ಹೊನ್ನಾವರ: ಹೊನ್ನಾವರದ ರಾಮತೀರ್ಥದಲ್ಲಿ ನಿರ್ಮಿಸಿದ ಆಕ್ರಮ ಗ್ಯಾಸ್ ಸಿಲೆಂಡರ್ ಸಂಗ್ರಹಾಗಾರದ ವಿರುದ್ದ ಸ್ಥಳೀಯ ನಿವಾಸಿಗಳು 2015ರಲ್ಲಿ ತಕರಾರು ಸಲ್ಲಿಸಿದ್ದರು. ವಿಧಾನ ಪರಿಷತ್ತಿನ ಅರ್ಜಿ ಪರಿಶೀಲನಾ ಸಮಿತಿಯು ತಕರಾರು ಅರ್ಜಿ ಪರಿಶೀಲಿಸಿ ಸ್ಥಳ ಪರಿಶೀಲಿಸುವಂತೆ ಮತ್ತು ಪ್ರತ್ಯಕ್ಷ-ಸತ್ಯ ವರದಿ ನೀಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಆಯುಕ್ತರಿಗೆ ಆದೇಶಿಸಿತ್ತು. ಅದರಂತೆ ಆಯುಕ್ತರು ತಮ್ಮ ಸಹದ್ಯೋಗಿ ಹಾಗೂ ಸ್ಥಳೀಯ ತಹಸೀಲ್ದಾರ ಕಚೇರಿಯ ಸಿಬ್ಬಂಧಿಗಳೊಂದಿಗೆ ಸ್ಥಳಕ್ಕೆ ಬಂದು ತಕರಾರುದಾರರೊಂದಿUಹಾಗೂ ಆಪಾದಿತ ರಾಘು ವಿಠ್ಠಲ ನಾಯ್ಕನೊಂದಿಗೆ ವಿಷಯ ಕೇಳಿ ಕೊಂಡರು.
ಸ್ಥಳೀಯರು ಚನ್ನೈನ್ ಎಕ್ಸ್ಪೊಸಿವ್ ಕಛೇರಿಯಿಂದ ನೀತಿನಿಯಮಗಳನ್ನು ಉಲ್ಲಂಘಿಸಿ ಗ್ಯಾಸ್ ಗೋಡಣ ನಿರ್ಮಿಸಿರುವ ಬಗ್ಗೆ ಸಾಕ್ಷಾಧಾರ ಸಲ್ಲಿಸಿದರು. ಅಂತೆಯೇ ಪಟ್ಟಣ ಪಂಚಾಯತ ಹಿಂದಿನ ಮುಖ್ಯಾಧಿಕಾರಿ ಸಹಿತ ನಾಲ್ವರು ಉಪಲೋಕಾಯುಕ್ತರಿಂದ ದಂಡನೆಗೆ ಒಳಗಾಗ ಬಗ್ಗೆ ಮತ್ತು ರಾಘು ವಿಠ್ಠಲ ನಾಯ್ಕ ಸರಕಾರವನ್ನು ವಂಚಿಸಿ ಸುಳ್ಳು ದಾಖಲೆಗಳನ್ನು ಒದಗಿಸಿದ ಬಗ್ಗೆ ತಿಳಿಸಿದರು.
Leave a Comment