ದಾಂಡೇಲಿ:- ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯು ದಾಂಡೇಲಿ ನಗರದ ವಿವಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ.ದೇಶಪಾಂಡೆಯವರಿಗೆ ಮನವಿ ಸಲ್ಲಿಸಿ ಬಳಿಕ ಸಚಿವರೊಂದಿಗೆ ಮನವಿಯ ಮೇಲೆ ಸುಧೀರ್ಘ ಚರ್ಚೆ ನಡೆಸಲಾಯಿತು.
ಕುಡಿಯುವ ನೀರಿನ ಕರ ಆಕರಣೆ ಮಾಡಿದ ಕುರಿತು ರಾಜ್ಯಾದಂತ್ಯ ಒಂದೇ ಕರ ಇದೆ ಎಂದು ತಿಳಿಸಿದಾಗ ಸಮಿತಿಯವರು ತಿಳಿಸಿದ್ದು ನಗರ ಸಭೆಯವರು ಸರಕಾರದ ಸುತ್ತೋಲೆಯ ಪ್ರಕಾರ ನೀರಿನ ಕರ ಆಕರಣೆ ಮಾಡಿದ್ದು ಇರುವದಿಲ್ಲ. ಅವೈಜ್ಞಾನಿಕ ವಾಗಿದೆ ಎಂದು ಸಮೀತಿಯ ಅಧ್ಯಕ್ಷ ಅಕ್ರಂ ಖಾನ್ ಸಚಿವರಿಗೆ ತಿಳಿಸಿದರು.
ಮಹೇಂದ್ರ ಜೈನ್ ವರದಿ ಜಾರಿಗೆ ಮಾಡಲು ತಿಳಿಸಿದಾಗ ಮಂತ್ರಿಯವರು ಈಗಾಗಲೇ ಸರಕಾರವು ವಿ.ಟಿ.ಯು ನಂತಹ ಅನೇಕ ಯೋಜನೆಗಳು ತರಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು ಈಗಾಗಲೇ ದಾಂಡೆಲಿ ತಾಲೂಕು ಘೋಷಣೆಯಾಗಿದ್ದು ಪೂರ್ಣ ಪ್ರಮಾಣದ ಕಚೇರಿಗಳು ಕಾರ್ಯಾರಂಭ ಮಾಡದ ಕುರಿತು ತಿಳಿಸಿದಾಗ ಸಚಿವರು ಈಗಾಗಲೇ ರಾಜ್ಯದಲ್ಲಿ 50 ಕ್ಕಿಂತ ಹೆಚ್ಚಿಗೆ ತಾಲೂಕಿಗೆ ಘೋಷಣೆಯಾಗಿವೆ ನಾವು ಎಲ್ಲಾ ಇಲಾಖೆಗಳ ಕಚೇರಿಯನ್ನು ಪ್ರಾರಂಭಿಸಲು ಪ್ರಯತ್ನ ನಡೆಸಿದ್ದೇವೆ ಎಂದರು.
ನಗರದ ಸಾರ್ವಜನಿಕರ ಮನೆ ಮಾಲೀಕತ್ವ ದ ಬಗ್ಗೆ ಚರ್ಚಿಸಿದಾಗ ಈಗಾಗಲೇ ಮನೆ ನಿವೇಶನ ಮಾಲೀಕತ್ವ 5 ವರ್ಷ ಮತ್ತು 99 ವರ್ಷದ ಲೀಸ್ನ ಬಗ್ಗೆ ಸೂಕ್ತ ಕ್ರಮ ವಹಿಸುವದಾಗಿ ತಿಳಿಸಿ ಅಲ್ಲಿ ಉಪಸ್ಥಿತರಿದ್ದ ನಗರ ಸಭೆಯ ಪೌರಾಯುಕ್ತರಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಸರಕಾರಕ್ಕೆ ಕಳುಹಿಸಲು ಸೂಚಿಸಿದರು.
ದಾಂಡೇಲಿಯ ಜೈ ಹಿಂದ್ ಸ್ವಾಮಿಲ್ನ್ನು ಪುನಸ್ಚೇತನಗೊಳಿಸಿ ಸುಮಾರು 200 ಜನಕ್ಕೆ ಉದ್ಯೋಗ ಒದಗಿಸಿಕೊಡಲು ಕೇಳಿಕೊಂಡಾಗ ಸರಕಾರದ ಮಟ್ಟದಲ್ಲಿ ಕ್ರಮ ವಹಿಸುವದಾಗಿ ತಿಳಿಸಿದರು.
10 ಹಾಸಿಗೆಯ ಆಯುಷ್ ಆಸ್ಪತ್ರೆಯನ್ನು ಹಳೇ ದಾಂಡೇಲಿಯಲ್ಲಿ ಪ್ರಾರಂಭಿಸಬೇಕು ಎಂದಾಗ ನೀವೇಶನದ ಕೊರತೆಯಿಂದಾಗಿ ಆಗಲಿಲ್ಲ ನಗರ ಸಭೆ ಆಯುಕ್ತರನ್ನು ಕೆರೆಸಿ ಹಳೆ ದಾಂಡೇಲಿಯಲ್ಲಿ ನಿವೇಶನ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಸಚಿವರು ತಿಳಿಸಿದರು. ಕುಡಿಯುವ ನೀರು ಮಲಿನವಾಗುತ್ತಿದೆ ಎಂದು ತಿಳಿಸಿದಾಗ ಆಯುಕ್ತರಿಗೆ ಆದಷ್ಟು ಬೇಗನೆ ಸೂಕ್ತ ಕ್ರಮ ವಹಿಸಬೇಕಾಗಿ ತಿಳಿಸಿದರು. ನಗರ ಯೋಜನಾ ಪ್ರಾಧಿಕಾರ ಕಚೇರಿಯನ್ನು ಪ್ರಾರಂಬಿಸಲು ಕೆಳಿಕೊಂಡಾಗ ಇದರ ಬಗ್ಗೆ ಕ್ರಮ ವಹಿಸುವದಾಗಿ ತಿಳಿಸಿದರು.
ನಗರ ಸಭೆ ಸಿಬ್ಬಂಧಿಯ ಕೊರತೆಯ ಬಗ್ಗೆ ಗಮನ ತಂದಾಗ ಸಚಿವರು ಪೌರಾಯುಕ್ತಕರಿಗೆ ಸಿಬ್ಬಂದಿ ಕೊರತೆಯ ಬಗ್ಗೆ ಮಾಹಿತಿ ಕಳುಹಿಸಲು ತಿಳಿಸಿದರು. ಈ ಹಿಂದೆ ಗೃಹ ಮಂಡಳಿಯವರು ಕಳೆದ ನಾಲ್ಕು ವರ್ಷದ ಹಿಂದೆ ನಿವೇಶನ ನೀಡುತ್ತೇವೆಂದು ಸಾರ್ವಜನಿಕರಿಂದ ಹಣ ಸಂಗ್ರಹಿಸಿಕೊಂಡಿದ್ದರು ಎಂದು ಸಚಿವರ ಗಮನಕ್ಕೆ ತಂದಾಗ ಈಗಾಗಲೇ 12 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದರು.
ಸರಕಾರಿ ಆಸ್ಪತ್ರೆಯನ್ನು ಇನ್ನೂ ವರೆಗೆ ತಾಲೂಕು ಆಸ್ಪತ್ರೆಯನ್ನಾಗಿ ಘೋಷಿಸಲಿಲ್ಲ ಎಂದು ತಿಳಿಸಿದಾಗ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರವಾಣಿಯ ಮೂಲಕ ಆದಷ್ಟು ಬೇಗನೆ ತಾಲೂಕುಯನ್ನಾಗಿ ಘೊಷಣೆ ಮಾಡಲು ಕ್ರಮ ಕೈಗೊಳ್ಳಲು ತಿಳಿಸಿದರು. ದಾಂಡೇಲಿ ಬಸ್ ನಿಲ್ದಾಣದ ನವೀಕರಣ ಕಾಮಗಾರಿಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದಾಗ ಇನ್ನೂ ಬೇಕಾದರೆ ಹಣ ಬಿಡುಗಡೆ ಮಾಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವ್ರದ್ದಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಮ್ ಖಾನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೈಯ್ಯದ ತಂಗಳ, ದಾಂಡೇಲಿ ಸಮಗ್ರ ಅಭಿವ್ರದ್ದಿ ಹೋರಾಟ ಸಮಿತಿಯ ಪಧಾಧಿಕಾರಿಗಳಾದ ಅಶೋಕ ಪಾಟೀಲ, ಆರ್ ವಿ ಗಡೆಪ್ಪನವರ, ಸತೀಶ ನಾಯ್ಕ, ವಿಷ್ಣು ಕಾಮತ, ಸಬಸ್ಥೀನ್ ಡೆಮೆಲ್ಲೋ,ಗವಿಸಿದ್ದಪ್ಪಾ, ಪ್ರೇಮ ಕುಮಾರ, ರಾಜು ಕೋಡಕಣಿ, ಪ್ರೇಮಕುಮಾರ, ಸರಫರಾಜ ಮುಲ್ಲಾ, ಜ್ಯಾಕ್ ಪೆರುಮಾಳ. ಜಿ.ಆರ್ ನಾಯ್ಕ ಇನ್ನು ಅನೇಕ ಸಮಿತಿಯ ಸದಸ್ಯರು ಇದ್ದರು.
Leave a Comment