ಹೊನ್ನಾವರ: ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿದ ಹೊನ್ನಾವರ ಕಾಸರಕೋಡಿನ ಕಲ್ಪತರು ಹೊಟೆಲ್ ಮ್ಯಾನೆಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಿಂದ ಮೋಸ ಹೋದ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.
ಕಲ್ಪತರು ಸಂಸ್ಥೆಯ ಪ್ರಾಂಶುಪಾಲ ಗಂಗಾದರನ್ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 53 ವಿದ್ಯಾರ್ಥಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿ ಪಂಗನಾಮಹಾಕಿ ಅಲ್ಲಿಯ ಸನ್ ಇಂಟರ್ನ್ಯಾಶನಲ್ ಹೊಟೆಲ್ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಹೊಟೆಲ್ನಲ್ಲಿ ತಂಗಿದ್ದ ವಿದ್ಯಾರ್ಥಿಗಳೆಲ್ಲರು ತಮ್ಮ ಸ್ವಂತ ಹಣದಿಂದ ಹೋಟೆಲ್ ಬಿಲ್ ಕಟ್ಟಿ ಸುರಕ್ಷಿತವಾಗಿ ವಾಪಾಸಾಗಿದ್ದಾರೆ. ತಮಗೆ ಅನ್ಯಾಯ ಮಾಡಿದ ಸಂಸ್ಥೆಗೆ ಭೇಟಿ ನೀಡಿ ಕಳೆದುಕೊಂಡ ಹಣವನ್ನು ಶಿಘ್ರವಾಗಿ ವಾಪಾಸ್ ಕೋಡಿಸಬೇಕೆಂದು ಇದೇ ವೇಳೆ ವಿದ್ಯಾರ್ಥಿಗಳು ಆಗ್ರಹಿಸಿದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಅಡ್ಮಿಶನ್ಗೆ ನೀಡಿದ ಅಂಕಪಟ್ಟಿ ಮತ್ತಿತರ ದಾಖಲೆಗಳನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಪತರು ಸಂಸ್ಥೆಯ ಉಪನ್ಯಾಶಕ ರೋಶನ್ ಮಾತನಾಡಿ “ನಿಮ್ಮ ಜೊತೆ ನಾನು ಮೋಸ ಹೋಗಿದ್ದೇನೆ ಎನ್ನುವುದು ನನಗೆ ಈಗ ತಿಳಿದಿದೆ. ನನಗು ಸಂಬಳ ನೀಡಿರಲಿಲ್ಲ. ನಾನು ಸಂಬಳ ಕೇಳಿದಾಗ ಇಂದು ಕೋಡುತ್ತೇನೆ ನಾಳೆ ಕೋಡುತ್ತೇನೆ ಎಂದು ಸತಾಯಿಸಿದ್ದಾರೆ. ಅವರಿಗೆ ಮಾತು ಬಂಡವಾಳವಾಗಿದ್ದು ನಿಮಗೆ ತಿಳಿದದಿದೆ. ಇಷ್ಟು ದಿನ ಮಾತಿನಲ್ಲಿ ಮರಳು ಮಾಡುತ್ತಾ ಬಂದಿದ್ದಾರೆ. ನಾನು ಬೋರ್ಡ ಜೊತೆ ಮಾತನಾಡಿ ವಿಷಯ ತಿಳಿಸಿದ್ದೇನೆ” ಎಂದರು.
ಹಣಕಳೆದುಕೊಂಡು ದೆಹಲಿಯಿಂದ ವಾಪಾಸ್ಸಾದ ವಿದ್ಯಾರ್ಥಿ ಸಿದ್ದಾಪುರ ಮೂಲದ ಹೇಮಂತ ನಾಯ್ಕ ಮಾತನಾಡಿ “ಹಾಂಗ್ಕಾಂಗ್ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ನಂಬಿಸಿದ್ದಾರೆ. ನಾವು ರೂ.1ಲಕ್ಷದ 10 ಸಾವಿರ ಹಣ ತುಂಬಿದ್ದೇವೆ ಎಂದು ಅಳಲು ತೊಡಿಕೊಂಡರು.
ಪಾಲಕರಾದ ಸಿದ್ದಾಪುರ ಮೂಲದ ಬಿ.ಕೆ ನಾಯ್ಕ ಮಾತನಾಡಿ “ಕಳೆದ 8 ತಿಂಗಳ ಹಿಂದೆ ಸಂಸ್ಥೆಯವರು ಹಣ ತುಂಬಿ, ನಿಮ್ಮ ಮಗನನ್ನು ಕುವೈತ್ಗೆ ಕಳುಹಿಸುತ್ತೇನೆ ಎಂದಿದ್ದರು. ನಾವು ಹಣ ತುಂಬಿದ ನಂತರ ಇಲ್ಲಸಲ್ಲದನ್ನು ಹೇಳಿ ನಂತರ ದುಬೈಗೆ ಕಳುಹಿಸುತ್ತೇನೆ ಎಂದು ಭರವಸೆ ನಿಡಿದರು. ಕಳೆದ ವಾರ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ದೆಹಲಿಗೆ ಕರೆದೊಯ್ದು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹೊಟೆಲ್ ಬಿಲ್ನ್ನು ನಮ್ಮ ಮಕ್ಕಳೆ ತುಂಬಿ ಊರಿಗೆ ಬಂದಿದ್ದಾರೆ. ನಾನು ಪಾಲಕನಾಗಿ ಮೋಸಮಾಡಿದವರ ಮೇಲೆ ಪ್ರಕರಣ ದಾಖಲಿಸುತ್ತೇನೆ. ಹಣವನ್ನು ಕಳೆದುಕೊಂಡವರಿಗೆ ಹಣ ಸೀಗಬೇಕು ಇನ್ನಾರಿಗು ಇತರಹ ಆಗಬಾರದು ಎಂದರು.
ಒಟ್ಟಿನಲ್ಲಿ ಪೊಲೀಸರು ಯಾವ ರೀತಿಯಲ್ಲಿ ತನಿಖೆ ನಡೆಸಿ ಹಣಕಳೆದುಕೊಂಡವರಿಗೆ ಹಣ ಒದಗಿಸಿಕೊಡ್ತಾರೆ ಕಾದು ನೋಡಬೇಕಿದೆ.
Leave a Comment