ಜೋಯಿಡಾ :- ಕಾರವಾರ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕ್ಕೆ ಸಾಗಿಸುವ ಯೋಜನೆಯ ಪ್ರಸ್ತಾಪವನ್ನು ವಿರೋಧಿಸಿರುವ ಕಾಳಿ ಬ್ರೀಗೆಡ್ ಹಾಗೂ ವ್ಯಾಪಾರಿ ಸಂಘದವರು ಜುಲೈ 08 ಸೋಮವಾರದÀಂದು ಜೋಯಿಡಾ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿದೆ ತಾಲೂಕಾ ಬಂದ ನಡೆಸಲು ಕರೆ ನೀಡಿವೆ.
ಜೋಯಿಡಾ ಕುಣಬಿ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮುಖಂಡರುಗಳು ಕಾಳಿ ನದಿ ನೀರಿನ್ನು ಬೇರೆ ಜಿಲ್ಲೆಗೆ ಸಾಗಿಸುವ ಸರಕಾರದ ಮಟ್ಟದಲ್ಲಿ ಯೋಜನೆ ರೂಪಿಸುತ್ತಿರುವ ಪ್ರಯತ್ನಕ್ಕೆ ತೀವೃ ವಿರೋಧ ವ್ಯಕ್ತ ಪಡಿಸಿದ್ದು, ತಾಲೂಕಾ ಬಂದ ಮಾಡುವ ಮೂಲಕ ಎಚ್ಚರಿಕೆ ನೀಡುವುದು ಹಾಗೂ ಮುಂದಿನ ದಿನದಲ್ಲಿ ಅನಿಧಿಷ್ಟಾವಧಿ ಹೋರಾಟ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ.
ಜೋಯಡಾ ತಾಲೂಕಿನೆಲ್ಲೆಡೆ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎಳುತ್ತಿದೆ. ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ನಿರ್ಮಿಸಬೇಕೆನ್ನುವ ಸಾರ್ವಜನಿಕರ ಕೂಗಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವಾಗಿದ್ದು, ಕುಡಿಯುವ ನೀರಿಗಾಗಿ ಸಾರ್ವಜನಿಕರು ಹೋರಾಟಮಾಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ಕಾಳಿ ನೀರನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಕರೆ ತುಂಬಿಸಿ ಕೃಷಿಗೆ ಅನುಕೂಲಮಾಡಿಕೊಳ್ಳಲು ಸರಕಾರದ ಮಟ್ಟದಲ್ಲಿ ಪ್ರಯತ್ನನಡೆಸುತ್ತಿರುವುದನ್ನು ತಾಲೂಕಿನ ಜನತೆ ಉಗ್ರವಾಗಿ ಖಂಡಿಸಿದರು.
ಜೋಯಿಡಾ ತಾಲೂಕಿಗೆ ಕಾಳಿ ಯೋಜನೆಯಿಂದ ಮೊದಲು ಶಾಶ್ವತ ನೀರು ಕೊಡಿ. ಇಲ್ಲಿನ ಬರಡಾಗಿರುವ ಕೃಷಿ ಭೂಮಿಗೆ ನೀರಿನ ಸೌಲಭ್ಯ ಕಲ್ಪಿಸಿ ರೈತರ ಭೂಮಿ ಹಾಗೂ ಕುಟುಂಬವನು ಉಳಿಸಿರಿ ನಂತರ ಬೇರೆ ಕಡೆ ನೀರು ಸಾಗಿಸುವ ಯೋಜನೆ ನಿರ್ಮಿಸಿ ಎಂದು ಹಕ್ಕೋತ್ತಾಯ ಮಾಡುತ್ತಿರುವ ಇಲ್ಲಿನ ಸಂಘಟನೆಗಳು ಕಾಳಿ ನೀರನ್ನು ಉತ್ತರ ಕರ್ನಾಟಕ್ಕೆ ಸಾಗಿಸುವ ಯೋಜನೆಗೆ ಸಭೆಯಲಿ ತೀವೃವಾಗಿ ವಿರೋಧಿಸಿ ವ್ಯಕ್ತವಾಗಿದೆ.
ಈ ಬಗ್ಗೆ ತಾಲೂಕಿನ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಪಕ್ಷಾತೀತ ಸಹಯೋಗದೊಂದಿಗೆ ಬರುವ ಜುಲೈ 8 ರಂದು ಸೋಮವಾರ ಜೋಯಿಡಾ ತಾಲೂಕು ಅಂಗಡಿ ಮುಗ್ಗಟ್ಟುಗಳು, ವ್ಯಾಪಾರಿ ಕೇಂದ್ರಗಳನ್ನು ಬಂದ ಮಾಡಿ ತಾಲೂಕಾ ಕೇಂದ್ರದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನರು ಸೇರಿ ಪ್ರತಿಭಟನೆ ಮಾಡುವ ಮೂಲಕ ಕಾಳಿ ನೀರನ್ನು ಬೇರೆ ಜಿಲ್ಲೆಗೆ ಸಾಗಿಸುವ ಯೋಜನೆಗೆ ನಮ್ಮ ವಿರೋಧವಿದೆ ಎನ್ನುವ ಸಂದೇಶವನ್ನು ಸರಕಾರಕ್ಕೆ ಮುಟ್ಟಿಸುವ ಒಕ್ಕೂರಲಿನ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾಳಿ ಬ್ರೀಗೇಡ್ ಸಂಚಾಲಕ ರವಿ ರೆಡ್ಕರ್, ವ್ಯಾಪಾರಿ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ, ಅತಿಕ್ರಮಣ ಹೋರಾಟ ಸಮೀತಿ ಅಧ್ಯಕ್ಷ ಶ್ರೀಕಾಂತ ಟೆನ್ಸೆ, ಪ್ರಮುಖರಾದ ಉದ್ಯಮಿ ರಫೀಕ್ ಖಾಜಿ, ಗ್ರಾ.ಪಂ. ಉಪಾಧ್ಯಕ್ಷ ಶ್ಯಾಮ ಪೋಕಳೆ, ಬಿ.ಜೆ.ಪಿ. ತಾಲೂಕಾ ಅಧ್ಯಕ್ಷ ತುಕಾರಾಮ ಮಾಂಜ್ರೇಕರ್, ಅಜಿತ ಟೆಂಗ್ಸೆ, ನಾರಾಯಣ ಹೆಬ್ಬಾರ, ಸತೀಶ್ ದೇಸಾಯಿ ಇದ್ದರು.
Leave a Comment