ಹಳಿಯಾಳ:- ನಮ್ಮವನಾಗಿ ಮರಾಠರಿಗೆ ಬೆಂಬಲ ನೀಡುತ್ತಿರುವಿ. ನೀನು ಹೆಗೆ ಹಳಿಯಾಳದಲ್ಲಿ ಜೀವನ ಮಾಡುತ್ತಿ ಎಂದು ಜೀವ ಬೇದರಿಕೆ ಹಾಕಿದ್ದಾರೆಂದು ಹಳಿಯಾಳ ಪುರಸಭೆ ಕಾಂಗ್ರೇಸ್ನ ಚುನಾಯಿತ ಸದಸ್ಯ ಸುರೇಶ ವಗ್ರಾಯಿ ಅವರು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದವರಾದ ವಕೀಲರಾಗಿರುವ ಮೇಘರಾಜ ಮೇತ್ರಿ ಹಾಗೂ 8-10 ಜನರು ತಮಗೆ ಜೀವ ಬೇದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ಇವರ ಮೇಲೆ ಕಾನೂನು ರೀತ್ಯಾ ಯೋಗ್ಯ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ಕೊಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲೇನಿದೆ :- ಪುರಸಭೆ ಸದಸ್ಯ ಸುರೇಶ ನೀಡಿರುವ ದೂರಿನಲ್ಲಿ ದಿ.11 ರಂದು ಮಧ್ಯಾಹ್ನ 4.30 ಗಂಟೆಗೆ ಪಟ್ಟಣದಲ್ಲಿರುವ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ಕಚೇರಿಗೆ ವಕೀಲರಾದ ಮೇಘರಾಜ ಮೇತ್ರಿ ಸೇರಿದಂತೆ 8-10 ಜನರು ಏಕಾಏಕಿ ನುಗ್ಗಿ ಒಬ್ಬ ಹುಡುಗ ಹಾಗೂ ರಜಪೂತ ಹುಡುಗಿಯ ವಿಷಯದಲ್ಲಿ ಏಕೆ ಕಾಳಜಿ ವಹಿಸುತ್ತಿದ್ದೀರಾ ? ನಮ್ಮ ಜಾತಿಯ ಹುಡುಗನಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಬೈಯುತ್ತ ಧಮಕಿ ಹಾಕಿ ಜೀವ ಬೇದರಿಕೆ ಹಾಕುತ್ತಿದ್ದಾಗ ನಾನು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಲು ಮುಂದಾದಾಗ ತಮಗೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೇದರಿಕೆ ಹಾಕಿದ್ದಾರೆಂದು ಸದಸ್ಯ ಸುರೇಶ ವಗ್ರಾಯಿ ದೂರಿನಲ್ಲಿ ವಿವರಿಸಿದ್ದಾರೆ.
ಒಟ್ಟಾರೆಯಾಗಿ ಯುವಕ-ಯುವತಿಯ ಪ್ರೇಮ ಹಾಗೂ ವಿವಾಹ ಪ್ರಕರಣ ಇತ್ಯರ್ಥದ ವಿಷಯದಲ್ಲಿ ನಡೆದಿದೆ ಎನ್ನಲಾದ ಮಾತಿನ ಚಕಮಕಿಯು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದೂರು-ಪ್ರತಿದೂರಿನೊಂದಿಗೆ ಹಲವು ತೀರುವನ್ನು ಪಡೆದಿರುವುದು ಪಟ್ಟಣದಲ್ಲಿ ಸಾಕಷ್ಟು ಚರ್ಚೆಗೆ ಆಸ್ಪದವಾಗಿದೆ.
Leave a Comment