ಹೊನ್ನಾವರ: ಕರ್ನಾಟಕ ಕ್ರಾಂತಿರಂಗ, ಹೊನ್ನಾವರ ಘಟಕ, ಮತ್ತು’ಯಕ್ಷರಂಗ’ ಮಾಸ ಪತ್ರಿಕೆ, ಕಡತೋಕಾ, ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಧರ ಡಿ.ಎಸ್ ಇವರು ಬರೆದ ಪ್ರಸಂಗ “ಭೃಗು ಶಾಪ” ತಾಳಮದ್ದಲೆ ಕಾರ್ಯಕ್ರಮ ನಮ್ಮನೆ, ಕರ್ನಾಟಕ ಕ್ರಾಂತಿರಂಗ ಕಾರ್ಯಾಲಯ, ಫಾರೆಸ್ಟ್ ಕಾಲೊನಿ, ಪ್ರಭಾತನಗರದಲ್ಲಿ ಜೂ. 07 ರಂದು ರವಿವಾರ. ಸಂಜೆ 4ಗಂಟೆಯಿಂದ 6-30 ರವರೆಗೆ ಆಯೋಜಿಸಲಾಗಿದೆ.
ಹಿಮ್ಮೇಳ ಭಾಗವತರು ಗೋಪಾಲಕೃಷ್ಣ ಎಂ. ಭಾಗವತ, ಕಡತೋಕಾ ಮತ್ತು ಗಣೇಶ ಯಾಜಿ, ಇಡಗುಂಜಿ. ಮದ್ದಳೆ ಶ್ರೀಪಾದ ಭಟ್ಟ, ಕಡತೋಕಾ ಮತ್ತು ಪಿ.ಕೆ.ಹೆಗಡೆ, ಹರಿಕೇರಿ
ಪಾತ್ರಧಾರಿಗಳು ದೇವೇಂದ್ರ : ಡಾ. ವಿದ್ವಾನ್ ವಿನಾಯಕ ಭಟ್ಟ, ಗಾಳಿಮನೆ, ಮೂಡಬಿದ್ರೆ, ಖ್ಯಾತಿದೇವೀ ಶ್ರೀ ರಜನೀಶ ಹೊಳ್ಳ, ಕೆಂಪಿನಮಕ್ಕಿ. ತಮಾಸುರ : ಪ್ರಶಾಂತಕುಮಾರ ಎ. ಭೃಗು ಮಹರ್ಷಿ : ಸುನೀಲಕುಮಾರ, ಹೊಲಾಡು,
ವಿಷ್ಣು : ವೆಂಕಟರಮಣ ಕೆರೆಗದ್ದೆ, (ಎಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳು)
ಡಾ. ಎಸ್. ಡಿ. ಹೆಗಡೆ, ಮತ್ತು ಶ್ರೀ ಗೋಪಾಲಕೃಷ್ಣ ಭಾಗವತ “ಯಕ್ಷರಂಗ” ಮತ್ತು ಕರ್ನಾಟಕ ಕ್ರಾಂತಿರಂಗದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment