ ಹಾಗೂ ಇತರೆಡೆಯ ಸುಮಾರು 31 ಕ್ಕೂ ಅಧಿಕ ಯುವಕರು ರಕ್ತದಾನ ಮಾಡುವುದರೊಂದಿಗೆ 31 ಯುನಿಟ್ ರಕ್ತ ಸಂಗ್ರಹಿಸಲಾಗಿದೆ.
ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಅನಿಲ್ ಮುತ್ನಾಳ್, ಚೂಡಪ್ಪಾ ಬೋಬಾಟಿ, ತುಕಾರಾಮ, ತಾನಾಜಿ ಪಟ್ಟೇಕರ, ವಿಜಯ ಬೋಬಾಟಿ, ಸಂತೋಷ ಘಟಕಾಂಬಳೆ, ಬಾಬಿ ತೊರ್ಲೆಕರ, ಪ್ರವೀಣ, ಶಿವಾಜಿ, ಗಣಪತಿ ಸೇರಿದಂತೆ ಅನೇಕರು ರಕ್ತದಾನ ಶಿಬಿರಕ್ಕೆ ಭೆಟಿ ನೀಡಿ ಕೆಲವರು ರಕ್ತದಾನ ಮಾಡಿದರೇ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು. ಇಲ್ಲಿ ಬಾಲ ಶಿವಾಜಿಯ ತೊಟ್ಟಿಲನ್ನು ತೂಗಿ ಅಶ್ವಾರೂಢ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಶಿವಾಜಿ ಜಯಂತಿಯನ್ನು ಅವರು ಆಚರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುನೀಲ್ ಹೆಗಡೆ ಶಿವಾಜಿ ಯುವಕ ಮಂಡಳದವರು ನಡೆಸಿದ ರಕ್ತದಾನ ಶಿಬಿರ ಎಲ್ಲರಿಗೂ ಮಾದರಿಯಾಗಿದೆ. ಶಿವಾಜಿ ಮಹಾರಾಜರು ಒಬ್ಬ ಅಪ್ರತಿಮ ರಾಷ್ಟ್ರಭಕ್ತ ಅವರ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ನಡೆದರೇ ದೇಶ ಹಾಗೂ ಧರ್ಮಕ್ಕಾಗಿ ನಮ್ಮ ಜೀವಿತಾವಧಿಯಲ್ಲಿ ಏನಾದರೂ ಕೊಡುಗೆ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
Leave a Comment