ಹೊನ್ನಾವರ , ಜಿಲ್ಲಾ ಹಳ್ಳೇರ ಸಮಾಜದವರು ಹೊನ್ನಾವರ ತಾಲೂಕಿನ ಗೆರುಸೊಪ್ಪ ಶ್ರೀ ಬಂಗಾರಮಕ್ಕಿಯಲ್ಲಿ ಜಿಲ್ಲಾ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿದ್ದರು. 24 ಹಳ್ಳಿಯಿಂದ ಬಂದಂತಹ ಎಲ್ಲಾ ಹಳ್ಳೇರ ಸಮಾಜದ ಯಜಮಾನ ಮತ್ತು ಕೋಲ್ಕಾರರನ್ನು ಸನ್ಮಾನಿಸಲಾಯಿತು. ಎಲ್ಲಾ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳೇರ ಸಮಾಜದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಮಾರುತಿ ಗುರೂಜಿಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘದ ಕುರಿತು ಆಶಿರ್ವಚನ ಮಾಡಿದರು. ಕಾರ್ಯಕ್ರಮದ ಸಭಾದೈಕ್ಷತೆಯನ್ನು ಸಂಘದ ನಾಗೇಶ ಹಳ್ಳೇರ ವಹಿಸಿದ್ದರು. ಈ ಸಂದರ್ಭದಲ್ಲಿ ನಗರಬಸ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನ್ನಪೂರ್ಣ ಶಾಸ್ತ್ರಿ, ಗಣಪಿ ಹಳ್ಳೇರ ಸಂಘದವರಾದ ಹನ್ಮಂತ ಹಳ್ಳೇರ, ಬೊಮ್ಮಯ್ಯ ಹಳ್ಳೇರ, ಮಂಜುನಾಥ ಹಳ್ಳೇರ, ಮತ್ತು ಸಂತೋಷ ಪೈ ಮುಂತಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿಯಾದ ಮಾದೇವ ಹಳ್ಳೇರ ಸ್ವಾಗತಿಸಿದರು. ಸುಕ್ರಯ್ಯ ಹಳ್ಳೇರ ವಂದಿಸಿದರು. ಕಾರ್ಯಕ್ರಮವನ್ನು ಗಣೇಶ ಹಳ್ಳೇರ ನಿರೂಪಿಸಿದರು.
Leave a Comment