ಹೊನ್ನಾವರ : ಇಲ್ಲಿಯ ಲಯನ್ಸ್ ಕ್ಲಬ್ ಸನ್ 2019-20 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪ್ರಭಾತನಗರ ಲಯನ್ಸ್ ಸಭಾಭವನದಲ್ಲಿ ನಡೆಯಿತು.
ಸಿವಿಲ್ ಇಂಜಿನಿಯರ್ ಶ್ರೀಕಾಂತ ಆರ್. ಹೆಗಡೆಕರ ಅಧ್ಯಕ್ಷರಾಗಿ, ನಿವೃತ್ತ ಪ್ರಾಚಾರ್ಯ ಡಾ| ಎ. ವಿ. ಶ್ಯಾನಭಾಗ ಕಾರ್ಯದರ್ಶಿಯಾಗಿ, ಉದ್ಯಮಿ ಸಂತೋಷ ವಿ. ನಾಯ್ಕ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.
ಲಯನ್ಸ್ ಸ್ಕೂಲ ಹಾಗೂ ಟ್ರೇನಿಂಗ್ ಮುಖ್ಯ ಸಂಯೋಜಕರಾದ ಎಂ.ಜೆ.ಎಫ್. ಲಯನ್ ಡಾ|| ಎಂ.ಕೆ.ಭಟ್ಟ ಸೊರಬ ಅವರು ಪದಾಧಿಕಾರಿಗಳಿಗೆ ವಿದ್ಯುಕ್ತವಾಗಿ ಪ್ರತಿಜ್ಞಾ ವಿಧಿ ಬೋಧಿಸಿ ಸಲಹೆ ಸೂಚನೆ ನೀಡಿದರು.
ನಂತರ ಅವರು ಮಾತನಾಡಿ ಹೊನ್ನಾವರ ಲಯನ್ಸ್ ಕ್ಲಬ್ ಕಳೆದ ವರ್ಷದ ಹಲವು ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ದಲ್ಲಿ ಸದಸ್ಯನಾಗಿರುವುದೇ ಹೆಮ್ಮೆ ಮತ್ತು ಗೌರವಯುತವಾದದು. ಲಯನ್ಸ್ ಮೂಲ ಉದ್ದೇಶವೇ ಸೇವೆ. ಪ್ರತಿಯೊಬ್ಬ ಲಯನ್ಸ್ ಸದಸ್ಯನ ಸೇವೆ ಸಮಾಜಕ್ಕೆ ಕೊಡುಗೆಯಾಗಿರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕರಾದ ಡಾ|| ಎಂ. ಆರ್. ನಾಯ್ಕ ಮಾತನಾಡಿ ಮಾನವ ಧರ್ಮ, ಮಾನವ ಕರ್ತವ್ಯ ಸಾಮಾಜಿಕ ಹೊಣೆ ಮೌಲ್ಯಗಳ ಕುರಿತು ಮಾತನಾಡುತ್ತ ಲಯನ್ಸ್ ಕ್ಲಬ್ಬಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕುಮಾರಿ ಸಂಜನಾ ನಾಯ್ಕ ಪ್ರಾರ್ಥಿಸಿದರು. ಎನ್.ಜಿ.ಭಟ್ಟ ಧ್ವಜ ವಂದನೆ ಮಾಡಿದರು. ನಿಕಟಪೂರ್ವ ಅಧ್ಯಕ್ಷ ರಾಜೇಶ ಸಾಲೆಹಿತ್ತಲ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸುರೇಶ ಎಸ್. ಸೇವಾಕಾರ್ಯಗಳ ವರದಿ ಓದಿದರು. ಜೆ.ಎಂ. ನಾಯಕ, ಡಿ.ಎಲ್. ಹೆಬ್ಬಾರ್ ಪರಿಚಯಿಸಿದರು.
ನೂತನ ಅಧ್ಯಕ್ಷ ಶ್ರೀಕಾಂತ ಹೆಗಡೆಕರ ಮುಂದಿನ ವರ್ಷದ ಸೇವಾ ಕಾರ್ಯಗಳ ವಿವರ ತಿಳಿಸಿದರು. ನೂತನ ಕಾರ್ಯದರ್ಶಿ ಡಾ|| ಎ.ವಿ.ಶ್ಯಾನಭಾಗ ವಂದಿಸಿದರು. ಎಸ್.ಜೆ. ಕೈರನ್ ಮತ್ತು ಉದಯ ನಾಯ್ಕ ನಿರೂಪಿಸಿದರು.
Leave a Comment