ಕನ್ನಡ ಜ್ಯೋತಿ ಯುವಕ ಸಂಘ ಗೇರುಸೊಪ್ಪಾ ಇವರ ವತಿಯಿಂದ ಗುರುಕುಲಕ್ಕೆ ಧನಸಹಾಯ ಜೊತೆ ಅಲ್ಲಿಯ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಣೆ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಹೊನ್ನಾವರ ತಾಲೂಕಿನ ವಿವಿದಡೆ ಸಮಾಜಮುಖಿ ಕಾರ್ಯನಡೆಸುವ ಮೂಲಕ ಇತರೆ ಸಂಘಟನೆಗೆ ಮಾದರಿಯಾಗಿರುವ ಗೇರುಸೊಪ್ಪಾ ಕನ್ನಡ ಜ್ಯೂತಿ ಯುವಕ ಸಂಘ ತಾಲೂಕಿನ ಕರ್ಕಿಯ ಶ್ರೀ ದಯಾಶಂಕರ ಗುರುಕುಲದ ವಿದ್ಯಾರ್ಥಿಗಳಿಗೆ ಪೋಷಣೆಯ ಸಲುವಾಗಿ 5 ಸಾವಿರ ಮೊತ್ತದ ಚೆಕ್ ವಿತರಣೆ ನಡೆಸಿದರು. ಅಲ್ಲದೇ ವ್ಯಾಸಂಗ ಮಾಡುತ್ತಿರುವ ಮೇಘಾಲಯದ 34 ನಿರಾಶ್ರೀತ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಿಸಿ ಯೋಗಕ್ಷೇಮ ವಿಚಾರಿಸಿದರು.
ಗುರುಕುಲದ ಸದಸ್ಯರಾದ ವಿಷ್ಣುಭಂಡಾರಿ ಮಾತನಾಡಿ ಯುವಕರು ಒಟ್ಟಾಗಿ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಇಂತಹ ಜನಪರ ಕಾರ್ಯಕ್ರಮವನ್ನು ಮುಂದುವರೆಸಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಕೆಲಸ ಇಂದು ಅತಿಅವಶ್ಯವಾದದು. ಇತರೆ ಸಂಘಟನೆಗೆ ಈ ಸಂಘಟನೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಅಡಿಗದ್ದೆ, ಕಾರ್ಯದರ್ಶಿ ರಘುಪತಿ ನಾಯ್ಕ, ಸದಸ್ಯರಾದ ಕುಮಾರ ನಾಯ್ಕ, ಪ್ರಮೋದ ನಾಯ್ಕ, ತಿಲಕ್ ನಾಯ್ಕ, ಯೋಗೀಶ ನಾಯ್ಕ ಉಪಸ್ಥಿತರಿದ್ದರು.
Leave a Comment